Wednesday, June 22, 2011

ಎ ಕೆ ರಾಮಾನುಜನ್ ಸಮಗ್ರ



ಎಸ್. ದಿವಾಕರ್ ಅವರ ಮುನ್ನುಡಿಯಿಂದ ಆಯ್ದ ಭಾಗ

ಇದು ರಾಮಾನುಜನ್ ರ ಕನ್ನಡ ಕೃತಿಗಳ ಸಮಗ್ರ ಸಂಪುಟ . ಅವರ ಮೂರು ಕವನ ಸಂಕಲನಗಳು , ಒಂದು ಕಾದಂಬರಿ, ನಾಲ್ಕು ಸಣ್ಣ ಕತೆಗಳು, ಎರಡು ರೇಡಿಯೋ ನಾಟಕಗಳು, ಗಾದೆಗಳನ್ನು ಕುರಿತ ಕಿರು ಹೊತ್ತಿಗೆ, ಎಲ್ಲವೂ ಇಲ್ಲಿವೆ. ‘ನಡೆದು ಬಂದ ದಾರಿ’ ಗ್ರಂಥದಲ್ಲೂ ‘ಸಾಕ್ಷಿ’ ಪತ್ರಿಕೆಯಲ್ಲೂ ಪ್ರಕಟವಾಗಿರುವ ಕೆಲವು ಕವನಗಳೂ ಕಳೆದ ಶತಮಾನದ ಐವತ್ತರ ದಶಕದಲ್ಲಿ ಅವರು ‘ಕೊರವಂಜಿ’ ಪತ್ರಿಕೆಯಲ್ಲಿ ಬರೆದ ಕೆಲವು ನಗೆ ಬರಹಗಳೂ ಇಲ್ಲಿ ಸೇರಿವೆ. ಬಹುಶಃ ರಾಮಾನುಜನ್ ರ ಮೊದಲ ಪ್ರಯತ್ನಗಳಾಗಿರಬಹುದಾದ ಈ ನಗೆ ಬರಹಗಳ ಓದು ಅವರ ಸೃಜನಶೀಲತೆಯ ವಿಕಾಸವನ್ನರಿಯಲು ಸಹಾಯಕವಾದೀತೆಂದು ಭಾವಿಸಿದ್ದೇನೆ . ಜೊತೆಗೆ ಈ ಸಂಕಲನದ ಕಡೆಯ ಭಾಗದಲ್ಲಿರುವುದು ರಾಮಾನುಜನ್ ಬಿಟ್ಟು ಹೋಗಿರುವ ಹಸ್ತ ಪ್ರತಿಯ ಒಂದು ಕಟ್ಟು .

ಇದರಲ್ಲಿ ಕೆಲವು ಕವನಗಳು , ನಗೆ ಬರಹಗಳು, ಕಾದಂಬರಿಯೊಂದಕ್ಕಾಗಿ ಮಾಡಿಕೊಂಡ ಟಿಪ್ಪಣಿಗಳು , ಹೀಗೆ ಬಗೆಬಗೆಯ ಬರಹ ತಮ್ಮ ಅಪೂರ್ಣ ಸ್ಥಿತಿಯಲ್ಲಿವೆ . ರಾಮಾನುಜನ್ ಬದುಕಿದ್ದಾಗ ಅವರ ಸಾಹಿತ್ಯಕ್ಕೆ ನಿಜಕ್ಕೂ ಸಲ್ಲಬೇಕಾದ ವಿಮರ್ಶಾ ಮನ್ನಣೆ ಸಲ್ಲಲೇ ಇಲ್ಲ . ಅವರ ಕಾವ್ಯದ ಬಗ್ಗೆ ಅಲ್ಲೊಂದು ಇಲ್ಲೊಂದು ಲೇಖನ ಬಿಟ್ಟರೆ ಇತರ ಕೃತಿಗಳ ಬಗ್ಗೆ ಚರ್ಚೆಯಾದದ್ದೇ ಅಪರೂಪ . ಈ ಸಮಗ್ರ ಸಂಪುಟದ ಪ್ರಕಟಣೆ ಅವರ ಒಟ್ಟು ಸಾಹಿತ್ಯದ ಮರು ಓದಿಗೆ , ವಿಸ್ತೃತ ಚರ್ಚೆಗೆ , ಅಧ್ಯಯನಕ್ಕೆ , ವಿಮರ್ಶೆಗೆ ದಾರಿ ಮಾಡಬಹುದೆಂಬ ಆಶಯ ನನ್ನದು .

ರಾಮಾನುಜನ್ನರ ಬಿಡಿ ಕೃತಿಗಳನ್ನು ಪ್ರಕಟಿಸಿದ ಮನೋಹರ ಗ್ರಂಥ ಮಾಲೆಯೇ ಈ ಸಮಗ್ರ ಸಂಪುಟವನ್ನೂ ಪ್ರಕಟಿಸುತ್ತಿರುವುದು ಅರ್ಥಪೂರ್ಣ. ಇದರ ಸಂಪಾದನೆಯನ್ನು ನನಗೇ ವಹಿಸಿಕೊಟ್ಟ ಶ್ರೀ ರಮಾಕಾಂತ ಜೋಶಿಯವರ ವಿಶ್ವಾಸ ದೊಡ್ಡದು. ಅವರಿಗೂ ,ರಾಮಾನುಜನ್ನರ ‘ಕೊರವಂಜಿಯ’ ಬರಹಗಳನ್ನು ಒದಗಿಸಿಕೊಟ್ಟ ಶ್ರೀ ಎಂ.ಶಿವಕುಮಾರ್ ಅವರಿಗೂ ನಾನು ಕೃತಜ್ಞ .

‘ರಾಷ್ಟ್ರೀಯತೆ’ ಕುರಿತು ಚರ್ಚೆ

ಮೈಸೂರಿನ ಚಿಂತನ ಚಿತ್ತಾರದಲ್ಲಿ.....


Monday, June 20, 2011

'ಚಳಿಗಾಲದ ಎಲೆ ಸಾಲು'' ಕವನ ಸಂಕಲನ ಬಿಡುಗಡೆ



chaligala cover page.jpg


ಎಸ್.ಕುಮಾರ್ ಎರಡು ಕವಿತೆಗಳು


ಎಸ್ ಕುಮಾರ್ ಅವರ ಪ್ರಥಮ ಸಂಕಲನ ಚಳಿಗಾಲದ ಎಲೆ ಸಾಲು ಬರುತ್ತಿರುವ ಸಂದರ್ಭದಲ್ಲಿ ಸಂಕಲನದ ಎರಡು ಕವಿತೆಗಳು ನಿಮಗಾಗಿ


ಸಂಜೆಗತ್ತಲ ಹಾಡು

ನೆರಳು ಬಿಡಿಸಿಕೊಂಡಾಗಿದೆ
ಕನಸುಗಳ ಮಾತೆಲ್ಲಿ?
ಮಾತು ತರಗೆಲೆ
ಹಿಡಿದು ಪ್ರಯೋಜನವಿಲ್ಲದೆಯೆ
ಪಾಲೋ ಕಾವೋ, ಖಲೀಲ್ ಗಿಬ್ರಾನ್
ಕಡೆಗೆ…
ರಾಬಿನ್ ಶಮರ್ಾನ
ಫೆರಾರಿ ಕೂಡ
ಬೀದಿ ದೀಪದ ಸಾಲಿನಲ್ಲಿ…

ಸಿಗರೇಟಿನ ಬೂದಿ ಜತೆ
ಕೊಡವಿದರೆ ಬೇಸರ ಬೀದಿಗೆ
ಸಿಗ್ನಲ್ಲಿನ ಕೆಂಪು ದೀಪ
ದಾರಿಗೆ!

ಕಾಫಿ ಡೇ ಎದುರು
ಚಹಾ ಮಾರುವ
ಹುಡುಗನಿಗೆ ಕಂಡಿದ್ದು
ಶಾಪಿಂಗ್ ಮಾಲ್
ಹುಡುಗಿಯರ ಸೊಂಟ,
ತನ್ನೂರ ಹುಡುಗಿಯರ
ಕೊಡಪಾನದ ನೆನಪು…

ರಾತ್ರೋರಾತ್ರಿ
ಕಂಪ್ಯೂಟರ್ ಪರದೆ
-ಯಿಂದ
ಎದ್ದು ಬಂದ
ಯಾರದ್ದೋ ಫ್ರೆಂಡ್ ರಿಕ್ವೆಸ್ಟ್…
ಈ ಮೇಲು
ಫೀಮೇಲು
ಆಮೇಲಾಮೇಲೆ
ಮೇಲೆ.. ಮೇಲೆ..
ಲೆ…
ಲೆ…
ಎಂದ ಮೇಷ್ಟ್ರು ಕೂಡ
ಕಣ್ಣ ಮುಂದೆ..
*
ಲಜ್ಜೆಗೇಡಿ ಸಂಜೆ
ಬೇಡದ ಚಿತ್ರಗಳು
ಯಾರದ್ದೋ ಪುಳಕದ ನಗು
ಮೂಲೆಯಲ್ಲಿ ಸೆಳಕಿನ ಬಿಗು
ಮನೆ ದಾರಿಯಲ್ಲಿ

ಧ್ಯಾನ ಮೌನ
ಬುದ್ಧ, ತಾವೋ..
ಮೂರು ಮುಕ್ಕಾಲು ಕೋಟಿ
ದೇವರುಗಳೆಲ್ಲಾ
ಊರು ದಾರಿಯಲ್ಲಿ

ಒಳಗೊಳಗೆ ಒದ್ದಾಟ
ಸುಖಾಸುಮ್ಮನೆ ಸಂಕಟ

ಕಂಡರೆ ಕೈ ಮುಗಿಯಿರಿ…

ಕ್ಷಮಿಸುವ ಭಗವಂತನ
ಕೈಯೂ ರಕ್ತವಾಗಿದೆ
ಅವನಿಗೂ ಕಾಡುತ್ತಿರಬಹುದು ಪಾಪಪ್ರಜ್ಞೆ.

ಗರ್ಭಗುಡಿ ಮಂದ ಬೆಳಕು,
ಸೂತಕದ ಮನೆ ಹಣತೆಯ ಹಾಗೆ
ಕಂಡಿದೆಯಂತೆ ಅವಗೆ

ಕಣ್ಣುಜ್ಜಿಕೊಂಡಾಗಲೆಲ್ಲ
ಗಪ್ಪನಡುರುವ ರಕ್ತದ ವಾಸನೆ
ಮೂಗಿಗೆ ಮಾತ್ರವಲ್ಲ!

ಭಕ್ತರು ನೂರು ಮಂದಿ
ನೆರೆದು ನಿಂತರೆ
ತತ್ತರಿಸಿ ದುಃಸ್ವಪ್ನ
ಕಂಡಂತೆ ನಡುಗು

ಊರ ಬೀರನು, ಸಾಬರ ಪೀರನು
ಕೂಡಿ ಆಡುತ್ತಿದ್ದರೆ,
ದೇಗುಲದ ಕಟ್ಟೆ ಮೇಲೆ
ಅವನು ಅನಾಥ

ಗಂಟೆ ನಾದ ಮೀರಿದೆ
ಮದ್ದು ಗುಂಡುಗಳ ಸದ್ದು,
ಶಂಖನಾದ ಸೀಳಿದ ಆಕ್ರಂದನ,
ಗುಡಿಯ ಒಳಗೆಲ್ಲಾ ಮಾರ್ದನಿಸಿ ಆಕ್ರೋಶ

*
ಅಮಲುಗತ್ತಲು, ಬರೀ ಮಂತ್ರಗಳು
ಏನೂ ಕೇಳದೆ,
ಜಗದಲ್ಲೇನುಗುತ್ತದೆ ತಿಳಿಯದೆ
ಮೂಡನಾಗಿಹನೆಂದು ಊರಾಚೆ
ಬೆಟ್ಟದ ಮೇಲೆ ಕೂತಿಹನಂತೆ…
ಕಂಡರೆ ಕೈ ಮುಗಿದು
ಅಲ್ಲಿಂದಲೂ ಕಳಿಸಿಕೊಟ್ಟು ಬಿಡಿ..

Sunday, June 5, 2011

೨೦೧೧ ರ ವಿಭಾ ಸಾಹಿತ್ಯ ಪ್ರಶಸ್ತಿಗಾಗಿ ಕವನಗಳ ಆಹ್ವಾನ




PÀ£ÀßqÀ PÀªÀAiÀÄwæ «¨sÁ CªÀgÀ £É£À¦£À°è '«¨sÁ ¸Á»vÀå ¥Àæ±À¹Û-2011' PÁÌV PÀ£ÀßqÀzÀ PÀ«UÀ½AzÀ ªÀÄƪÀvÀÛPÀÆÌ ºÉZÀÄÑ PÀ«vÉUÀ½gÀĪÀ ºÀ¸ÀÛ¥ÀæwAiÀÄ£ÀÄß DºÁ餸À¯ÁVzÉ. F ¥Àæ±À¹ÛAiÀÄÄ gÀÆ. 5000/- £ÀUÀzÀÄ ªÀÄvÀÄÛ ¥Àæ±À¹Û ¥sÀ®PÀªÀ£ÀÄß M¼ÀUÉÆArzÉ. AiÀiÁªÀÅzÉà PÁgÀtPÀÆÌ ºÀ¸ÀÛ¥ÀæwAiÀÄ£ÀÄß »AwgÀÄV¸À¯ÁUÀĪÀ¢®è. ¥Àæ±À¹Û «eÉÃvÀ ºÀ¸ÀÛ¥ÀæwAiÀÄ£ÀÄß UÀzÀUÀzÀ ®qÁ¬Ä ¥ÀæPÁ±À£À¢AzÀ ¥ÀæPÀn¸À¯ÁUÀĪÀzÀÄ. ºÀ¸ÀÛ¥Àæw PÀ¼ÀÄ»¸À®Ä PÉÆ£ÉAiÀÄ ¢£ÁAPÀ; dįÉÊ 25.


«¼Á¸À:
¸ÀÄ£ÀAzÁ ªÀÄvÀÄÛ ¥ÀæPÁ±À PÀqÀªÉÄ,
90, £ÁUÀ¸ÀÄzsÉ, 6/©, PÁ½zÁ¸À£ÀUÀgÀ.
«zÁå£ÀUÀgÀ «¸ÀÛgÀuÉ, ºÀħâ½î-580031
¸É¯ï: 9845779387