Friday, September 16, 2011

ವಿಭಾ ಸಾಹಿತ್ಯ ಪ್ರಶಸ್ತಿ ಚನ್ನಪ್ಪ ಅಂಗಡಿ ಅವರ ಭೂಮಿ ತಿರುಗುವ ಶಬ್ದಕ್ಕೆ



Channappa Angadi.jpg ಪ್ರಸಕ್ತ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಚನ್ನಪ್ಪ ಅಂಗಡಿ ಅವರ ಭೂಮಿ ತಿರುಗುವ ಶಬ್ದ ಅನ್ನುವ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ .. ಖ್ಯಾತ ಕವಿ ಎಸ್ . ಜಿ ಸಿದ್ದರಾಮಯ್ಯ ವಿಮರ್ಶಕಿ ಎಂ . ಎಸ್ ಆಶಾದೇವಿ ತೀರ್ಪುಗಾರರಾಗಿದ್ದರು ..ಧಾರವಾಡದವರಾದ ಚನ್ನಪ್ಪ ಅಂಗಡಿ ಅವರು ಕವಿಯಾಗಿ , ಕತೆಗಾರರಾಗಿ ಬೆಳಕಿಗೆ ಬಂದವರು . ಈಗಾಗಲೇ ಮಂದ ಬೆಳಕಿನ ಸಾಂತ್ವನ ಎಂಬ ಕವನ ಸಂಕಲನ ಮಣ್ಣಿನೊಳಗಣ ಮರ್ಮ ಕಥಾ ಸಂಕಲನ ಪ್ರಕಟವಾಗಿದೆ

»ÃUÉ §ºÀĪÀÄÄR ¥Àæw¨sÉAiÀÄ PÀ« ZÀ£ÀߥÀà CAUÀr AiÀĪÀjUÉ E¢ÃUÀ zÉÆgÉvÀ '«¨sÁ ¸Á»vÀå ¸ÀàzsÉð' AiÀÄ ¥ÀÄgÀ¸ÁÌgÀªÀÅ gÀÆ. 5000/- £ÀUÀzÀÄ §ºÀĪÀiÁ£À ºÁUÀÆ ºÀ¸ÀÛ¥ÀæwAiÀÄ ¸ÀAPÀ®£À ¥ÀæPÀluÉ ªÀÄvÀÄÛ ¥Àæ±À¹Û ¥sÀ®PÀªÀ£ÀÄß M¼ÀUÉÆArzÉ. CPÉÆÖçgÀ PÉÆ£ÉAiÀÄ ªÁgÀ, zsÁgÀªÁqÀzÀ°è F ¥Àæ±À¹Û ¥ÀæzsÁ£À ¸ÀªÀiÁgÀA¨sÀªÀ£ÀÄß £ÉgÀªÉÃj¸À¯ÁUÀĪÀÅzÀÄ.

Wednesday, September 14, 2011

ನಮ್ಮ ಹೊಸ ಪುಸ್ತಕಗಳು


ನಮ್ಮ ಪ್ರಕಾಶನದಿಂದ ೩ ಹೊಸ ಪುಸ್ತಕಗಳು ಬಂದಿವೆ . ಇದೆ ತಿಂಗಳು ೧೧ ರಂದು ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಜಗದೀಶ್ ಕೊಪ್ಪ ಈ ಪುಸ್ತಕಗಳನ್ನು ಬಿಡುಗಡೆ ಮಾಡಿದರು .. ಪಿ . ಸಾಯಿನಾಥ್ ಅವರ ಅಸಮಾನತೆಯ ಜಾಗತೀಕರಣ , ಡಾ . ಬಿ .ಆರ್ . ಅಂಬೇಡ್ಕರ್ ಅವರ ಭಗವದ್ಗೀತೆ ವಿರುದ್ದ ಬೌದ್ದ ತತ್ವ , ಡಿ . ಡಿ ಕೊಸಾಂಬಿ ಅವರ ಭಗವದ್ಗೀತೆ : ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ. ಈ ೩ ಪುಸ್ತಕಗಳ ಬೆಲೆ ತಲಾ ೧೫ . ಒಟ್ಟು ರೂ ೪೫ ಆಸಕ್ತರು ಸಂಪರ್ಕಿಸಿ . ವಿಳಾಸ : ಪ್ರಕಾಶಕರು ಲಡಾಯಿ ಪ್ರಕಾಶನ , ೨೧ ಪ್ರಸಾದ ಹಾಸ್ಟೆಲ್ ಗದಗ . ಸೆಲ್ ೯೪೮೦೨೮೬೮೪೪







Wednesday, August 31, 2011

‘ಹಳದಿ ಚಿಟ್ಟೆ’ಗೆ ಲಲಿತಾ ಸಿದ್ಧಬಸವಯ್ಯ ಅವರ ಟಿಪ್ಪಣಿ



ಇದು ಹಿರಿಯ ಗಮನಾರ್ಹ ಕವಿ ಆರ್ ವಿಜಯರಾಘವನ್ ಅವರ ಹೊಸ ಕವಿತಾ ಸಂಕಲನ ‘ಹಳದಿ ಚಿಟ್ಟೆ’ಬಗ್ಗೆ ಲಲಿತಾ ಸಿದ್ಧಬಸವಯ್ಯ ಅವರು ಬರೆದ ಟಿಪ್ಪಣಿ.

-ಲಲಿತಾ ಸಿದ್ಧಬಸವಯ್ಯ.

`ಹಳದಿ ಚಿಟ್ಟೆ’ ಮತ್ತು `ಪೀನಿ ಹೂ ‘ ಎರಡನ್ನು ಓದಿದೆ. `ಪೀನಿ ಹೂ ‘ ಹೆಚ್ಚು ನಿಗದ ಓದನ್ನು ಡಿಮ್ಯಾಂಡ್ ಮಾಡುವ ಪುಸ್ತಕ. ನಾನಿದನ್ನು ಮತ್ತೆ ಓದಬೇಕಾಗಿದೆ, ನನಗೆ ದಕ್ಕಲು. ಬೇರೆ ನೆಲದಿಂದ ಕಿತ್ತು ತಂದ ಗಿಡವನ್ನು ಹೊಸ ಮಣ್ಣಿಗೆ ಹೊಂದಿಸಲು ವಿಶೇಷ ಗಮನ ಕೊಡುವ ಹಾಗೆ ಅನುವಾದಗಳನ್ನು ಅವಕ್ಕೆ ಸಲ್ಲಬೇಕಾದ ಮಯರ್ಾದೆಯೊಂದಿಗೇ ಓದಬೇಕು, ಸದರ ವಹಿಸುವಂತಿಲ್ಲ ! ಇದರಲ್ಲಿ ಕೆಲವನ್ನು ಅನಿಕೇತನದಲ್ಲಿ ಓದಿದ್ದೆ. ಅನುವಾದದ ದಿಗ್ಗಜ ಎನಿಸಿಕೊಂಡಿರುವ ನಿಮ್ಮ ಈ ಕೆಲಸದ ಬಗ್ಗೆ ಆತುರವಾಗಿ ಏನನ್ನಾದರೂ ಹೇಳಹೊರಡುವುದು ಅನುಚಿತವಾದೀತು.
ಹಳದಿ ಚಿಟ್ಟೆ , ಬಹು ದಿನದ ನಂತರ ಒಂದಕ್ಷರ ಬಿಡದೆ ಓದಿದ ಪುಸ್ತಕ. ಇದರ ಎಲ್ಲ ಪದ್ಯಗಳನ್ನೂಆಸಕ್ತಿಯಿಂದ ಓದಿ ಮುಗಿಸಿದೆ. ಸಂಕಲನದ ಅನೇಕ ಪದ್ಯಗಳು ಇಷ್ಟವಾದವು. ಒಂದು ಬರಹ ನಮಗೆ ಇಷ್ಟವಾಗುವುದಕ್ಕೆ ನಮ್ಮೊಳಗಿನ ಮಾನಸಿಕ ಸಂರಚನೆಯೇ ಕಾರಣವಿರಬೇಕು. ಅದಕ್ಕೆ ರುಚಿಸುವುದನ್ನು ಅದು ತಕ್ಷಣ ಒಪ್ಪಿಕೊಳ್ಳುತ್ತದೆ. ನನಗೆ ಸಂಕಲನದ ಇನ್ ಬಾಕ್ಸುಗಳು, ಸಂದಿಗ್ಧ, ಹಾರುತ್ತ ಬಂದಿಳಿದ ಹಕ್ಕಿ, ಅಜ್ಜಿಗೆ ಏಕೆ ದುಃಖವಾಗಿಲ್ಲ, ಹಬ್ಬದ ದಿನ, ರಾಮಚಂದ್ರರ ನೆನಪು, ಹೊಸಮನೆ ಕಪ್ಪೆ……., ಇಪ್ಪತ್ತೈದು ವರ್ಷದ ಹಿಂದಣ ಯಾತ್ರೆ, ಎರಡು ಹಕ್ಕಿಗಳು, ವಿಲ್ ಬರೆದ ದಿನ, ಹಬ್ಬದ ದಿನದ ತಾಯಿ, ಸೂಳೆಮನೆ, ಒಳಗಿಂದ ಒಂದು ನಿಃಶ್ವಾಸ…, ಧರ್ಮ ಚಕ್ರ, ವೃದ್ಧಾಶ್ರಮದಲ್ಲಿ , ಆಸ್ಪತ್ರೆಯ ಮುಂದೊಷ್ಟು ಜನ, ಈ ಪದ್ಯಗಳು ಬಹಳ ಇಷ್ಟವಾದುವು.
ಇವೇ ಯಾಕಿಷ್ಟ ಎಂದುಕೊಂಡರೆ ನಾನೂ ಹೀಗೆ ದಿನನಿತ್ಯಗಳನ್ನೆ ಪದ್ಯವಾಗಿಸುವುದು ಹೆಚ್ಚು! ಮತ್ತು ಅದಕ್ಕಿಂತ ಮುಖ್ಯವಾದದ್ದು ಕವಿಯಾಗಿ ಗೆಲ್ಲುವುದು ನೀವು ಈ ಪದ್ಯಗಳಲ್ಲೆ ಎಂದು ನನ್ನ ಎಣಿಕೆ. ಚಿಕ್ಕ ಸಂಗತಿಗಳು, ಘಟನೆಗಳು, ಹಠಾತ್ತನೆ ಹೊಳೆದ ಒಂದು ಭಾವ, ಒಂದು ಭೇಟಿ ಇಂಥವುಗಳನ್ನು ನೀವು ಪದಗಳಲ್ಲಿ ಚಿತ್ರವತ್ತಾಗಿ ಕಟ್ಟಿಕೊಡಬಲ್ಲಿರಿ. ಅವುಗಳೊಳಗಿನ ನಾಟಕೀಯತೆ ಗುಣದಿಂದಾಗಿ ಅವು ನಮ್ಮೊಳಗೆ ಮರು ನಿಮರ್ಾಣವಾಗುತ್ತವೆ. ಈ ನಿಮರ್ಿತಿಯ ನಿಮರ್ಿತಿಯೇ ಆ ಪದ್ಯವನ್ನು ನಮಗೆ ಇಷ್ಟಗೊಳಿಸುತ್ತದೆಯೆಂದು ತೋರುತ್ತದೆ. ಹೀಗೆ ನನ್ನೊಳಗೆ ಇಳಿದು ಸಂವಹನವನ್ನು ಪ್ರಫéುಲ್ಲಗೊಳಿಸಿದ ಮೇಲಿನ ಪದ್ಯಗಳಲ್ಲೆಲ್ಲ ಹಬ್ಬದ ದಿನದ ತಾಯಿ ಮತ್ತು ವೃದ್ಧಾಶ್ರಮ ನನಗೆ ವಿಶೇಷ ಇಷ್ಟವಾದುವು. ಈ ಪದ್ಯಗಳನ್ನು ನಾನು ಮತ್ತೆ ಮತ್ತೆ ಓದಿದೆ.
ದಡವಿಲ್ಲದ ಸಾಗರ, ಸಮತಾಳಿಗೊಂದು, ನೆಯಿಗೆ, ಮಾಯದ ಮೋಡಿ, ನೀರುಕುಡಿಯಲು ಬಂದ ನಾಯಿ ಇವು ಬುದ್ಧಿಯ ಕೈ ಮೇಲಾದ ರಚನೆಗಳಾದರೂ ಅವುಗಳ ತಾಕರ್ಿಕತೆಯಿಂದ ಸೆಳೆಯುತ್ತವೆ.
ಪದ್ಯಗಳಲ್ಲಿ ನನಗೆ ಪ್ರಿಯವಾದ ಸಾಲುಗಳನ್ನು ಅಪರೂಪ ಎನಿಸಿದ ರೂಪಕಗಳನ್ನು( ಉದಾ; ಮೊದಲು ಕೊಳಕ್ಕೆ ಕಲ್ಲು ಬೀರಿ ಬಿಂಬ ಹುಡುಕಲು ಬಳಿಕ ಯತ್ನಿಸುವುದು, ಹಕ್ಕಿ ಕೂಗಿಗೂ ಮೊದಲೆ ತಾವು ಸೇರಿ ತನ್ನ ಕೊರಳಿಗೆ ತಾನೇ ಕೇಳುಗನಾಗುವುದು ) ಗುರುತು ಮಾಡಿದ್ದೇನೆ. ಇದು ಮೊದಲ ಓದಿನ ನನ್ನ ಅನಿಸಿಕೆ.
ಕನ್ನಡ ಬರಹ ಕ್ಷೇತ್ರದಲ್ಲಿ ಎಲ್ಲ ರೀತಿಯಲ್ಲು ಗಟ್ಟಿನೆಲೆಯಲ್ಲಿ ಗುರುತಿಸಿಕೊಂಡಿರುವ ನೀವು ನನಗೆಪುಸ್ತಕ ಕಳುಹಿಸಿ ನನ್ನಿಂದ ಅಭಿಪ್ರಾಯ ಕೇಳಿದ್ದಕ್ಕೆ ನಾನು ಆಭಾರಿ.

Tuesday, August 16, 2011

`ನನ್ನ ಮೆಚ್ಚಿನ ಪುಸ್ತಕ': ಮತ್ತೆ ಬರಲಿವೆ ಸಾಲು ಸಾಲು ಪುಸ್ತಕ

ಪುಸ್ತಕ ಪ್ರೇಮಿಗಳಿಗೆ ಸಿಹಿ ಸುದ್ದಿಯ ಸಿಂಚನ. ಕನ್ನಡದ ಹಲವು ಹಿರಿಯ ಸಾಹಿತಿಗಳ ಸಮಗ್ರ ಗದ್ಯ, ನಾಟಕಗಳು ಇನ್ನು ಕೆಲವೇ ದಿನಗಳಲ್ಲಿ ಪುಸ್ತಕದ ಅಂಗಡಿಗಳಲ್ಲಿ ದೊರೆಯಲಿವೆ. ಅಲ್ಲದೆ, ಕನ್ನಡ ಪುಸ್ತಕಗಳ ಕುರಿತು ಅಭಿರುಚಿ ಮೂಡಿಸುವ ಉದ್ದೇಶದಿಂದ `ನನ್ನ ಮೆಚ್ಚಿನ ಪುಸ್ತಕ` ಉಪನ್ಯಾಸ ಮಾಲೆ ಬೆಂಗಳೂರಿನ ಆಯ್ದ ಕಾಲೇಜುಗಳಲ್ಲಿ ಆರಂಭವಾಗಲಿದೆ
ಕನ್ನಡದ ಖ್ಯಾತ ಸಾಹಿತಿಗಳ ಆಯ್ದ ಕೃತಿಗಳನ್ನು ಬ್ರೈಲ್ ಲಿಪಿಗೆ ಅಳವಡಿಸುವ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವದ ಕಾರ್ಯ ಮುಗಿದಿದ್ದು ಇದೇ 26ರಂದು 15 ಪುಸ್ತಕಗಳು ಬಿಡುಗಡೆಯಾಗಲಿವೆ. ವೈದ್ಯಕೀಯ ಸಾಹಿತ್ಯ ಮಾಲೆಯಡಿ ಇನ್ನೂ 25 ಪುಸ್ತಕಗಳು ಓದುಗರ ಕೈಸೇರಲು ಸಿದ್ಧವಾಗಿವೆ.

ಈ ಕುರಿತು `ಪ್ರಜಾವಾಣಿ`ಗೆ ಮಾಹಿತಿ ನೀಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ ಅವರು, ಡಾ.ಚಂದ್ರಶೇಖರ ಕಂಬಾರರ ಎಲ್ಲ ನಾಟಕಗಳನ್ನು ಒಳಗೊಂಡಿರುವ ಪುಸ್ತಕ, ಎಚ್.ಎಸ್. ಶಿವಪ್ರಕಾಶ್ ಅವರ ಸಮಗ್ರ ನಾಟಕಗಳು, ಪು.ತಿ. ನರಸಿಂಹಾಚಾರ್ ಅವರ ಸಮಗ್ರ ಗದ್ಯ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿವೆ ಎಂದು ತಿಳಿಸಿದರು.

ತಿ.ನಂ. ಶ್ರೀಕಂಠಯ್ಯ ಅವರ ಸಮಗ್ರ ಗದ್ಯದ ಪುನರ್ ಮುದ್ರಣ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ. ಕಯ್ಯಾರ ಕಿಞ್ಞಣ್ಣ ರೈ ಮತ್ತು ಸುಜನಾ ಅವರ ಆಯ್ದ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತರಬೇಕು ಎಂಬ ತೀರ್ಮಾನವನ್ನು ಪ್ರಾಧಿಕಾರದ ಸಭೆಯಲ್ಲಿ ಕೈಗೊಳ್ಳಲಾಗಿದೆ.

`ಕನ್ನಡ ಕಟ್ಟಿದವರು ಮಾಲೆ`ಯಡಿ 25 ಪುಸ್ತಕಗಳು ಬರಲಿವೆ. ಕನ್ನಡದ ಕಟ್ಟಾಳುಗಳಾದ ಬಿ.ಎಂ. ಶ್ರೀಕಂಠಯ್ಯ, ಮ. ರಾಮಮೂರ್ತಿ, ಕಂಬಳಿ ಸಿದ್ದಪ್ಪ, ಫ.ಗು. ಹಲಕಟ್ಟಿ, ಹುಯಿಲಗೋಳ ನಾರಾಯಣ ರಾಯರು, ಅ.ನ. ಕೃಷ್ಣರಾಯರು ಮುಂತಾದವರ ಕುರಿತು ಈ ಮಾಲೆಯಲ್ಲಿ ಪ್ರತ್ಯೇಕ ಪುಸ್ತಕಗಳು ಬಿಡುಗಡೆಯಾಗಲಿವೆ ಎಂದರು.

ಈ ಮಾಲೆಯ 25 ಪುಸ್ತಕಗಳು ಅಕ್ಟೋಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿವೆ. ಒಟ್ಟು 100 ಪುಸ್ತಕಗಳನ್ನು ಈ ಮಾಲೆಯಡಿ ತರುವ ಉದ್ದೇಶ ಪ್ರಾಧಿಕಾರದ್ದು ಎಂದರು.

ವೈದ್ಯಕೀಯ ಸಾಹಿತ್ಯ: ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ ಕೃತಿಗಳನ್ನು ತರಬೇಕು ಎಂಬ ಉದ್ದೇಶದಿಂದ ಚಾಲನೆ ನೀಡಲಾದ `ವೈದ್ಯಕೀಯ ಸಾಹಿತ್ಯ ಮಾಲೆ`ಯಡಿ ಇನ್ನೂ 25 ಪುಸ್ತಕಗಳು ಸಿದ್ಧವಾಗಿವೆ. ಇವುಗಳನ್ನೂ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ನನ್ನ ಮೆಚ್ಚಿನ ಪುಸ್ತಕ`: ಮೈಸೂರು, ಗದಗ, ಸಿಂಧಗಿ, ಜಮಖಂಡಿ, ಗುಲ್ಬರ್ಗ ಪ್ರದೇಶಗಳಲ್ಲಿ ಈಗಾಗಲೇ ಆರಂಭವಾಗಿರುವ `ನನ್ನ ಮೆಚ್ಚಿನ ಪುಸ್ತಕ` ಉಪನ್ಯಾಸ ಕಾರ್ಯಕ್ರಮವನ್ನು ಸೆಪ್ಟೆಂಬರ್‌ನಿಂದ ಬೆಂಗಳೂರಿನಲ್ಲೂ ಆರಂಭಿಸಲಾಗುವುದು. ನಗರದ ನ್ಯಾಷನಲ್ ಕಾಲೇಜು, ಜೈನ್ ಕಾಲೇಜು, ಕ್ರೈಸ್ಟ್ ಕಾಲೇಜು ಸೇರಿದ ಂತೆ ಕೆಲವು ಕಾಲೇಜುಗಳ ಕನ್ನಡ ವಿಭಾಗದ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಸಲಾಗುವುದು.

26ರಂದು ಬಿಡುಗಡೆಯಾಗಲಿರುವ ಬ್ರೈಲ್ ಲಿಪಿಯ ಪುಸ್ತಕಗಳು...

ಮಲೆನಾಡಿನ ಚಿತ್ರಗಳು, ಪಕ್ಷಿಕಾಶಿ (ಕುವೆಂಪು), ಚೋಮನ ದುಡಿ (ಶಿವರಾಮ ಕಾರಂತ), ನಾದಲೀಲೆ, ಸಖಿಗೀತ (ದ.ರಾ. ಬೇಂದ್ರೆ), ಸೂರ್ಯನ ಕುದುರೆ ಮತ್ತು ಇತರ ಕಥೆಗಳು (ಯು.ಆರ್. ಅನಂತಮೂರ್ತಿ), ತುಘಲಕ್ (ಗಿರೀಶ ಕಾರ್ನಾಡ್), ಪರಿಸರದ ಕತೆ (ಕೆ.ಪಿ. ಪೂರ್ಣಚಂದ್ರ ತೇಜಸ್ವಿ).

ಸಂಧ್ಯಾರಾಗ (ಅನಕೃ), ಮೈಸೂರು ಮಲ್ಲಿಗೆ (ಕೆ.ಎಸ್. ನರಸಿಂಹಸ್ವಾಮಿ), ಮಂಕುತಿಮ್ಮನ ಕಗ್ಗ (ಡಿ.ವಿ.ಜಿ.), ಗರತಿಯ ಹಾಡು (ಹಲಸಂಗಿ ಗೆಳೆಯರು), ಟೊಳ್ಳುಗಟ್ಟಿ (ಟಿ.ಪಿ. ಕೈಲಾಸಂ), ಜೀವಧ್ವನಿ (ಚನ್ನವೀರ ಕಣವಿ), ಕಲ್ಲು ಸಕ್ಕರೆ ಕೊಳ್ಳಿರೊ (ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ). ಬ್ರೈಲ್ ಲಿಪಿಯ ಪುಸ್ತಕಗಳ ತಲಾ 31 ಪ್ರತಿಗಳನ್ನು ಸಿದ್ಧಪಡಿಸಲಾಗಿದೆ. ಒಂದೊಂದು ಪ್ರತಿಗೂ 1,500 ರೂಪಾಯಿ ವೆಚ್ಚವಾಗಿದೆ. ಇಡೀ ಯೋಜನೆಗೆ ಸುಮಾರು 10 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಸಿದ್ಧಲಿಂಗಯ್ಯ ತಿಳಿಸಿದರು.

ಕರಾಳ ಕಾಲದ ಬೂಟುಗಾಲಿನ ಸದ್ದು

ಜಂಬಣ್ಣ ಅಮರಚಿಂತ ಅವರ ಹೊಸ ಪುಸ್ತಕದ ಅವಲೋಕನ

ಹರ್ಷಕುಮಾರ್ ಕುಗ್ವೆ

ಒಂದೆಡೆ ರಜಾಕಾರರ ದೌರ್ಜನ್ಯ, ದಬ್ಬಾಳಿಕೆಗಳು ಮುಂದುವರಿಯುತ್ತಿದ್ದಂತೆ, ಧರ್ಮದ್ವೇಷಿಗಳ ದೌರ್ಜನ್ಯಗಳಿಗೆ ಒಳಗಾಗಿ ಸಾಯುವ ಪರಿಸ್ಥಿತಿ ತಲುಪಿದ ಗೋಪಾಲಸಿಂಗ್‌ನಂತಹವರ ಜೀವರಕ್ಷಣೆಯ ಕಾರ್ಯದಲ್ಲಿ ಮದರ್‌ಸಾಬುನಂತಹ ಮನುಷ್ಯರು ತಮ್ಮ ಜೀವವನ್ನೂ ಒತ್ತೆ ಇಡುವ ಧೈರ್ಯ ತೋರುತ್ತಾರೆ


1947 ರ ಆಗಸ್ಟ್ 15ರ ಮಧ್ಯರಾತ್ರಿ ಭಾರತದ ನಾಯಕರಿಗೆ ಬ್ರಿಟಿಷರಿಂದ ಅಧಿಕಾರ ದೊರೆಯಿತು. ಆದರೆ, ಬ್ರಿಟಿಷ್ ಸಂಸ್ಥಾನವಾಗಿದ್ದ ಹೈದರಾಬಾದ್ ಸಂಸ್ಥಾನವನ್ನು ಅದರ ಅಧಿನಾಯಕ ಹೈದರಾಬಾದಿನ ನಿಜಾಮ ಭಾರತ ಒಕ್ಕೂಟದೊಳಗಾಗಲಿ, ಪಾಕಿಸ್ತಾನಕ್ಕಾಗಲಿ ಸೇರಿಸಲು ನಿರಾಕರಿಸಿದ. ಖಾಸಿಂ ರಿಜ್ವಿ ಎಂಬಾತನ ನಾಯಕತ್ವದಲ್ಲಿ ರಜಾಕರ ಸೈನಿಕರ ಪಡೆಯು ನಿಜಾಮನ ರಕ್ಷಣೆಯಲ್ಲಿ ತೊಡಗಿತ್ತು. ತಮ್ಮ ಸಂಸ್ಥಾನದ ರಕ್ಷಣೆಯ ಹೆಸರಲ್ಲಿ ಈ ರಜಾಕರರು ಹಳ್ಳಿ ಹಳ್ಳಿಗಳಲ್ಲಿ ತಮಗೆದುರಾದವರ ಮೇಲೆ, ಮುಸಲ್ಮಾನರಲ್ಲದವರ ಮೇಲೆ, ಕಮ್ಯುನಿಸ್ಟ್ಟರ ಮೇಲೆ ಭೀಕರ ಹಲ್ಲೆ, ದೌರ್ಜನ್ಯ ನಡೆಸಿದರು. ನಿಜಾಮನ ರಕ್ಷಣೆಯನ್ನು ಇಸ್ಲಾಂ ಧರ್ಮ ರಕ್ಷಣೆಯೊಂದಿಗೆ ಸಮೀಕರಿಸಿ ಜಿಹಾದ್ಗೆ ಕರೆನೀಡಿ ಕಾಫಿರ್ಗಳನ್ನು ಭೇಟೆಯಾಡತೊಡಗಿತ್ತು ರಜಾಕಾರರ ಪಡೆ. ಈ ಹೊತ್ತಿಗೆ ಭಾರತದ ಆಹ್ವಾನಕ್ಕೆ ನಿಜಾಮ ಬಗ್ಗದಿದ್ದಾಗ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲರು ಭಾರತದ ಸೈನ್ಯವನ್ನು ನುಗ್ಗಿಸಿ ನಿಜಾಮನನ್ನು ಬಗ್ಗುಬಡಿಯುವ ನಿರ್ಧಾರ ಕೈಗೊಂಡರು. ಈ ಹಿನ್ನೆಲೆಯಲ್ಲಿ 1948 ರ ಸೆಪ್ಟೆಂಬರ್ 13 ರಿಂದ 18 ರವರೆಗೆ ಆಪರೇಷನ್ ಪೋಲೊ ಎಂಬ ರಹಸ್ಯ ಹೆಸರಿನ ಪೊಲೀಸ್ ಕಾರ್ಯಾಚರಣೆ ನಡೆಸಲಾಯಿತು. ರಜಾಕಾರರನ್ನು ಬಗ್ಗುಬಡಿದ ಭಾರತದ ಸೇನೆ ಅಂತಿಮವಾಗಿ ನಿಜಾಮನನ್ನು ಮಣಿಸಿ ಹೈದರಾಬಾದ್ ಸಂಸ್ಥಾನವನ್ನು ಭಾರತದೊಳಗೆ ಸೇರಿಸಿಕೊಂಡಿತು. ಈ ಸೈನಿಕ ಕಾರ್ಯಾಚರಣೆಯ ದುರಂತವೆಂದರೆ ನಿಜಾಮನ ಅನಾಗರಿಕ ರಜಾಕಾರರ ಮೇಲಿನ ಸಿಟ್ಟು ಅಮಾಯಕ ಮುಸ್ಲಿಮರ ಮೇಲೆ ತಿರುಗಿ ಲಕ್ಷಾಂತರ ಅಮಾಯಕ ಮುಸ್ಲಿಮರು ಬರ್ಬರ ಹತ್ಯೆಗೊಳಗಾದದ್ದು. ಭೂಮಾಲೀಕರ ವಿರುದ್ಧ ಹಾಗೂ ಭೂಮಾಲೀಕರಿಗೆ ಬೆಂಬಲವಾಗಿ ನಿಂತಿದ್ದ ನಿಜಾಮ ಮತ್ತು ರಜಾಕಾರರ ವಿರುದ್ಧ ಜೀತಗಾರರನ್ನು ಸಂಘಟಿಸಿ ಸಶಸ್ತ್ರ ಭೂಹೋರಾಟವನ್ನು ಸಂಘಟಿಸುತ್ತಿದ್ದ ಕಮ್ಯುನಿಸ್ಟ್ ಕಾರ್ಯಕರ್ತರ ಮೇಲೆಯೂ ಸರ್ದಾರ್ ಪಟೇಲರ ಉಕ್ಕಿನ ಪಾದಗಳು ಊರಿದವು.

ದೇಶದ ಚರಿತ್ರೆಯ ಈ ಕಾಲಘಟ್ಟವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಕವಿ, ಕೃತಿಕಾರ ಜಂಬಣ್ಣ ಅಮರಚಿಂತ ಅವರು ರಚಿಸಿರುವ ಕಾದಂಬರಿ ಬೂಟುಗಾಲಿನ ಸದ್ದು. ನಿಜ. ರಜಾಕಾರರ ಬೂಟುಗಾಲಿನ ಸದ್ದುಗಳನ್ನು ಹಾಗೂ ಅದರಡಿ ಅಮಾಯಕರ ನರಳಾಟದ ಆರ್ತನಾದವನ್ನು ಈ ಕಾದಂಬರಿ ಸಶಕ್ತವಾಗಿ ಚಿತ್ರಿಸುತ್ತದೆ. ರಾಯಪುರದ ಮಕ್ತಲ್ ಪೇಟೆಯ ಒಂದು ಅಗಸರ ಕುಟುಂಬದ ದಂಪತಿಗಳಾದ ರಂಗಪ್ಪ, ಮಂಗಮ್ಮ ಹಾಗೂ ಇವರ ಮಗ ನಲ್ಲಜೋಮರನ್ನು ಕೇಂದ್ರವಾಗಿಟ್ಟುಕೊಂಡು ಈ ಕಾದಂಬರಿಯ ಕತೆ ಸಾಗುತ್ತದೆ.

ಭೂಮಾಲೀಕ ದರೂರು ರಾಮಿರೆಡ್ಡಿಯ ಬಳಿ ಸಾಲಗಾರನಾದ ರಂಗಪ್ಪನ ಕುಟುಂಬ ಒಂದೆಡೆ ಭೂಮಾಲೀಕನ ಬೆದರಿಕೆಯಿಂದ ಬಳಲಿ ಹೋಗಿದ್ದರೆ ಮತ್ತೊಂದೆಡೆ ರಜಾಕಾರರ ಕಿರುಕುಳಗಳಿಗೆ ಈಡಾಗುತ್ತದೆ. ಈ ನಡುವೆ ರಜಾಕಾರರ ದೌರ್ಜನ್ಯದ ವಿರುದ್ಧವಿದ್ದ ಜನರ ಆಕ್ರೋಶ ಭುಗಿಲೇಳುವ ಸೂಚನೆಗಳು ಕಾಣುತ್ತಿರುತ್ತವೆ. ಕೆಲ ಕಾಂಗ್ರೆಸ್ ಪುಡಾರಿಗಳೂ, ಆರ್ಯಸಮಾಜದವರೂ ಸ್ಥಳೀಯ ಹಿಂದೂಗಳನ್ನು ಮುಸಲ್ಮಾನರ ವಿರುದ್ಧ ಎತ್ತಿಕಟ್ಟುವ ಕೆಲಸದಲ್ಲಿ ತೊಡಗಿರುತ್ತಾರೆ. ಈ ನಡುವೆ ಹಿಂದೂ ಮುಸ್ಲಿಂ ಇಬ್ಬರಿಂದಲೂ ಒಳ್ಳೇ ವ್ಯಕ್ತಿ ಎಂದು ಕರೆಸಿಕೊಳ್ಳುವ ಮದರ್‌ಸಾಬ್ ಮಾನವತೆಯ ಸಾಕಾರಮೂರ್ತಿಯಾಗಿ ಕಷ್ಟದಲ್ಲಿರುವವರಿಗೆ ನೆರವಾಗುತ್ತಾ ಇರುತ್ತಾನೆ. ರಜಾಕಾರರ ವಿರುದ್ಧ ಯಾರೊಬ್ಬರೂ ಬಾಯಿ ಬಿಡದ ಪರಿಸ್ಥಿತಿಯಲ್ಲಿ ಮುಬಾರಕ್ ಎನ್ನುವ ಹುಚ್ಚು ಬಾಲಕ ತೊಬಾಕ್ ತೇಕ್ ಸಿಂಗ್ ಕತೆಯ ಹುಚ್ಚರ ಶೈಲಿಯಲ್ಲಿ ಮರವೊಂದನ್ನು ಹತ್ತಿ ತಿರಂಗಿ ಝಂಡಾ ಏರಿಸಿಯೇ ಸಿದ್ಧ ಎಂದು ಬೋಲೋ ಭಾರತ್ ಮಾತಾ ಕೀ ಜೈ, ಮಹಾತ್ಮ ಗಾಂಧೀಜೀ ಕೀ ಜೈ ಎಂದು ಎಲ್ಲರ ಕಂಗೆಡಿಸಿ ಅವನು ಕಾಲಿಟ್ಟ ಟೊಂಗೆ ಮುರಿದು ಪ್ರಾಣ ಕಳೆದುಕೊಳ್ಳುತ್ತಾನೆ.

ಒಂದೆಡೆ ರಜಾಕಾರರ ದೌರ್ಜನ್ಯ, ದಬ್ಬಾಳಿಕೆಗಳು ಮುಂದುವರಿಯುತ್ತಿದ್ದಂತೆ, ಧರ್ಮದ್ವೇಷಿಗಳ ದೌರ್ಜನ್ಯಗಳಿಗೆ ಒಳಗಾಗಿ ಸಾಯುವ ಪರಿಸ್ಥಿತಿ ತಲುಪಿದ ಗೋಪಾಲಸಿಂಗ್‌ನಂತಹವರ ಜೀವರಕ್ಷಣೆಯ ಕಾರ್ಯದಲ್ಲಿ ಮದರ್‌ಸಾಬುನಂತಹ ಮನುಷ್ಯರು ತಮ್ಮ ಜೀವವನ್ನೂ ಒತ್ತೆ ಇಡುವ ಧೈರ್ಯ ತೋರುತ್ತಾರೆ. ಯಾವಾಗ ನಿಜಾಮನ ಸೈನ್ಯದ ಮೇಲೆ ಭಾರತದ ಸೈನ್ಯ ಮುಗಿಬೀಳುತ್ತದೆಯೋ ಆಗ ಪರಿಸ್ಥಿತಿ ಉಲ್ಟಾ ಆಗಿ ಯಾವ ಪಾಪವನ್ನೂ ಮಾಡದ ಮುಸಲ್ಮಾನರ ಮಾನ, ಪ್ರಾಣ, ಆಸ್ತಿ ಪಾಸ್ತಿಗಳು ಬಲಿಯಾಗುತ್ತವೆ. ಮಾನವ ಪ್ರೇಮದ ಸಂಕೇತವಾದ ಮದರ್‌ಸಾಬರ ಮನೆ ಅಂಗಡಿಗಳೂ ಲೂಟಿಕೋರರ ಪಾಲಾಗುವ, ಇದನ್ನು ಕಂಡು ಹತಾಶೆಗೊಳ್ಳುವ ಮದರ್ ಸಾಬ್ ಧರೆಗುರುಳುವ ಚಿತ್ರಣಗಳು ಮನಸ್ಸನ್ನು ಕದಡುತ್ತವೆ.
ಹೀಗೆ ಬೂಟುಗಾಲಿನ ಸದ್ದು ದೇಶದ ಒಂದು ಪ್ರಮುಖ ಚಾರಿತ್ರಿಕ ಸಂದರ್ಭವು ನಮ್ಮ ನಾಡಿನಲ್ಲಿ ಧ್ವನಿತವಾದ ಬಗೆಯನ್ನು ಉತ್ತಮವಾಗಿ ಕಟ್ಟಿಕೊಡುತ್ತದೆ. ಅಲ್ಲಲ್ಲಿ ಚರಿತ್ರೆಯ ಕೆಲವು ಘಟನೆಗಳನ್ನು ವಿವರಿಸುವಾಗ ಆ ವಿವರಗಳು ಕಾದಂಬರಿಯ ಚೌಕಟ್ಟನ್ನು ಮೀರಿರುವುದು, ಹಾಗೂ ಕೆಲವು ಉಪ ಶೀರ್ಷಿಕೆಗಳು ಸಹ ಹಾಗಿರುವುದು ಕೃತಿಯ ಕಾದಂಬರಿಯ ಕಲಾತ್ಮಕತೆಗೆ ತೊಡಕಾಗಿವೆ. ಕಾದಂಬರಿಗೆ ಮುನ್ನುಡಿಯಾಗಿ ಡಾ. ಅಮರೇಶ ನುಗಡೋಣಿಯವರು ನೀಡಿರುವ ಚರಿತ್ರೆಯ ಹಿನ್ನೆಲೆ ಸಹಕಾರಿಯಾಗಿದೆ ಎನ್ನಬಹುದು


Tuesday, August 9, 2011

ಚೇ.. ಲೋಕಕ್ಕೆ ಅಡಿ ಇಡುವ ಮುನ್ನ ..ನಮ್ಮ ಹೊಸ ಪುಸ್ತಕ್

C£ÀĪÁzÀPÀgÀ ªÀiÁvÀÄ

ªÀiÁ£ÀªÀ£À C¨sÀÄåzÀAiÀÄzÀ ºÁ¢AiÀÄ°è JzÀÄgÁVgÀĪÀ ªÀÄvÀÄÛ EA¢UÀÆ JzÀÄgÁUÀÄwÛgÀĪÀ ¸ÀªÁ®ÄUÀ¼ÀÄ ªÉÊ«zsÀåªÀÄAiÀÄ. vÀ£Àß ¸ÁªÀiÁfPÀ-DyðPÀ ªÀÄvÀÄÛ ¸ÁA¸ÀÌøwPÀ ªÀÄÄ£ÀßqÉUÁV ¸ÀzÁ £ÉʸÀVðPÀ ¸ÀA¥À£ÀÆä®UÀ¼À£ÀÄß CªÀ®A©¸ÀÄvÀÛ¯Éà ªÀÄÄ£ÀßqɪÀ ªÀÄ£ÀÄPÀÄ® J¯ÉÆèà MAzÉqÉ ¸ÁªÀÄÄzÁ¬ÄPÀ »vÁ¸ÀQÛUÀ½UÉ PÀlÄÖ©zÀÄÝ EzÉà fêÀ¥ÀgÀ ¸ÀA¥À£ÀÆä®UÀ¼À£ÀÄß ±ÉÆö¸À®Ä vÉÆqÀUÀÄvÀÛzÉ. vÀ£ÀÆä®PÀ vÀ£Àß ¨sËwPÀ CUÀvÀåvÉUÀ¼À£ÀÄß FqÉÃj¹PÉƼÀÄîªÀ ªÀÄ£ÀÄPÀÄ®zÀ ºÀA§®PÉÌ, ZÁjwæPÀªÁV C©üªÀÈ¢Þ ºÉÆA¢gÀĪÀ ªÀiÁ£ÀªÀ£À ¨Ë¢ÞPÀ QæAiÉÄUÀ¼ÀÄ ¥ÀÆgÀPÀªÁV PÁAiÀÄ𠤪Àð»¸ÀÄvÀÛªÉ. ¥ÁæaãÀ PÁ®¢AzÀ »rzÀÄ CªÁðaãÀ PÁ®zÀªÀgÉUÉ ªÀiÁ£ÀªÀ ¸ÀªÀiÁd vÀ£Àß C©üªÀÈ¢Þ ¥ÀxÀzÀ°è vÉÆqÀPÀÄAlÄ ªÀiÁqÀĪÀ J®èªÀ£ÀÆß ¤£ÁðªÀÄ ªÀiÁqÀÄvÀÛ¯Éà §A¢gÀĪÀÅzÀÄ ZÁjwæPÀ ¸ÀvÀå. ºÁUÉAiÉÄà vÀ£Àß ¸ÁªÀÄÄzÁ¬ÄPÀ C¹ävÉUÀ¼À gÀPÀëuÉUÁV ªÀÄvÀÄÛ ¸ÁªÀiÁfPÀ-DyðPÀ ªÀÄÄ£ÀßqÉUÁV ªÀiÁ£ÀªÀ ¸ÀªÀiÁd vÀ£ÀUÉ JzÀÄgÁUÀĪÀ J®è ªÉÊgÀÄzsÀåUÀ¼À£ÀÆß CgÀV¹PÉƼÀÄîvÀÛ¯Éà ªÀÄÄ£ÀßqÉ¢gÀĪÀÅzÀÆ CµÉÖà ¸ÀvÀå. ªÀÄ£ÀÄPÀÄ®zÀ F ªÀÄÄAzÀrAiÀÄ eÁr£À¯Éèà ¸ÀªÀiÁdzÀ MAzÀÄ ªÀUÀð vÀ£Àß ¸ÁªÀiÁfPÀ ªÀÄvÀÄÛ DyðPÀ ¥Á槮å¢AzÀ CxÀªÁ ¨sËUÉÆýPÀ ªÁå¥ÀPÀvɬÄAzÀ, ªÀiÁ£ÀªÀ ¸ÀªÀiÁdªÀ£ÀÄß ¸À®ºÀĪÀ £ÉʸÀVðPÀ ¸ÀA¥À£ÀÆä®UÀ¼À£ÀÄß vÀ£Àß PÀ§AzsÀ ¨ÁºÀÄUÀ½AzÀ DPÀæ«Ä¹, Erà ¸ÀªÀiÁdªÀ£ÀÄß vÀ£Àß ¤AiÀÄAvÀætPÉÆ̼À¥Àr¸À®Ä ºÉtUÁqÀĪÀÅzÀ£ÀÄß EwºÁ¸ÀzÀ ««zsÀ PÁ®WÀlÖUÀ¼À°è, «©ü£Àß ¸ÀégÀÆ¥ÀUÀ¼À°è PÁt§ºÀÄzÀÄ. UÀįÁªÀÄVj ªÀåªÀ¸ÉܬÄAzÀ ¸ÀªÀÄPÁ°Ã£À ¥ÀæeÁ¸ÀvÁÛvÀäPÀ ªÀåªÀ¸ÉÜAiÀĪÀgÉUÀÆ EzÉà ¥À槮 ªÀUÀðUÀ¼Éà ªÀiÁ£ÀªÀ ¸ÀªÀiÁdªÀ£ÀÄß ¤AiÀÄAwæ¸ÀÄwÛgÀĪÀÅzÀ£ÀÄß PÁt§ºÀÄzÀÄ. ªÀÄvÉÆÛAzÉqÉ ªÀÄ£ÀÄPÀÄ®ªÀ£ÀÄß ¸À®ºÀĪÀ £ÉʸÀVðPÀ ¸ÀA¥À£ÀÆä®UÀ¼À£ÀÄß vÀªÀÄä fêÁvÀäUÀ¼À G½«UÉ CUÀvÀå«zÀݵÀÄÖ ªÀiÁvÀæ §¼À¹ ¥ÀæPÀÈwAiÉÆA¢UÉ ¸ÀºÀ¨Á¼Éé £ÀqɸÀĪÀ ªÀiÁ£ÀªÀ ¸ÀªÀiÁdzÀ ªÀÄvÉÆÛAzÀÄ ªÀUÀðªÀ£ÀÆß EwºÁ¸ÀzÀ°è PÁt§ºÀÄzÀÄ.

F JgÀqÀÆ ªÀUÀðUÀ¼À £ÀqÀÄ«£À ¸ÀÄ¢ÃWÀð ¸ÀAWÀµÀðªÉà ªÀÄ£ÀÄPÀÄ®zÀ EwºÁ¸ÀzÀ ¸ÀÆPÀëöävÉUÀ¼À£ÀÄß ºÉÆgÀUÉqÀºÀÄvÀÛzÉ. AiÀiÁªÀÅzÉà PÁ®WÀlÖzÀ®Æè ªÀiÁ£ÀªÀ ¸ÀªÀiÁdzÀ°è ªÀåPÀÛªÁUÀĪÀ F ¸ÀAWÀµÀðzÀ ªÀÄÆ®PÀªÉà ªÀÄ£ÀÄPÀÄ® vÀ£Àß G½«UÉ ºÉƸÀ DAiÀiÁªÀÄUÀ¼À£ÀÆß PÀAqÀÄPÉƼÀÄîvÁÛ §A¢zÉ. ºÁUÁVAiÉÄà EwºÁ¸ÀzÀ ¥ÀæwAiÉÆAzÀÄ PÁ®WÀlÖzÀ®Æè F JgÀqÀÄ ªÀUÀðUÀ¼À £ÀqÀÄªÉ WÀµÀðuÉ £ÀqÉAiÀÄÄvÀÛ¯Éà §A¢zÉ. eÁUÀwPÀ EwºÁ¸ÀzÀ°è ªÀiÁ£ÀªÀ ¸ÀªÀiÁd vÀ£Àß zÁ¸ÀåzÀ ¸ÀAPÉÆïÉUÀ¼À£ÀÄß PÀ¼Àa vÀ£ÀßzÉà DzÀ ¸ÀéAwPÉAiÀÄ£ÀÆß, C¹ävÉAiÀÄ£ÀÆß gÀQë¹PÉƼÀî®Ä C£ÉÃPÀ ªÀiÁUÀðUÀ¼À£ÀÄß C£ÀĸÀj¹zÉ. UÀįÁªÀÄVjAiÀÄ «gÀÄzÀÞ ºÉÆÃgÁl, H½UÀªÀiÁ£Àå ªÀåªÀ¸ÉÜAiÀÄ ¤ªÀÄÆð®£É, zsÀªÀiÁðzsÁjvÀ ¥Àæ¨sÀÄvÀézÀ ¤gÁPÀgÀuÉ, ¸ÁªÀiÁædå±Á»UÉ ¥ÀæwgÉÆÃzsÀ »ÃUÉ ºÀ®ªÀÅ «zsÁ£ÀUÀ¼À°è ªÀÄ£ÀÄPÀÄ® EwºÁ¸ÀzÀ ºÁ¢AiÀÄ£ÀÄß PÀæ«Ä¹zÉ. F ¥ÀæwAiÉÆAzÀÄ ºÀAvÀzÀ®Æè ªÀÄ£ÀÄPÀÄ®PÉÌ ¥ÉæÃgÀPÀ ±ÀQÛAiÀiÁV, GvÉÛÃdPÀ ±ÀQÛAiÀiÁV PÁAiÀÄ𠤪Àð»¹gÀĪÀÅzÀÄ ªÀiÁ£ÀªÀ£À°è ¸Áé¨sÁ«PÀªÁVAiÉÄà CAvÀUÀðvÀªÁVgÀĪÀ ºÉÆÃgÁlzÀ ªÀÄ£ÉÆèsÁªÀ, ¸ÀAWÀµÀðzÀ ªÁAbÉ ªÀÄvÀÄÛ UÉ®ÄèªÀ ºÀoÀ. ºÁUÁVAiÉÄà ªÀÄ£ÀÄPÀÄ®zÀ EwºÁ¸ÀªÀ£ÀÄß JgÀqÀÄ ªÀUÀðUÀ¼À £ÀqÀÄ«£À ¸ÀAWÀµÀðzÀ »£É߯ÉAiÀįÉèà UÀ滸ÀĪÀÅzÀÄ C¤ªÁAiÀÄðªÁUÀÄvÀÛzÉ. F ¸ÀAWÀµÀðzÀ ºÁ¢UÉ MAzÀÄ ªÉÊeÁÕ¤PÀ vÀ¼ÀºÀ¢ ªÀÄvÀÄÛ ¸ÉÊzÁÞAwPÀ DAiÀiÁªÀÄ zÉÆgÉvÀzÀÄÝ 18-19£ÉAiÀÄ ±ÀvÀªÀiÁ£À¢A¢ÃZÉUÉ JAzÀÄ ºÉüÀ§ºÀÄzÀÄ.

PÀ¼ÉzÀ ±ÀvÀªÀiÁ£ÀzÀ ¥ÁægÀA©üPÀ ªÀµÀðUÀ¼À°è ªÀÄ£ÀÄPÀÄ® C£ÉÃPÀ jÃwAiÀÄ d£ÁAzÉÆî£ÀUÀ¼À£ÀÄß, «¥ÀèªÀPÁj ¨É¼ÀªÀtÂUÉUÀ¼À£ÀÄß, «ªÉÆÃZÀ£Á ºÉÆÃgÁlUÀ¼À£ÀÄß PÀArvÀÄÛ. ¥sÁæ£ïì, dªÀÄð¤, El° ªÀÄÄAvÁzÀ gÁµÀÖçUÀ¼À°è d£À¸ÁªÀiÁ£ÀågÀÄ vÀªÀÄä ¨sÀ«µÀåªÀ£ÀÄß vÁªÉà gÀƦ¹PÉƼÀÄîªÀ ¤nÖ£À°è ¥Àæ¨sÀÄvÀéUÀ¼À «gÀÄzÀÞ, ±ÉÆõÀuÁ ªÀåªÀ¸ÉÜAiÀÄ «gÀÄzÀÞ, zÀªÀÄ£ÀPÁj ¥ÀæªÀÈwÛAiÀÄ «gÀÄzÀÞ zÀ¤ JwÛzÀÄÝ 20£ÉAiÀÄ ±ÀvÀªÀiÁ£ÀzÀ C£ÉÃPÀ «ªÉÆÃZÀ£Á ºÉÆÃgÁlUÀ½UÉ ¥ÉæÃgÀPÀ ±ÀQÛAiÀiÁV ¥Àjt«Ä¹vÀÄÛ. JgÀqÀÄ ªÀĺÁAiÀÄÄzÀÞUÀ¼À £ÀqÀĪÉAiÉÄà C£ÉÃPÀ ¸ÀtÚ-zÉÆqÀØ gÁµÀÖçUÀ¼À «ªÉÆÃZÀ£ÉAiÀÄ£ÀÆß PÀAqÀ PÀ¼ÉzÀ ±ÀvÀªÀiÁ£ÀzÀ ¥ÀƪÁðzsÀð, d£À¸ÀAWÀµÀðUÀ½UÉ ºÉƸÀ ªÀÄÄ£ÀÄßr §gÉ¢zÀÝ£ÀÄß UÀÄgÀÄw¸À§ºÀÄzÀÄ. ªÀ¸ÁºÀvÀıÁ» CAvÀåUÉÆAqÀgÀÆ ¤£ÁðªÀĪÁUÀzÉ ¸ÁªÀiÁædå±Á»AiÀÄ gÀÆ¥ÀzÀ°è ¥ÀÄ£ÀB Erà dUÀvÀÛ£ÀÄß DPÀæ«Ä¸À®Ä ªÀÄÄAzÁVzÀÆÝ EzÉà ¥ÀæxÀªÀiÁzsÀðzÀ¯ÉèÃ. eÁUÀwPÀ ¸ÀA¥À£ÀÆä®UÀ¼À PÉÆæÃrüÃPÀgÀt ªÀÄvÀÄÛ ±ÉÆõÀuÉ PÉ®ªÉà ¥À槮 gÁµÀÖçUÀ¼À ªÀÄĶ×AiÀÄ°è ¹®ÄQzÁUÀ vÀªÀÄä ªÀÄÆ® C¹ävÉUÀ¼À£Éßà PÀ¼ÉzÀÄPÉƼÀÄîªÀ ©üÃwUÉƼÀUÁzÀ C£ÉÃPÀ gÁµÀÖçUÀ¼ÀÄ ¸Áé¨sÁ«PÀªÁVAiÉÄà ¸ÁªÀiÁædå±Á»AiÀÄ «gÀÄzÀÞ ¸ÉmÉzÀÄ ¤®è¨ÉÃPÁ¬ÄvÀÄ. CAvÀºÀ ¥ÀÄlÖ gÁµÀÖçUÀ¼À ¥ÉÊQ PÀÆå¨Á vÀ£ÀßzÉà DzÀ ªÉʲµÀÖöåUÀ½AzÀ ºÉÆgÀºÉƪÀÄÄävÀÛzÉ.

CªÉÄjPÁ ªÀÄvÀÄÛ «ÄvÀæ gÁµÀÖçUÀ¼À ¸ÀªÀÄgÀ²Ã®vÉ C£ÉÃPÀ ¸ÀtÚ ¥ÀÄlÖ gÁµÀÖçUÀ½UÉ ªÀiÁgÀPÀªÁzÀAvÉAiÉÄÃ, ¸ÀA¥À£ÀÆä®UÀ¼À PÉÆæÃrüÃPÀgÀtzÀ ¥ÀjuÁªÀĪÁV C£ÉÃPÀ gÁµÀÖçUÀ¼ÀÄ ¥ÀgÁªÀ®A§£ÉUÉ M¼ÀUÁzÀzÀÄÝ PÀ¼ÉzÀ ±ÀvÀªÀiÁ£ÀzÀ «²µÀÖ «zÀåªÀiÁ£À. F ¤nÖ£À¯Éèà ¯Áån£ï CªÉÄjPÁ zÉñÀUÀ¼À, «±ÉõÀªÁV PÀÆå§ ªÀÄvÀÄÛ ¨ÉÆ°«AiÀiÁzÀAvÀºÀ ¥ÀÄlÖ gÁµÀÖçUÀ¼À EwºÁ¸À UÀªÀÄ£À ¸É¼ÉAiÀÄÄvÀÛzÉ. F gÁµÀÖçUÀ¼À «ªÉÆÃZÀ£ÉUÁV ¸ÁªÀiÁædå±Á»UÀ¼ÉÆqÀ£É ¸ÀªÀÄgÀPÉÌ ¤®è®Ä ±ÀPÀÛgÀ®èzÀ ¸ÀtÚ PÁæAwPÁj UÀÄA¥ÀÄUÀ¼ÀÄ vÀªÀÄä PÁæAwAiÀÄ bÀ® ºÁUÀÆ ºÉÆÃgÁlzÀ PÉaѤAzÀ¯Éà d£À¸ÁªÀiÁ£ÀågÀ£ÀÄß «ªÉÆÃZÀ£ÉAiÀÄ ªÀiÁUÀðzÀ°è PÉÆAqÉÆAiÀÄÝ «ÃgÀUÁxÉ EA¢UÀÆ vÀªÀÄä ¥Àæ¸ÀÄÛvÀvÉAiÀÄ£ÀÄß G½¹PÉÆAqÀħA¢zÉ. ºÁUÁVAiÉÄà F PÁæAwPÁj ªÀiÁUÀðzÀ ºÀjPÁgÀgÁV C£Éð¸ÉÆÖà ZÉ UÀĪÁgÀ ªÀÄvÀÄÛ ¦üqÀ¯ï PÁå¸ÉÆÖçà zÀAvÀPÀxÉUÀ¼ÁV EwºÁ¸ÀzÀ°è CdgÁªÀÄgÀgÁVzÁÝgÉ.

CªÉÄjPÀzÀAvÀºÀ §ÈºÀvï gÁµÀÖçªÀ£ÀÄß ªÀÄt¹ vÀªÀÄä d£ÀvÉUÉ «ªÉÆÃZÀ£ÉAiÀÄ£ÀÄß MzÀV¹PÉÆlÖ ZÉ ªÀÄvÀÄÛ PÁå¸ÉÆÖçà CªÀgÀ PÁæAwAiÀÄ ªÀiÁUÀð ¹AiÉÄgÁæ ªÉÄøÁÖç ¨ÉlÖzÀ PÀtªÉAiÀĵÉÖà zÀÄUÀðªÀÄ, CµÉÖà PÀpt. UÉj¯Áè AiÀÄÄzÀÞ ¥ÀgÀA¥ÀgÉUÉ MAzÀÄ «²µÀÖ DAiÀiÁªÀĪÀ£ÀÄß PÀ°à¹, D¼ÀĪÀ ªÀUÀðUÀ¼À ¥À槮 C¸ÀÛçUÀ¼À£ÀÄß ªÀÄt¹zÀ ZÉ CªÀgÀ ºÉÆÃgÁlzÀ ªÀiÁUÀð C«¸ÀägÀtÂÃAiÀĪÀµÉÖà C®è C£ÀÄPÀgÀtÂÃAiÀĪÀÇ ºËzÀÄ. ZÉ CªÀgÀÄ UÀw¹ £Á®ÄÌ zÀ±ÀPÀUÀ¼Éà UÀw¹ªÉ. F CªÀ¢üAiÀÄ°è ªÀiÁ£ÀªÀ ¸ÀªÀiÁd ¸ÁPÀµÀÄÖ §zÀ¯ÁªÀuÉUÀ¼À£ÀÄß PÀArzÉ. ¸ÁªÀiÁædå±Á» zsÉÆÃgÀuÉ £ÀªÀ GzÁgÀªÁzÀzÀ gÀÆ¥ÀzÀ°è £ÀªÀ ªÀ¸ÁºÀvÀıÁ»AiÀÄ£ÀÆß ¥ÉÆö¸ÀÄwÛzÉ. d£À¸ÀAWÀµÀðUÀ¼ÀÄ vÀªÀÄäzÉà DzÀ ºÉƸÀ DAiÀiÁªÀÄUÀ¼À£ÀÄß ¥ÀqÉzÀÄPÉƼÀÄîwÛªÉ. DzÀgÀÆ ZÉ CªÀgÀ ºÉÆÃgÁlzÀ zsÉÆÃgÀuÉ EA¢UÀÆ vÀ£Àß ¥Àæ¸ÀÄÛvÀvÉAiÀÄ£ÀÄß G½¹PÉÆAqÀÄ §A¢zÀÝgÉ CzÀPÉÌ PÁgÀt ªÀåªÀ¸ÉÜAiÀÄ ±ÉÆõÀPÀ ªÀUÀðUÀ¼ÀÄ EA¢UÀÆ vÀªÀÄä ¥Á槮åªÀ£ÀÄß ªÉÄgÉAiÀÄÄwÛgÀĪÀÅzÉà PÁgÀtªÁVzÉ.

d£À¸ÀAWÀµÀðUÀ¼À£ÀÄß, d£ÁAzÉÆî£ÀUÀ¼À£ÀÄß ªÀÄvÀÄÛ d£À¸ÁªÀiÁ£ÀågÀ ¥ÀæeÁ¸ÀvÁÛvÀäPÀ ºÉÆÃgÁlUÀ¼À£ÀÄß ºÉƸÀ gÀÆ¥ÀUÀ¼À°è PÁtÄwÛgÀĪÀ F ¸ÀAzÀ¨sÀðzÀ¯Éèà D¼ÀĪÀ ªÀUÀðUÀ¼ÀÄ ±Àæ«ÄPÀ ªÀUÀðUÀ¼À D±ÀAiÀÄUÀ¼À£ÀÄß aªÀÅn ºÁPÀĪÀ £ÀªÀ «zsÁ£ÀUÀ¼À£ÀÄß C£ÀĸÀj¸ÀÄwÛgÀĪÀÅzÀÄ ¸ÀªÀÄPÁ°Ã£À ¸ÀAzÀ¨sÀðzÀ°è PÁt§ºÀÄzÁVzÉ. EAw¥Àà ¸À¤ßªÉñÀzÀ°è eÁUÀwPÀ ªÀÄlÖzÀ ±ÀæªÀÄfë ªÀUÀðUÀ½UÉ ¥Àæ¨sÀÄvÀézÀ «gÀÄzÀÞ ºÉÆÃgÁqÀ®Ä MAzÀÄ ºÉƸÀ DAiÀiÁªÀÄ ªÀÄvÀÄÛ ¸ÀAWÀµÀðzÀ ªÀiÁUÀðUÀ¼ÀÄ C¤ªÁAiÀÄð J¤¸ÀÄvÀÛzÉ. F ºÉƸÀ DAiÀiÁªÀĪÀ£ÀÄß ZÉ ªÀÄvÀÄÛ CªÀgÀ PÁæAwPÁj ¥ÀgÀA¥ÀgÉ MzÀV¸ÀĪÀÅzÀ£ÀÄß C®èUÀ¼ÉAiÀįÁUÀĪÀÅ¢®è. UÉj¯Áè AiÀÄÄzÀÞzÀ ªÀÄÆ®PÀ vÀªÀÄä ±ÀvÀÄæUÀ¼À zÀªÀÄ£À ªÀiÁrzÀ ZÉ CªÀgÀ PÁAiÀÄðvÀAvÀæUÀ¼À£ÀÄß AiÀÄxÁªÀvÁÛV C¼ÀªÀr¸ÀĪÀÅzÀÄ ¸ÀªÀÄPÁ°Ã£À ¸ÀAzÀ¨sÀðzÀ°è C¥Àæ¸ÀÄÛvÀªÉ¤¸À§ºÀÄzÀÄ. DzÀgÉ ZÉ CªÀgÀÄ ¤«Äð¹zÀ ºÉÆÃgÁlzÀ ªÀiÁUÀðUÀ¼ÀÄ AiÀiÁªÀÅzÉÆà MAzÀÄ gÀÆ¥ÀzÀ°è EA¢UÀÆ ¥Àæ¸ÀÄÛvÀ JA§ÄzÀ£ÀÄß C®èUÀ¼ÉAiÀįÁUÀĪÀÅ¢®è.

F ¤nÖ£À°è ¥Àæ¸ÀÄÛvÀ PÀÈw dUÀwÛ£ÁzÀåAvÀ £ÀqÉAiÀÄÄwÛgÀĪÀ d£À¥ÀgÀ ºÉÆÃgÁlUÀ½UÉ MAzÀÄ ºÉƸÀ DAiÀiÁªÀÄ MzÀV¸ÀĪÀÅzÉAzÀÄ ¨sÁ«¸ÀÄvÉÛãÉ. PÀÆå¨ÁzÀ PÁæAwAiÀÄ£ÀÄß AiÀıÀ¹éUÉƽ¸ÀĪÀÅzÉà C®èzÉ, DgÀÄ zÀ±ÀPÀUÀ¼À PÁ® ¸ÁªÀiÁædå±Á»UÀ¼À zÁ½UÀ¼À£ÀÄß JzÀÄj¹ vÀ£ÀßzÉà DzÀ ¸ÁªÀð¨s˪ÀÄvÉAiÀÄ£ÀÄß gÀQë¹PÉÆArgÀĪÀ PÁå¸ÉÆÖçà CªÀgÀ PÁæAwPÁj ªÀiÁUÀðPÉÌ ¨sÀzÀæ §Ä£Á¢ MzÀV¹zÀªÀgÀÄ ZÉ UÀĪÁgÀ. EAvÀºÀ ¢üêÀÄAvÀ PÁæAwPÁjAiÀÄ ZÁjwæPÀ ºÉeÉÓUÀ¼À£ÀÄß M§â MqÀ£ÁrAiÀÄ ªÀiÁvÀÄUÀ¼À¯Éèà PÉüÀĪÀÅzÀÄ D¸ÀQÛzÁAiÀÄPÀªÀµÉÖà C®è, ¸ÀÆáwðzÁAiÀÄPÀªÀÇ DUÀ§ºÀÄzÀÄ. ¥Àæ¸ÀÄÛvÀ PÀÈwAiÀÄ°è PÁå¸ÉÆÖçà CªÀgÀ ¸Àäøw¥Àl®¢AzÀ ºÉÆgÀºÉÆ«ÄägÀĪÀ ZÉ CªÀgÀ ºÉeÉÓUÀ¼À ¸ÀzÀÄÝ ¸ÀªÀÄPÁ°Ã£À ¸ÀAzÀ¨sÀðzÀ d£À¥ÀgÀ ¸ÀAWÀµÀðUÀ½UÉ ªÀiÁUÀðzÀ±Àð£À ¤ÃqÀĪÀÅzÀµÉÖà C®èzÉ, ZÁjwæPÀ DAiÀiÁªÀĪÀ£ÀÆß MzÀV¸ÀÄvÀÛzÉ. ªÀiÁPïìðªÁzÀªÀ£ÀÄß DAiÀiÁ zÉñÀUÀ¼À UÀÄt®PÀëtUÀ½UÉ C£ÀÄUÀÄtªÁV C¼ÀªÀr¸À¨ÉÃPÁzÀ C¤ªÁAiÀÄðvÉAiÀÄ£ÀÄß ZÉ ªÀÄvÀÄÛ PÁå¸ÉÆÖçà CªÀgÀ PÁæAwPÁj ºÉeÉÓUÀ¼ÀÄ ¸ÀàµÀÖªÁV UÀÄgÀÄw¸ÀÄvÀÛªÉ.

£ÀªÀ GzÁgÀªÁzÀzÀ ¥ÀæºÁgÀ¢AzÀ vÀvÀÛj¸ÀÄwÛgÀĪÀ dUÀwÛ£À ±Àæ«ÄPÀ ªÀUÀðUÀ½UÉ, ±ÉÆövÀ d£À¸ÀªÀÄÄzÁAiÀÄUÀ½UÉ ZÉ CªÀgÀ PÁæAwPÁj ºÉeÉÓUÀ¼ÀÄ JZÀÑjPÉAiÀÄ UÉeÉÓ£ÁzÀUÀ¼ÀAvÉ ¥Àjt«Ä¸ÀÄvÀÛªÉ. ¨sÁgÀvÀzÀ®èµÉÖà C®èzÉ «±ÀézÀ EvÀgÀ gÁµÀÖçUÀ¼À®Æè ¸ÁªÀiÁædå±Á» ±ÀQÛUÀ¼À «gÀÄzÀÞ C«gÀvÀ ºÉÆÃgÁl £ÀqɹgÀĪÀ C£ÉÃPÀ d£À¸ÀAWÀµÀðUÀ½UÉ ZÉ CªÀgÀ ªÀåQÛ avÀæt MAzÀÄ ªÀiÁUÀðzÀ²ð ¸ÀÆvÀæªÀ£ÀÄß MzÀV¸ÀÄvÀÛzÉ. F zÀȶ֬ÄAzÀ¯Éà ¥Àæ¸ÀÄÛvÀ PÀÈw d£À¥ÀgÀ ºÉÆÃgÁlUÀ½UÉ C¥ÁåAiÀĪÀiÁ£ÀªÁUÀÄvÀÛzÉ. PÁæAwAiÀÄ ¥ÀjPÀ®à£ÉAiÀÄ£ÀÄß »A¸É-C»A¸ÉAiÀÄ ¥Àj¢üAiÀįÉèà «±Éèö¸À¯ÁUÀÄwÛgÀĪÀ ¸ÀªÀÄPÁ°Ã£À ¸ÀAzÀ¨sÀðzÀ°è ZÉ CªÀgÀ PÁæAwAiÀÄ ºÉeÉÓUÀ¼À£ÀÄß UÀÄgÀÄw¸ÀĪÀ F CªÀÄÆ®å PÀÈw MAzÀÄ «©ü£Àß DAiÀiÁªÀĪÀ£ÀÄß MzÀV¸À§®èzÀÄ. F PÀÈwAiÀÄ ªÀĺÀvÀéªÀÇ EzÀgÀ¯Éèà CqÀVzÉ.

EAvÀºÀ CªÀÄÆ®å PÀÈwAiÀÄ£ÀÄß C£ÀĪÁ¢¸À®Ä ¥ÉæÃgÀuÉ, ¸ÀºÀPÁgÀ ªÀÄvÀÄÛ ¥ÉÆæÃvÁìºÀ ¤ÃrzÀ ®qÁ¬Ä ¥ÀæPÁ±À£ÀzÀ ¹§âA¢UÀ½UÀÆ, §¸ÀªÀgÁeï ¸Àƽ¨sÁ«AiÀĪÀjUÀÆ ªÀÄvÀÄÛ ¥ÀævÀåPÀëªÁV, ¥ÀgÉÆÃPÀëªÁV £ÉgÀªÁzÀ J®è ¸ÀAUÁwUÀ½UÀÆ £À£Àß ºÀÈvÀÆàªÀðPÀ PÀÈvÀdÕvÉUÀ¼À£ÀÄß C¦ð¸ÀÄvÉÛãÉ.

£Á ¢ªÁPÀgÀ

Tuesday, August 2, 2011

ಹೊಸ ತಲ್ಲಣ - ಸವಾಲುಗಳ ಕಾವ್ಯಪರೀಕ್ಷೆ


 ಇದು ಕವಿ ಚಂದ್ರಶೇಖರ ತಾಳ್ಯರ ಐದನೆಯ ಕವನ ಸಂಕಲನ. ಬಂಡಾಯ ಪರಂಪರೆಯಲ್ಲಿ ಬೆಳೆದು ಬಂದ ಇವರ ಮೊದಲ ಸಂಕಲನ `ನನ್ನ ಕಣ್ಣಗಲಕ್ಕೆ` ಸ್ವಾಭಾವಿಕ ಆಕ್ರೋಶದ ಹೊರತಾಗಿಯೂ ಕಲಾತ್ಮಕ ಹಾಗೂ ಸ್ವಂತಿಕೆಯ ಸಾಧ್ಯತೆಗಳತ್ತ ಚಿಂತಿಸಿತ್ತು. 

`ಸಿಂಧೂ ನದಿಯ ದಂಡೆಯ ಮೇಲೆ` ಎಂಬ ಎರಡನೆಯ ಸಂಕಲನವು ಆಧುನಿಕ ಮತ್ತು ಅನುಭಾವಿಕ ಪ್ರೇರಣೆಗಳಲ್ಲಿ ವಿಶ್ವವನ್ನೇ ಪರಿಭಾವಿಸುವ ಉತ್ಸಾಹ ಹೊಂದಿತ್ತು.  `ಸುಡುವ ಭೂಮಿ` ಎಂಬ ಮೂರನೆಯ ಸಂಕಲನವು ತಾಳ್ಯರ ಮಾಗಿದ ಚಿಂತನೆ, ಗಟ್ಟಿ ಶಿಲ್ಪ, ಗಂಭೀರ ಪ್ರಯತ್ನಗಳಿಂದ ಪ್ರಾತಿನಿಧಿಕವೆಂಬಂತೆ ಬದಲಾಯಿತು. 

ತಮ್ಮ ನಾಲ್ಕನೆಯ ಸಂಕಲನ `ಎಲ್ಲಿ ನವಿಲು ಹೇಳಿರೇ` ಬರುವಷ್ಟರಲ್ಲಿ ತಾಳ್ಯರ ಕಾವ್ಯ ಧೋರಣೆಗಳು ಬೇರೆಯಾಗಿದ್ದವು. ಅವರು ಭಾವ ಮತ್ತು ಗೇಯ ಗುಣಗಳ ಮೂಲಕ ಜೀವನ ಪ್ರೀತಿಯನ್ನು ಅರಸತೊಡಗಿದರು. ಈ ಬದಲಾವಣೆಯೇ ಅಂತಿಮವೇನೋ ಎಂದು ಭಾವಿಸುವಷ್ಟರಲ್ಲಿ ಅದರಿಂದ ಹೊರಬರುವ ಆದರೆ ಹೊರಬರಲು ಪೂರ್ಣ ಸಮ್ಮತವಿಲ್ಲದ ಒಂದು ಸಂದಿಗ್ಧ ತೊಳಲಾಟದಲ್ಲಿ ತಮ್ಮ `ಕಾವಳದ ಸಂಜೆಯಲ್ಲಿ` ಎಂಬ ಐದನೆಯ ಕವನ ಸಂಕಲನ ಹೊರತಂದಿದ್ದಾರೆ. 

ಕವಿಯೊಬ್ಬ ಹೊರಳುವಿಕೆ ಮತ್ತು ಬದಲಾವಣೆಗಳಿಗಾಗಿ ಕಾತರಿಸುವುದು ಸಹಜವೆನಿಸಿದರೂ ತನ್ನ ಕಾವ್ಯ ಸತ್ವವನ್ನು ಸತತವೂ ಅನುಮಾನಿಸಬೇಕಿಲ್ಲ. ಆದರೆ ಹಳತಿನ ಸಂದೇಹ ಮತ್ತು ಹೊಸತಿನ ಪ್ರೀತಿಯ ಮುಗ್ಧ ಮತ್ತು ವಿಪರೀತ ನಂಬುಗೆಗಳಿಂದಾಗಿ ತಾಳ್ಯ ತಮ್ಮ ಕಸುಬುಗಾರಿಕೆಯನ್ನು ಬಲವಂತದ ಅಗ್ನಿದಿವ್ಯಕ್ಕೆ ಸದಾ ಒಡ್ಡಿಕೊಂಡಿದ್ದಾರೆ. ಪ್ರಸ್ತುತ ಸಂಕಲನ ಅದರ ರೂಪವಾಗಿದೆ. ಪ್ರಯೋಗಶೀಲತೆ ಮತ್ತು ಪರಿವರ್ತನಾ ಹಂಬಲವು ವೇಗದ ಪ್ರಯತ್ನವಾದಾಗ ಅದು ಉಂಟುಮಾಡುವ ಸೃಜನಾತ್ಮಕ ತಲ್ಲಣಗಳ ಛಾಯೆಯಂತೆ ಈ ಕವಿತೆಗಳಿವೆ.

ಚಂದ್ರಶೇಖರ ತಾಳ್ಯ ತಮ್ಮ ಕವಿತೆಗಳ ತಾತ್ವಿಕತೆಯನ್ನು ಪ್ರಧಾನವಾಗಿ ಕಟ್ಟಿಕೊಂಡಿರುವುದು ವಚನ ಚಳವಳಿಯ ಪ್ರಭಾವದಲ್ಲಿ. ಅದಕ್ಕೆ ತಕ್ಕಂತೆ ಭಾಷೆಯನ್ನು ರೂಪಕಾತ್ಮಕವಾಗಿ ಬಳಸುವುದು ಅವರ ಶಕ್ತಿ. ಆಗಾಗ ಅದಕ್ಕೆ ನಾಟಕೀಯ ಲಯಗಳನ್ನು ಜೋಡಿಸಿ ಅದರ ವಿನ್ಯಾಸಗಳಲ್ಲಿ ಪರಿಣಾಮದ ಸೊಲ್ಲನ್ನು ತೀವ್ರ ಕಾಳಜಿಯಿಂದ ಹುಡುಕುತ್ತಾರೆ. ಅವರ ಮುಂದೆ `ಸ್ವಪ್ನ ಪ್ರತಿಮೆಯ ಎರಕ`ವೊಂದಿದೆ.
 
(ಕುಲುಮೆಯ ಹಾಡು) ಅದರ ಹುಡುಕಾಟ ಸುಲಭವಲ್ಲ. ಹೊರಗಿನ ಜಗತ್ತು ಕ್ಷೋಭೆಗೊಳಗಾಗಿದೆ. ಅಂತರಂಗದ ಜಗತ್ತು ಆತ್ಮವಂಚನೆಯಿಂದ ಕೂಡಿದೆ. ಅದಕ್ಕೆ ಕತ್ತಲೆಯು ಮುಸುಕಿದೆ. ಬೆಳಕಿಗಾಗಿ ಕಾತರಿಸುತ್ತಲೇ ಬಂದರೂ ಈಗ ನಿಂತಿರುವುದು ಕಾವಳದ ಸಂಜೆಯಲ್ಲಿ.
 
ವೈಯಕ್ತಿಕತೆಯ ದೂಳು ಕೊಡವಿ ಸಮುದಾಯದ ಸಂಕಟವನ್ನು ಪರಿಭಾವಿಸಬೇಕೋ ಇಲ್ಲವೇ ಸಮುದಾಯದ ನೋವುಗಳಲ್ಲಿ ವೈಯಕ್ತಿಕತೆಯನ್ನು ದೂಡಬೇಕೋ ಎಂಬ ತಹತಹಿಕೆಯಲ್ಲಿ `ಸಹಗಮನ` ಎಂಬ ದಾಂಪತ್ಯಗೀತ ಮೈದಾಳಿರುವಂತೆ `ಕಲ್ಯಾಣವತ್ತಲೇ` ಎಂಬಂತಹ ವ್ಯಾಪ್ತ ರಚನೆಯೂ ಈ ಸಂಕಲನದಲ್ಲಿ ಸಾಧ್ಯವಾಗಿದೆ. ಈ ಎರಡು ಬಗೆಯ ಶೋಧದಲ್ಲಿ ಕವಿಯ ತಾದಾತ್ಮ್ಯವನ್ನು ಹೀಗೆ ಕಾಣಬಹುದು.

ಗುಡುಗು ಸಿಡಿಲಿನ ನುಡಿಕೊಂದ; ಸ್ಪಟಿಕದುಸಿರು
ಎಲ್ಲಿ ಅಡಗಿದ್ದಾನೆ ಕೂಡಲ ಸಂಗಮ
ಯಾವ ಕದಳಿಯ ಹೊಕ್ಕ್ದ್ದಿದಾನೆ ಚನ್ನಮಲ್ಲಿಕಾರ್ಜುನ
ಜೋಳಿಗೆಯ ಪವಾಡಕ್ಕೆ ಮುದುರಿಕೊಂಡನೇ ಜಂಗಮ
ಆವಾವ ಸ್ಥಲದಲ್ಲೂ ಸ್ಥಾವರ ಕಳಶ ವಿಜೃಂಭಣ
....  ....  ....  ....  ....  ....  ....  ....
ಹಿಡಿವ ಕೈಯ ಮೇಲೆ ಕತ್ತಲೆ, ನೋಡುವ ಕಂಗಳ ಮೇಲೆ ಕತ್ತಲೆ
ಕಲ್ಯಾಣವತ್ತಲೇ, ಕಲ್ಯಾಣವತ್ತಲೇ, ಕಲ್ಯಾಣವತ್ತಲೇ

ಕತ್ತಲೆ ಎಂಬ ವಾಸ್ತವ ಹಾಗು ಕಲ್ಯಾಣ ಎಂಬ ಗಮ್ಯವನ್ನು ಕಲ್ಯಾಣಕ್ರಾಂತಿಯ ಇತಿಹಾಸ ಮತ್ತು ಸಮಾಜ ಕಲ್ಯಾಣದ ವರ್ತಮಾನದಲ್ಲಿ ಯಶಸ್ವಿಯಾಗಿ ಇಟ್ಟು ನೋಡಿದ್ದಾರೆ. ಇದನ್ನು ಕವಿ `ಬಸವಣ್ಣ ತಂದ ಬಟ್ಟೆಯ ಗಂಟು` ಎಂಬ ಕವನದಲ್ಲಿ ಮತ್ತಷ್ಟು ಹರಿತವಾಗಿ ಪರೀಕ್ಷಿಸಿದ್ದಾರೆ. ಕೃಷ್ಣೆ ತನ್ನ ಒಡಲಲ್ಲಿ ಬಸವನನ್ನು ಕರಗಿಸಿಕೊಂಡಮೇಲೆ ಉಳಿದ ದಂಡೆಯ ಮೇಲಿನ ಬಟ್ಟೆಯ ಗಂಟು ಕವಿಗೆ ಕಾಲಗಳ ನಡುವಿನ ಒಂದು ಸಾಪೇಕ್ಷ ಸಂಕೇತವಾಗಿದೆ.

ತೀರದಿಂದೆದ್ದು ಬಂದು ಗಂಟು ಬಿಚ್ಚಲು
ಕಲ್ಯಾಣವೆಂಬ ಕಲ್ಯಾಣ ಗಂಟಿನೊಳಗವಿತು
ವಚನ ಲಕ್ಷದ ಲಕ್ಷ್ಯದಲ್ಲಿ ಚೂರಾದ ಗಣ
....  ....  ...
ಗಂಟು ಕೈಯಲ್ಲಿ, ಗಂಟು ಗಂಟಿನ ಬುಗುಟು ತುದಿಯಲ್ಲಿ
ಈಗಲೀಗ ತಲೆ ತಗ್ಗಿಸಿದ ಬಸವ
ಕತ್ತಿ ಝಳಪಿಸುವ ಬಿಜ್ಜಳ
ಆ ಕಡೆ ಈ ಕಡೆ ಅದೇ ಅದೇ ದಳ

ಹರಿವ ಕೃಷ್ಣೆಯ ತಡೆಯಲೆ
ಮುಳುಗು ಬಸವನ ಮೇಲೆತ್ತಲೆ
ಗಂಟು
ಬಸವನೇ ಕಗ್ಗಂಟು
ಗಂಟು ಬಿಚ್ಚಿದರೆ ಹೀಗೆ
ಕಟ್ಟಿದರೆ ಭೂತದ ಹಾಗೆ

ಈ ವಸ್ತುನಿಷ್ಠ ಶೋಧಕ್ಕೆ ಪೂರಕವಾಗಿ ದುಡಿಯುವ ಇನ್ನೊಂದು ರಚನೆ `ಕುಲುಮೆಯ ಹಾಡುಗಳು`. ಇಲ್ಲಿ, `ಕಮ್ಮೋರ ಎಂಬ ಲೌಕಿಕ ಮತ್ತು ಕರ್ತಾರ` ಎಂಬ ಅಲೌಕಿಕದ ನಡುವಿನ ಗುದಮುರಿಗೆಯಿದೆ. ಸ್ವಪ್ನ ಪ್ರತಿಮೆಯ ಎರಕದಲ್ಲಿ ಏಕಾಂತವೂ ಲೋಕಾಂತವೂ ಸೂಚ್ಯವಾಗಿ ಮೇಳೈಸಿದೆ.

ಏಕಾಗ್ರತೆಗೆ ಭಂಗ, ಆಗಾಗ ತನ್ನದೇ ಕಣ್ಣ ಕಿಸುರು
ತನಗೆ ತಾನೇ ಸವಾಲಾಗುತ್ತಿದ್ದಾನೆ ಕಮ್ಮೋರ ಭೀಮಣ್ಣ
ಜಟೆ ಬಿಚ್ಚಿ ಕೊಡವಿದ್ದಾನೆ ಬೆನ್ನ ಹಿಂದೆ, ಲಟಿಗೆ ಮುರಿಯುತ್ತಾನೆ
ಸಿಡುಕಿ ಪುಡಿ ಪುಡಿ ಮಾಡಲೆಂಬಂತೆ ಅಪೂರ್ವದ ತನ್ನ ಎರಕವನ್ನೇ

`ಸಹಗಮನ` ಎಂಬ ನೀಳ್ಗವಿತೆಯ ದುಃಖ ಬೇರೆ ರೀತಿಯದು. ಇದು ಕನ್ನಡದ ಸಖೀಗೀತಗಳ ಸಾಲಿನಲ್ಲಿ ತಲೆಯೆತ್ತಿ ನಿಲ್ಲಬಲ್ಲಂತಹ ರಚನೆ. ಮನೆಯೊಳಗಿನ ಜೀವ ಸಂಬಂಧಗಳ ಎರಕದ ಹಾಡು ಮತ್ತು ಪಾಡುಗಳೆರಡನ್ನೂ ಒಳಗೊಂಡಿರುವ ಇಲ್ಲಿಯ ಕಥಾನಕವು ಸೊಗಸಾದ ಲಯ ಹೊಂದಿದೆ. ಕುಟುಂಬಕ್ಕೆ ಹೆದ್ದಾರಿಯ ಚರಿತೆಯಿರುವಂತೆ ಮಡಿಲ ದಾರಿಯೂ ಇದ್ದು ಇವುಗಳ ಸಮಾಯೋಜಕ ಹೆಣಿಗೆ ಮತ್ತು ಧೈರ್ಯಯುತ ನಡೆ ಇಲ್ಲಿಯ ಲಕ್ಷಣ. ಈ ಆಖ್ಯಾನದಲ್ಲಿ ಹಲವು ಮಿಡಿತದ ಪ್ರಶ್ನೆಗಳಿವೆ.

ಎಲ್ಲ ಸಂಜೆಯ ಹಾಡಿನಂತಲ್ಲವೀ ಸಂಜೆ ಹಾಡು
ಮುಂದೆ ಸಾಗರ ಬಿದ್ದ ಇರುಳಿನಂಥಾ ಪಾಡು
ಬಂಡಿ ಜಾಡನು ಬಿಟ್ಟು ಏಸು ಕಾಲವೋ ಏನೋ
ಹೆದ್ದಾರಿ ಚರಿತೆಗೋ ಯಾವುದ್ಯಾವುದು ಈಡು

ಮುಖ ಮರೆಸಿ ಕರಿ ಪರದೆ ರಂಗದಂಗಳದಲ್ಲಿ
ಜಗದ ದೀಪಗಳೆಲ್ಲ ಅದರ ಹಿಂದೆ
ಪರದೆ ಸರಿಯುವ ತನಕ ಕತ್ತಲೆಯ ಕೂಸುಗಳು
ನಾನು ಹೊಣೆಯೋ ನೀನು ಹೊಣೆಯೋ ನೆನಪೊಂದು ಮುಂದೆ

ಕಾಲ ಪರಿಪ್ರೇಕ್ಷ್ಯ ಮತ್ತು ಸಂಬಂಧ ಸೂಕ್ಷ್ಮಗಳನ್ನು ಅಮೂರ್ತವಾಗಿ ಆದರೆ ಪರಿಣಾಮಕಾರಿಯಾಗಿ ಹಿಡಿಯುವ `ಯಾವ ಚಿತ್ತದ ಮಳೆ`, ಕೆಲ ವಿಶಿಷ್ಟ ರೂಪಕಗಳ `ಭೂರಮೆಯ ಗಾನ`, `ಒಂಟಿ ದನಿಯ ಕೂಗು`, `ಕಾಯುವ ಕ್ರಿಯೆ` ಇಂತಹ ಕವಿತೆಗಳು ಗಮನ ಸೆಳೆಯುತ್ತವೆ.

ಇಷ್ಟಾಗಿಯೂ ತಾಳ್ಯರ ಸಮಸ್ಯೆಯಿರುವುದು ಸಂಕಲನದ ಬಹುತೇಕ ಕವನಗಳಲ್ಲಿ ಹಬ್ಬಿರುವ ಕಾವಳಕ್ಕೆ ತಕ್ಕ ನೆಲೆಯನ್ನು ತಾರ್ಕಿಕವಾಗಿ ಕಂಡುಕೊಳ್ಳದಿರುವಲ್ಲಿ ಮತ್ತು ಅವರ ಕಾವ್ಯ ಹಾಗೂ ರೂಪಕ ಮೂಲಗಳು ಸಮಕಾಲೀನ ಕಾವ್ಯದ ಹೊಸ ಬೆಳವಣಿಗೆಗಳನ್ನು ಆಸ್ಥೆಯಿಂದ ಕಾಣದಿರುವಲ್ಲಿ.

ಯಾರು ಮುರಿದರು ಕೈಯ ಯಾರು ಹರಿದರು ನಾಲಗೆ
ಯಾರು ಕೊಯ್ದರು ಕರುಳು ಕಿತ್ತು ಬಿಟ್ಟವರಾರು ಕಣ್ಣ    
(ಕತ್ತಲೆ ಕತ್ತಲೆಯನೆ ದೂಡುತಿದೆ)

ಪ್ರಾತಃಕಾಲದ ಓ ರವಿ ಕಿರಣವೇ ಗರಿಕೆ ಮೇಲಿನ ಇಬ್ಬನಿಯ ತಣಿವೇ
ಹಕ್ಕಿ ಗೊರಲಿನ ಸೂಕ್ಷ್ಮ ಸಂಗೀತವೇ ಸಂಜೆಬಾನಿಗೆ ತಾರೆ ಎಸೆದ ಮಿನುಗೇ 
ಧರೆಗಿಳಿದು ಧಗೆ ಕಳೆದ ಚಂದ್ರಮನ ಬೆಳಕೇ ಭುವನ ಕುಸುಮ ಪರಾಗವೇ         
(ನಿನಗೆಂದು ಶಾಂತಿ)

ಇಗೋ ನಾನು ಸಂಪಿಗೆಯ ಹೂವಾಗುವೆ
ಮಾಮರದ ಹಾಡಾಗುವೆ
ಮೂಡುವ ಕಿರಣಗಳಲ್ಲಿ 
ಮೂಸುವ ಮುಂಜಾವುಗಳಲ್ಲಿ 
ಉಷೆಯ ಕನ್ನಡಿಯಲ್ಲಿ ಬೆಳಗುತ್ತಲೇ ಇರುವೆ  
(ಮೇಲಧಿಕಾರಿಗೆ)

ಸಂಕಲನದುದ್ದಕ್ಕೂ ಇರುವ ಮೇಲುಸ್ತರದ ಇಂತಹ ಅನುರಣನ ತನ್ನ ರಮ್ಯ ತೋರಿಕೆಯನ್ನು ಸಾಬೀತುಪಡಿಸುವುದೇ ವಿನಾ ಕಾವ್ಯಕ್ಕೆ ಆಯಾಮ ತಂದುಕೊಡಬಲ್ಲ ಶಿಲ್ಪವಾಗುವುದಿಲ್ಲ. ಒಳಿತಾಗಲಿ ಕೆಡುಕಾಗಲಿ ಸಿದ್ಧ ಜೋಡಿಸುವಿಕೆಯಲ್ಲಿ ಮಾತಿಗೆ ಮಾತ್ರ ಕಟ್ಟುಬಿದ್ದಂತೆ ಎಷ್ಟೋ ಕಡೆ ಭಾಸವಾಗುತ್ತದೆ. 

ಸಂಕಲನದ ಎರಡನೆಯ ಭಾಗದಲ್ಲಿರುವ ಪ್ರಕೃತಿಯ ಗೇಯ ಲಹರಿಗಳು ಲಾಲಿತ್ಯದಿಂದ ಗಮನ ಸೆಳೆದರೂ ಸ್ವಂತಿಕೆ ಮತ್ತು ಸಮೃದ್ಧತೆಯ ಹೊಸತನ ತೋರುವುದಿಲ್ಲ. ಮೂರನೆಯ ಭಾಗದ ವ್ಯಕ್ತಿಚಿತ್ರಗಳು ಸಂಕಲನದ ಧೋರಣೆ ಮತ್ತು ನಂಬಿಕೆಗಳ ಅಂತರ್ಗತ ಭಾವವಾಗುವುದಿಲ್ಲ.
 
ಇಂತಲ್ಲಿ ತಾವೇ ನಿರ್ಮಿಸಿಕೊಂಡ ಸೀಮಿತ ಆಕೃತಿಕಲ್ಪಗಳ ಮುಂದೆ ಪರಿಪರಿಯಾಗಿ ಕಾವ್ಯಾತ್ಮಕವಾಗಿ ನಿವೇದಿಸುವಂತೆ ಕಾಣುವ ಕವಿಯ ಕಾವ್ಯಶಕ್ತಿಯು ವಸ್ತು ಬಹುಳತೆ, ವ್ಯಾಪ್ತ ನಿರ್ವಹಣೆ ಮತ್ತು ತನ್ನದೇ ಆದ ಭಾಷೆಯೊಂದನ್ನು ಅಪೇಕ್ಷಿಸುವಂತೆ ತೋರುತ್ತದೆ. ಇದು ತಾಳ್ಯರು ಆಹ್ವಾನಿಸಿಕೊಂಡಿರುವ ಹೊಸ ತಲ್ಲಣ ಮತ್ತು ಸವಾಲು.

ಕಾವಳದ ಸಂಜೆಯಲ್ಲಿ
ಲೇ: ಚಂದ್ರಶೇಖರ ತಾಳ್ಯ
ಪು: 132; ಬೆ: ರೂ. 80
ಪ್ರ: ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ

Thursday, July 28, 2011

ಕಥಾ ಸ್ಪರ್ಧೆಯ ಫಲಿತಾಂಶ

ದಿ. ಎಂ. ವ್ಯಾಸ ಅವರ ನೆನಪಿಗಾಗಿ ‘ತರಂಗ’ ಮತ್ತು ವ್ಯಾಸರ ಪುತ್ರ ಡಾ. ಎಂ. ತೇಜಸ್ವಿ ವ್ಯಾಸ್ ಸಂಯೋಜಿಸಿದ ‘ವ್ಯಾಸ ಕಥಾಸ್ಪರ್ಧೆ’ಯ ಮೊದಲ ಬಹುಮಾನ ಅನುಪಮಾ ಪ್ರಸಾದ್ ಕಾಸರಗೋಡು ಅವರು ಖಾದಿ ಅಂಗಿ’ ಕಥೆಗೆ, ಮತ್ತು ಎರಡನೆಯ ಬಹುಮಾನ ಕಸ್ತೂರಿಬಾಯಿರಿ, ಬಿಜಾಪುರ ಅವರು ‘ಎರಡು ರೆಕ್ಕೆಗಳು’ ಕಥೆಗೆ ಪಡೆದಿದ್ದಾರೆ.

ಮೂರನೆಯ ಬಹುಮಾನಕ್ಕೆ ‘ಬೇಟೆ‘ – ಇಂದ್ರಕುಮಾರ್ ಎಚ್.ಬಿ, ದಾವಣಗೆರೆ ಮತ್ತು ‘ನಂಜು’ -ವಿಜಯಾ ಮೋಹನ್,ತುಮಕೂರು ಅರ್ಹರಾಗಿದ್ದಾರೆ.

ಸಮಾಧಾನಕರ ಬಹುಮಾನ ‘ಸಾಗುವಾನಿ ಬಾಗಿಲು’ ಕಥೆಗೆ -ಸಂಧ್ಯಾ ಹೊನಗುಂಟಿಕರ್, ಗುಲ್ಬರ್ಗಾ ಅವರಿಗೆ ಹಾಗು ‘ಹೀಗೊಬ್ಬ ಪಾಂಡುರಂಗ ಕಾಳೆ’ ಕಥೆಗೆ -ಶ್ವೇತಾ ನರಗುಂದ, ಬೆಳಗಾವಿ ಅವರಿಗೆ ನೀಡಲಾಗಿದೆ.

ಕಥಾಸ್ಪರ್ಧೆಗೆ ಫಕೀರ್ ಮಹಮ್ಮದ್ ಕಟ್ಪಾಡಿ,ಪ್ರೊ. ಎಚ್.ಎಸ್. ರಾಘವೇಂದ್ರ ರಾವ್ಜ ಮತ್ತು .ಪಿ. ಬಸವರಾಜು ಅವರು ತೀರ್ಪುಗಾರರಾಗಿದ್ದರು.

Sunday, July 24, 2011

ನವ ಕರ್ನಾಟಕದ -ಬದಕು ಬದಲಿಸಬಹುದು

Baduku Badalisabahudu
A collection of Articles by Nemichandra

Tales of fortitude

Manninda Eddavaru by Kusuma Shanbhag

Navakarnataka, Rs. 80

Kusuma Shanbhag's “Manninda Eddavaru” is a novel, that in quite a remarkable manner, portrays the existential predicament of a woman, Kaveri. However, through Kaveri's conflicts, anxieties and, more importantly, indomitable will, the work foregrounds the plight of women caught in a feudal patriarchal order where the male, both in his active and utterly passive states, attempts to negate the very being of women even though he unhesitatingly uses the woman to fulfil all his needs.

The manner in which Kusuma Shanbhag weaves the story of Kaveri and constructs the life of an entire community in a very simple, but arresting way is truly commendable. The entire narration, totally devoid of rhetorical flourishes, is simple, direct, immediate and opens up a world not very familiar to urban readers. But the immediacy of experience that comes through the rich details of the characters the work portrays, dissolves all barriers the reader may carry because of her/his own different location in terms of space and time.

“Manninda Eddavaru” revolves round a small agrarian community fairly removed from the modernised urban centres, especially as regards the attitudes and values it carries. What is truly extraordinary about the novel is that its scheme of narration never, ever, slips into a terrain where the situations and the characters depicted emerge as ideological constructions of the author. At the very centre of its feudal world we behold women of exceptional strength and character who, in different ways, come to terms with the nature of their lives, though, of course, not all of them confront and defy the patriarchal order as the protagonist Kaveri does, and so very triumphantly.

The stories of Subbamma, Savitri, Seetha, Janaki, Shylaja and Kaveri are actually fine images of the different physical and emotional realities of women which eventually integrate to evolve as metaphors for women's lives. Women of the older generation like Subbamma and Janaki are deeply aware of the injustice they have to put up with even though they are not in a position to protest. It is the younger generation that stands up to resist the tyranny of the unjust and unethical ways of men. While doing so they do not mind breaking feudal family ties, and rules of the caste system. Kaveri is deprived of education, and is even forced to remain unmarried for she has to slave for the well being of the family and her brother. It is this insensitive and brutal will of the male that Kaveri fights fearlessly and even goes to a court of law against her father and brother to get justice. The refusal to get tied down to a decadent conservative male order propels an upper caste girl like Seetha to fall in love and elope with Kechu, a labourer from the lower caste, unmindful of the consequences. The fervent, but helpless, pleas of Subbamma and Janaki, as house bound women, do reflect the presence of a sense of justice and equality even in women steeped in the traditional order. Kusuma Shanbhag takes us into the inner cosmos of women without adversely affecting the experiential realm of women, which as a woman novelist, she is in fact deeply preoccupied with. This is the major strength of “Manninda Eddavaru”.

The other crucial dimension of the novel is that it does not parade defiant women as totally successful and victorious. Seetha becomes self destructive as her life with Kechu develops independent of traditional values. Kaveri, for all her defiance, blunders while choosing the utterly cunning Narayana for a husband. In spite of all these the women do not perish in body and spirit. Kaveri looks forward to a future with a pathetically abandoned child to nurse and care for. “Manninda Eddavaru” is about those women who daringly rise from the dust they have been pushed into by a desensitised social order with no elementary understanding of its own rottenness.

N. Manu Chakravarthy


Saturday, July 23, 2011

ಪೋಬಿಯ: ಎಚ್ಚರ ತಪ್ಪಿದರೆ ಅಪಾಯ


- ಸಂಪತ್ ಬೆಟ್ಟಗೆರೆ

ಹರುಕು ಬಟ್ಟೆ, ಹಸಿದ ಹೊಟ್ಟೆಯ ನಡುವೆ ಸ್ಲೇಟು, ಬಳಪ ಹಿಡಿದು ಸರಕಾರಿ ಶಾಲೆ, ಅಂಗನವಾಡಿಯತ್ತ ಬರಿಗಾಲಲ್ಲಿ ಹೆಜ್ಜೆ ಇಡುವ ಕನ್ನಡ ಹೈಕಳು; ಶೂ, ಟೈ, ಕೋಟು ಧರಿಸಿ-ಆಟೊ, ಟ್ಯಾಕ್ಸಿ, ಕಾರನೇರಿ ಕೆ.ಜಿ. ಸ್ಟ್ಯಾಂಡರ್ಡ್ಸ್ ಇಂಗ್ಲಿಷ್ ಸ್ಕೂಲ್‌ಗಳತ್ತ ಜರ್ನಿ ಮಾಡುವ ಇಂಗ್ಲಿಷ್ ಮಕ್ಕಳು. ಹಿರಿಯರ ದಿನನಿತ್ಯದ ತಾಪತ್ರಯಗಳೆಲ್ಲ ಕಳೆದು ಹೋಗುತ್ತಿರುವುದು ಅಂತೆಯೇ ಬೆಳೆದು ದೊಡ್ಡವರಾಗುತ್ತಿರುವುದು ಕಾಲದ ಮಹಿಮೆಯೇ? ಸಂದಭರ್ದ ಅನಿವಾರ್ಯತೆಯೇ? ಎಂಬಂತಹ ತಳಮಳಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮನೋವೈದ್ಯ ಡಾ.ಪಿ.ವಿ. ಭಂಡಾರಿಯವರು ‘ಸ್ಕೂಲ್ ಫೋಬಿಯ’ ಕೃತಿಯಲ್ಲಿ ಮಾಡಿದ್ದಾರೆ.

ಅವರು ತಮ್ಮಲ್ಲಿಗೆ ಚಿಕಿತ್ಸೆಗೆಂದು ಬಂದಂತಹ ಎಳೆಮಕ್ಕಳ ಮನಸ್ಥಿತಿಯನ್ನು ‘ಆಪ್ತ ಸಮಾಲೋಚಕ’ನಾಗಿ ಗ್ರಹಿಸಿ ಸಾದೃಶ್ಯ ಘಟನಾವಳಿಗಳಿಗೆ ಅಕ್ಷರರೂಪ ನೀಡಿ, ಕಥೆಗಳನ್ನಾಗಿ ಹೆಣೆದು ಮಾದರಿ ಚಿತ್ತ ಚಿತ್ರಣ ದರ್ಪಣವನ್ನಾಗಿಸಿದ್ದಾರೆ. ಂ+ ಪಡೆಯುವ ಬುದ್ಧಿವಂತೆ 5ನೇ ತರಗತಿ ವಿದ್ಯಾರ್ಥಿ ಸ್ವಾತಿ ಒಂದು ದಿನ ತನ್ನ ತಾಯಿಯ ಬಳಿ ‘‘ಅಮ್ಮ ನಾನು ಸ್ಕೂಲ್‌ಗೆ ಹೋಗೋಲ್ಲ’’ ಎಂದು ಇದ್ದಕ್ಕಿದ್ದಂತೆಯೇ ಹಟ ಹಿಡಿಯುವುದು, ಹತ್ತನೆ ತರಗತಿ ಓದುತ್ತಿರುವ ಮಯೂರ್ ಕೆಲವು ದಿನಗಳಿಂದ ಸಪ್ಪಗಾಗಿ ಓದಿನಲ್ಲಿ ಆಸಕ್ತಿ ಕಳೆದುಕೊಂಡಿರುವುದು ಕ್ರಮವಾಗಿ ಆ ಮಕ್ಕಳ ತಂದೆ ತಾಯಿಗಳಿಗೆ ಆತಂಕ ಹುಟ್ಟಿಸುವ ಸಂಗತಿಗಳಾಗಿ

ಪುಸ್ತಕ : ಸ್ಕೂಲ್ ಫೋಬಿಯಲೇಖಕರು: ಡಾ.ಪಿ.ವಿ. ಭಂಡಾರಿಪ್ರಥಮ ಮುದ್ರಣ: 2011ಬೆಲೆ: 50ರೂ.ಪ್ರಕಾಶಕರು:ಸರಸ್ವತಿ ಬಾಯಿ ಪ್ರಕಾಶನಮಾನಸ ಸದಾನಂದ ಟವರ್ಸ್ ಸಿ.ಟಿ. ಬಸ್‌ಸ್ಟಾಂಡ್ ಉಡುಪಿದೂರವಾಣಿ: 9242124621

ಕಾಡುತ್ತವೆ. ಪುರೋಹಿತರು, ದೇವರು ಎಂದು ಸುತ್ತಾಡುವ ಪೋಷಕರು ಕೊನೆಗೆ ಮನೋವೈದ್ಯ ಭಂಡಾರಿಯವರನ್ನು ಸಂಪರ್ಕಿಸಿದಾಗ ಸ್ವಾತಿಗೆ ‘ಗೀಳು ರೋಗ’ ಮಯೂರನಿಗೆ ‘ಖಿನ್ನತೆ’ಯಿದೆ ಎಂದು ಅರಿವಾಗುತ್ತದೆ.

ಇದೊಂದು ‘ಸ್ಕೂಲ್ ಫೋಬಿಯ’ ಎಂದು ನಿರೂಪಿಸಿದ ಲೇಖಕ, ಕವಿ, ವೈದ್ಯ ಡಾ. ಭಂಡಾರಿ, ಪೋಷಕರೆನಿಸಿಕೊಂಡವರು ಮಕ್ಕಳ ಮುಗ್ಧತೆಯನ್ನಷ್ಟೇ ಅಲ್ಲದೆ ಒಳಮನಸ್ಸಿನ ಸೂಕ್ಷ್ಮತೆಯನ್ನು ತಮ್ಮ ತಿಳಿಗಣ್ಣಿನಿಂದ ನೋಡಬೇಕಾದ ಅವಶ್ಯಕತೆ, ಸಂದರ್ಭ ಹಾಗೂ ಕಾಲದ ತುರ್ತಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ನನ್ನ ಹತ್ತಿರವು ಬಾಕ್ಸ್ ಇದೆ ಸಾರ್ ‘ನಾನೇನು ತಪ್ಪುಮಾಡಲಿಲ್ಲ ಸಾರ್- ಸಾರಿ’ ಎಂಬ ಕಥಾಲೇಖನಗಳಲ್ಲಿ ಶಿಕ್ಷಕರು
ವಿದ್ಯಾರ್ಥಿನಿಯರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಆಜ್ಞಾರ್ಪೂಕ ವ್ಯಕ್ತಿತ್ವವನ್ನು ಪ್ರದರ್ಶಿಸುವುದು ಏಕಮುಖ ಧೋರಣೆಯನ್ನು ಸೂಚಿಸುತ್ತದೆ. ಬದಲಿಗೆ ದ್ವಿಮುಖ ಪ್ರೇರಣೆಯ ಅವಶ್ಯಕತೆಯ ಬಗೆಗೆ ಭಂಡಾರಿಯವರು ಗಮನ ಸೆಳೆಯುತ್ತಾರೆ. ‘‘ನನ್ನ ಹೆಸರು ವೆಂಕಟಪ್ಪ ಅಲ್ಲ. ಸನತ್‌ಕುಮಾರ’’ ಎಂಬ ಕಥಾಚಿತ್ರ ಕೀಳರಿಮೆಯಿಂದ ಬಳಲಿ ಬೆಂಡಾದ ಒಬ್ಬ ನತದೃಷ್ಟ ವಿದ್ಯಾರ್ಥಿಯ ಮೂಕ ವೇದನೆಯಾಗಿದೆ. ಮನೆ ದೇವರ ಆಶೀರ್ವಾದದಿಂದ ಜನಿಸಿದವನು ಎಂದು ದೇವರ ಹೆಸರನ್ನೇ ನಾಮಕರಣ ಮಾಡುವ ಪೋಷಕರ ಪ್ರೀತಿ-ಮುಂದೆ ಸಹಪಾಠಿಗಳು ವ್ಯಂಗ್ಯವಾಗಿ ಕರೆಯುವ ಹೆಸರಾಗಿ ಪರಿವರ್ತನೆ ಹೊಂದಿ ಆತನಲ್ಲಿ ಕೀಳರಿಮೆ ಎಂಬ ಭೀತಿಯನ್ನುಂಟು ಮಾಡುವ ದುಃಸ್ವಪ್ನವಾಗಿ ಕಾಡುವುದು ದುರಂತಮಯವಾಗಿ ಚಿತ್ರಿತವಾಗಿದೆ. ಆದುದರಿಂದಲೇ ಉಪಾಧ್ಯಾಯರು ‘ವೆಂಕಟಪ್ಪ’ ಎಂದು ಹಾಜರಿ ಕೂಗಿದೊಡನೆಯೇ- ‘ಸನತ್‌ಕುಮಾರ’ ಎಂದು ತನಗೆ ತಾನೇ ಸಾಕ್ಷೀಕರಿಸಿಕೊಂಡ ಹೆಸರನ್ನು ಕರೆಯಲು ತಾಕೀತು ಮಾಡುತ್ತಾನೆ. (ಇದು ರಾಷ್ಟ್ರಕವಿ ಕುವೆಂಪುರವರು ನನ್ನ ಹೆಸರು ‘ಪುಟ್ಟಪ್ಪ’ನಲ್ಲ, ‘ಸ್ವಾಮಿ ವಿವೇಕಾನಂದ’ ಎಂದು ತನ್ನ ಗುರುಗಳಿಗೆ ತಾಕೀತು ಮಾಡಿದ ಪರಿಯಂತೆ ಕಂಡುಬರುತ್ತದೆ. ಹಾಗಾದರೆ ಕುವೆಂಪುರವರು ಕೂಡ ಸ್ಕೂಲ್ ಫೋಬಿಯದಿಂದ ಬಳಲಿದ್ದರೆ? ಎಂಬ ಪ್ರಶ್ನೆಗೆ ಉತ್ತರವನ್ನು ಮನೋವೈದ್ಯ ಭಂಡಾರಿಯವರೇ ನೀಡಬೇಕಿದೆ!)

‘‘ಫೋಬಿಯ ಎಂದರೆ ಯಾವುದಾದರೂ ಒಂದು ವಿಷಯದ ಬಗ್ಗೆ ವಿಪರೀತ ಅರ್ಥಹೀನವಾದ ಹೆದರಿಕೆ. ಫೋಬಿಯ ಇರುವವರು ಆ ಹೆದರಿಕೆ ಇರುವ ಸ್ಥಳದ ಬಗ್ಗೆ ಯೋಚಿಸಿದರೂ ಕೂಡ ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆತಂಕದ ಚಿಹ್ನೆಗಳು ತೋರಿಬರುತ್ತದೆ. ಫೋಬಿಯ ಇರುವವರು ಫೋಬಿಯ ತರುವಂತಹ ಸ್ಥಳಗಳಿಗೆ ಹೋಗುವುದನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳುತ್ತಾರೆ. ಇದನ್ನು
ೞಅಟಜಿಚ್ಞ್ಚಛಿ ಚಿಛಿಜಿಟ್ಟೞಎಂದು ಹೇಳುತ್ತಾರೆ. ‘ಶಾಲಾ ಫೋಬಿಯ’ ಕೂಡ ಒಂದು ಫೋಬಿಯ.. ಶಾಲೆಯನ್ನೇ ನೋಡಿ ಹೆದರುವವರಿದ್ದಾರೆ. ಶಾಲೆ ಬಸ್ಸು ಏರಲು ಹೆದರುವವರಿದ್ದಾರೆ’’ ಎಂದು ತಿಳಿಸುವ ಡಾ. ಪಿ.ವಿ. ಭಂಡಾರಿ ಮಕ್ಕಳ ಜಗತ್ತಿನ ಒಳತೋಟಿಯನ್ನು ಅರ್ಥೈಸುವ ಪ್ರಯತ್ನಕ್ಕೆ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ. ಅಂಕದ ಪರದೆಯನ್ನು ಸರಿಸಿ ಸ್ಕೂಲ್ ಫೋಬಿಯದ ನೈತಿಕ ದರ್ಶನಕ್ಕೆ ಕರೆ ನೀಡುತ್ತಾರೆ. ಈ ಕೃತಿಯನ್ನು ಕುತೂಹಲಕ್ಕಾದರೂ ಪೋಷಕರು ಹಾಗೂ ಶಿಕ್ಷಕರು ಓದಿದ್ದೇಯಾದರೆ ಕಳೆದು ಹೋಗಿರುವ ಮಕ್ಕಳು ಬಂಧನದಲ್ಲಿರುವ ‘ಅಡಗು ತಾಣ’ ದೊರೆಯಬಹುದೇನೋ?

Wednesday, July 20, 2011

ಜಾನಪದ ಅಕಾಡೆಮಿ ಪ್ರಶಸ್ತಿ ಸಮಾರಂಭ

ಜಾನಪದ ಅಕಾಡೆಮಿ ಪ್ರಶಸ್ತಿ ಸಮಾರಂಭ

1

ಗಣಿಯಾಳದಲ್ಲಿ ಸಿಕ್ಕಿಹಾಕಿಕೊಂಡ 33 ಕಾರ್ಮಿಕರನ್ನು ಮೇಲಕ್ಕೆತ್ತಿದ ಅಭೂತಪೂರ್ವ ಘಟನೆಯ ದಾಖಲೆ ಕನ್ನಡದಲ್ಲಿ

. . .
ರಾಷ್ಟಪತಿ ಬಂದರೆಂಬ ಸುದ್ಧಿ ಕೇಳಿ ಎಲ್ಲಾ ಕ್ಯಾಮರಾಗಳೂ ಮಾಧ್ಯಮ ಕೇಂದ್ರಕ್ಕೆ ದೌಡಾಯಸಿದವು.

ಅದುವರೆಗೆ ಸುರಕ್ಷಿತವಾಗಿ ಬಚ್ಚಿಟ್ಟಿದ್ದ ಕೆಂಪಕ್ಷರದ ಚೀಟಿ ಆಂಡ್ರೂ ಸುಗಾರೆಯ ಕೈ ದಾಟಿ ಈಗ ಪಿನೆರೊ ಕೈಗೆ ಬಂತು. ಆಳದಿಂದ ಬಂದ ಆ ಪುಟ್ಟ ಸಂದೇಶವನ್ನು ರಾಷ್ಟ್ರಪತಿ ಎತ್ತಿ ಹಿಡಿದು ಕ್ಯಾಮೆರಾಗಳಿಗೆ ಪ್ರದರ್ಶಿಸಿದರು. `ನಾವು 33 ಜನರೂ ಸುರಕ್ಷಿತವಾಗಿದ್ದೇವೆ’ ಎಂಬರ್ಥದ ಬರಹದ `ಲೋಸ್ 33′ (ಈ 33) ಎಂಬ ಪುಟ್ಟ ಪದ ಇಡೀ ಅಮೆರಿಕಾ ಖಂಡದ ಸಹಸ್ರಾರು ಟಿವಿ ಚಾನೆಲ್ ಗಳಲ್ಲಿ, ಪತ್ರಿಕೆಗಳಲ್ಲಿ ತಲೆಬರಹವಾಗಿ ರಾರಾಜಿಸಿತು.

ಅದೇ ವೇಳೆಗೆ ಡ್ರಿಲ್ಲಿಂಗ್ ಯಂತ್ರದ ತಾಂತ್ರಿಕ ಸಿಬ್ಬಂದಿ ಭಾರೀ ಗಾತ್ರದ ತಂತಿ ಸುರುಳಿಯನ್ನು ಹೊತ್ತು ತಂದಿದ್ದರು. ತಂತಿಯ ತುದಿಯಲ್ಲಿ ಒಂದು ಪುಟ್ಟ ಫೋನ್ ಉಪಕರಣವೊಂದನ್ನು ಕಟ್ಟಿ ಮೆಲ್ಲಗೆ ರಂಧ್ರದ ಮೂಲಕ ಇಳಿ ಬಿಟ್ಟರು. `ಸಹಾಯ ಬರಲಿದೆ, ಗಣಿ ಸಚಿವರು ತುಸು ಹೊತ್ತಿನಲ್ಲೇ ಮಾತಾಡಲಿದ್ದಾರೆ. ನಿಮ್ಮಲ್ಲಿ ಯಾರಾದರೊಬ್ಬರು ರಂಧ್ರದ ಬಳಿ ನಿಂತಿರಿ’ ಎಂಬ ಪುಟ್ಟ ಸಂದೇಶದ ಚೀಟಿಯೊಂದನ್ನು ಫೋನ್ ಜತೆ ಕಟ್ಟಿದ್ದರು. ಅದು ಆ ಮುಷ್ಟಿಯಗಲದ ರಂಧ್ರದಲ್ಲಿ ಮೆಲ್ಲಮೆಲ್ಲನೆ ಇಳಿಯುತ್ತ 680 ಮೀಟರ‍್ ಆಳದಲ್ಲಿದ್ದವರನ್ನು ತಲುಪಿತು. ರೆಕಾರ್ಡಿಂಗ್ ವ್ಯವಸ್ಥೆಯನ್ನೆಲ್ಲ ಮತ್ತೊಮ್ಮೆ ಪರಿಶೀಲಿಸಿದ್ದಾಯಿತು.

ಅರ್ಧ ಗಂಟೆಯಲ್ಲಿ ಪಾತಾಳದಲ್ಲಿ ಫೋನ್ ರಿಂಗಾಯಿತು. ಕಾರ್ಮಿಕ ತಂಡದ ಮುಖ್ಯಸ್ಥ ಲೂಯಿಸ್ ಊರ್ಝುವಾ ಫೋನ್ ಎತ್ತಿಕೊಂಡ.

`ಹೇಗಿದ್ದೀರಾ ಎಲ್ಲ?’ ಸಚಿವರ ಪ್ರಶ್ನೆಗೆ ಕೆಳಿಗಿನಿಂದ ತುಸು ಕ್ಷೀಣವಾದ ಆದರೆ ಸ್ಪಷ್ಟ ಉತ್ತರ ಬಂತು.

`ನಾವೆಲ್ಲಾ ಕ್ಷೇಮವಾಗಿದ್ದೇವೆ. ರಕ್ಷಣೆ ಬರುವುದನ್ನೇ ಕಾಯ್ತಾ ಇದ್ದೇವೆ’ ಉರ್ಝುವಾ ಧ್ವನಿ.

ಗೋಲ್ ಬೋರ್ನ್ ಮುಂದಿನ ಮಾತು ಹೇಳುವ ಮೊದಲೇ ಕೆಳಗಿನಿಂದ ಮಾತು ಕೇಳಿಸಿತು:

`ಸರ‍್, ಒಂದು ಕ್ಷಣ ನಿಲ್ಲಿ. ನಾವೆಲ್ಲ ಇಲ್ಲಿ ಒಟ್ಟಾಗಿ ನಿಂತಿದ್ದೇವೆ’.

ತುಸು ಅವಾಕ್ಕಾದ ಗಣಿಸಚಿವರು ಫೋನನ್ನು ಆಚೆ ಕಿವಿಯಿಂದ ಈಚೆ ಕಿವಿಯತ್ತ ತರುತ್ತಲೇ ಕೆಳಗಿನಿಂದ ತೀರ ಪರಿಚಿತ ವೃಂದಗಾನ ಕೇಳಬಂತು -

`ಪ್ಯೂರೊಚಿಲೀ ಎಸ್ತೂಸಿಲೋ ಅಜುವಾಲ್ಡೊ. . .’

ಗೋಲ್ ಬೋರ್ನ್ ಹಠಾತ್ತನೆ ಸೆಟೆದು ನಿಂತರು. ಸಚಿವರ ಸುತ್ತ ನಿಂತವರಿಗೆ ತುಸು ಗಾಬರಿ. ಏನಾಗಿರಬಹುದು?

ಎರಡು ನಿಮಿಷ ಮೌನವಾಗಿ ಸೆಟೆದೇ ನಿಂತಿದ್ದ ಸಚಿವರು,

`ಓ ಎಲ್ ಸಿಲೋ…. ಓ ಎಲ್ ಸಿಲೊ …. ಕೊಂತ್ರಾಲಾ ಒಪ್ರೆಸೆನ್ ….’ ಎಂದು ರಾಗವಾಗಿ ಹೇಳಿದಾಗ ಎಲ್ಲರಿಗೂ ಅರ್ಥವಾಯಿತು.

ಪಾತಾಳದಲ್ಲಿದ್ದ ಎಲ್ಲ 33 ಜನರೂ ಒಟ್ಟಾಗಿ ಚಿಲಿಯ ರಾಷ್ಟಗೀತೆಯನ್ನು ಹಾಡುತ್ತಿದ್ದರು!

ನೆರೆದಿದ್ದವರ ಕಣ್ಣು ಮಂಜಾಗಿತ್ತು.
….

- ಪುಸ್ತಕದೊಳಗಿನಿಂದ (ಪುಟ : 39-40)

ಏಳುನೂರು ಮೀಟರ‍್ ಆಳದಲ್ಲಿ 33 ಗಣಿಗಾರರು ಸಿಕ್ಕಿಹಾಕಿಕೊಂಡಿದ್ದಾರೆ. ಹದಿನೇಳು ದಿನ ಶ್ರಮಿಸಿ 3 ಅಂಗುಲ ಬೋರ‍್ ರಂಧ್ರ ಕೊರೆದು ನೋಡಿದರೆ ಅವರೆಲ್ಲ ಬದುಕಿರುವುದು ಗೊತ್ತಾಗಿದೆ. ಇನ್ನೂ ದೊಡ್ಡ ರಂಧ್ರ ಕೊರೆದು ಅವರನ್ನು ಮೇಲಕ್ಕೆತ್ತಲು ನಾಲ್ಕು ತಿಂಗಳೇ ಬೇಕು. ಅದುವರೆಗೆ ಆ ಮುಷ್ಟಿಗಾತ್ರದ ರಂಧ್ರದ ಮೂಲಕ ಅವರಿಗೆ ಆಹಾರ-ಔಷಧ ರವಾನಿಸಬೇಕು; ಅವರನ್ನು ಮೇಲಕ್ಕೆತ್ತಲು ರಾಕೆಟ್ ಮಾದರಿಯ ಲಿಫ್ಟ್ ನಿರ್ಮಿಸಬೇಕು.,

2010ರ ಅಕ್ಟೋಬರ‍್ ನಲ್ಲಿ ಚಿಲಿ ಎಂಬ ಪುಟ್ಟ ದೇಶ ಎಲ್ಲರನ್ನೂ ಸುರಕ್ಷಿತ ಮೇಲೆತ್ತಿದಾಗ ಆ ಮಹಾಸಾಹಸದ ವೀಕ್ಷಣೆಗೆ 3000 ವರದಿಗಾರರು ಸೇರಿದ್ದರು. ನೂರು ಕೋಟಿಗೂ ಹೆಚ್ಚು ಜನರು ನೇರ ಪ್ರಸಾರದಲ್ಲಿ ಅದನ್ನು ಕಣ್ಣಾರೆ ನೋಡಿದರು. ಸಾಮಾನ್ಯ ಪ್ರಜೆಗಳ ಈ ಅಸಾಮಾನ್ಯ ಸಾಧನೆ `ಮನುಕುಲಕ್ಕೇ ಸ್ಫೂರ್ತಿದಾಯಕ ಸಾಧನೆ’ ಎಂಬ ಶ್ಲಾಘನೆಗೆ ಪಾತ್ರವಾಯಿತು.

ಕಲ್ಪನೆಗೂ ಮೀರಿದ ಈ ನೈಜಕತೆಯನ್ನು ಥ್ರಿಲ್ಲರ‍್ ಶೈಲಿಯಲ್ಲಿ ಬರೆದ ಸರೋಜಾ ಪ್ರಕಾಶ್ ಭೌತವಿಜ್ಞಾನದ ಉಪನ್ಯಾಸಕಿಯಾಗಿದ್ದವರು. ವಿಜ್ಞಾನವನ್ನು ಎಲ್ಲರಿಗೂ ಅರ್ಥವಾಗುವಂತೆ ಬರೆಯುವ ಇವರು ಚಿಲಿ ಸಾಹಸದ ಕಥೆಯನ್ನು ಎಲ್ಲರಿಗೂ ಇಷ್ಟವಾಗುವಂತೆ ಬರೆದಿದ್ದಾರೆ. ಈ ಅಪೂರ್ವ ಘಟನೆ ಇಂಗ್ಲೀಷ್ ನಲ್ಲಿ ಕಾದಂಬರಿಯಾಗಿಯೋ, ಸಿನೆಮಾ ಆಗಿಯೋ ಬರುವ ಮೊದಲೇ ಕನ್ನಡ ಸಾಹಿತ್ಯಕ್ಕೆ ಸೇರ್ಪಡೆಯಾಗುತ್ತಿದೆ. ಅದು ಹೆಮ್ಮೆಯ ದಾಖಲೆ.

- ನಾಗೇಶ ಹೆಗಡೆ
(ಪುಸ್ತಕದ ಬೆನ್ನುಡಿಯಿಂದ )

ಶೀರ್ಷಿಕೆ: ಚಿಲಿಯ ಕಲಿಗಳು – ಗಣಿ ಪಾತಾಳದಲ್ಲಿ 33 ಜನ 69 ದಿನ ಲೇಖಕರು:ಸರೋಜಾ ಪ್ರಕಾಶ ಪ್ರಕಾಶಕರು: ಭೂಮಿ ಬುಕ್ಸ್ ಪುಟಗಳು:156+8 ಬೆಲೆ:ರೂ.110/-

Saturday, July 16, 2011

ಭೀಮಣ್ಣ ಗಜಾಪುರ ಅವರ ` ನೋವಿನ ಬಣ್ಣಗಳು’ ಪುಸ್ತಕ ಬಿಡುಗಡೆ

https://mail.google.com/mail/?ui=2&ik=64db019aae&view=att&th=13131835aed180b2&attid=0.1&disp=inline&realattid=f_gq65gfdq0&zw

ಕೂಡ್ಲಿಗಿಯ ಪಂಚಾಚಾರ್ಯ ಕಲ್ಯಾಣಮಂಟಪದಲ್ಲಿ 17. 07. 2011 ರಂದು ಬಳ್ಳಾರಿಯ ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಪ್ರಕಟಿಸಿರುವ ಭೀಮಣ್ಣ ಗಜಾಪುರ ಅವರ ` ನೋವಿನ ಬಣ್ಣಗಳು’ ಪುಸ್ತಕ ಬಿಡುಗಡೆ ಇದೆ. ಡಾ. ಮಲ್ಲಿಕಾ ಘಂಟಿ ಅವರು ಬಿಡುಗಡೆ ಮಾಡುತ್ತಾರೆ,ಅರುಣ್ ಪುಸ್ತಕ ಕುರಿತು ಮಾತನಾಡುತ್ತಾರೆ. ವೆಂಕಟಗಿರಿ ದಳವಾಯಿ, ಸಿ. ಮಂಜುನಾಥ ,ಸಿದ್ದರಾಮ ಹಿರೇಮಠ ಮುಂತಾದ ಪತ್ರಕರ್ತರೆಲ್ಲ ಇರುತ್ತಾರೆ. ಈ ಪುಸ್ತಕ ಪತ್ರಿಕೋದ್ಯಮದ ನುಡಿಚಿತ್ರಗಳ ವಿಸ್ತಾರವನ್ನು ಹೆಚ್ಚಿಸುವಂತಿದೆ. ಸಾದ್ಯವಾದರೆ ಬನ್ನಿ

Sunday, July 3, 2011

ಹಾಡು ಪಠ್ಯದಲ್ಲಿ ಓದು ಪಠ್ಯದ ನೆನಪು

ಅರುಣ ಜೋಳದ


ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಅವರು ಸಂಪಾದಿಸಿದ ‘ಬಂಡಿ ಬಂದಾವು ಬಾಳೆ ವನದಾಗೆ’ ಜನಪದ ಗೀತೆ ಸಂಗ್ರಹದ ಪುಸ್ತಕ. ಈ ಕೃತಿಗೆ ೨೦೧೦ ರ ಜಾನಪದ ಅಕಾಡೆಮಿ ಪ್ರಶಸ್ತಿ ಬಂದಿದೆ. ೧೬೩ ಪುಟದ ಈ ಪುಸ್ತಕದಲ್ಲಿ ೩೧ ಜನ ಜನಪದ ಗಾಯಕ, ಗಾಯಕಿಯರು ಹಾಡಿದ ೭೨ ಜನಪದ ಗೀತೆಗಳು, ೨೨ ಪುಟದ ದೀರ್ಘ ಪ್ರಸ್ತಾವನೆಯೂ, ಗೊರುಚ ಅವರ ಮುನ್ನುಡಿಯೂ ಇದೆ. ಈ ಕೃತಿಯನ್ನು ಸಿರಾದ ಗಡಿನಾಡ ಜಾನಪದ ಸಂಪರ್ಕಾಭಿವೃಧ್ಧಿ ಕೇಂದ್ರ ಪ್ರತಿಷ್ಠಾನ ಪ್ರಕಟಿಸಿದೆ.

ಚಿಕ್ಕಣ್ಣ ಅವರು ಹದಿನೈದಕ್ಕೂ ಹೆಚ್ಚಿನ ಜಾನಪದ ಕುರಿತಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಸಂಪಾದನೆ ಮತ್ತು ಜಾನಪದ ಸಂಶೋಧನೆಗೆ ಸಂಬಂಧಿಸಿದವು. ಇದು ಚಿಕ್ಕಣ್ಣ ಅವರ ಜಾನಪದ ಕ್ಷೇತ್ರದ ದುಡಿಮೆ. ಜಾನಪದದಲ್ಲಿ ಕತೆ, ಗೀತೆ ಮುಂತಾದವುಗಳನ್ನು ಸಂಗ್ರಹಿಸಿ ಆ ಸಂಗ್ರಹದ ಸಾರವನ್ನು ಆಧರಿಸಿ ಚರ್ಚೆ ಮಾಡುವ ಸಾಂಪ್ರಾದಾಯಿಕ ಜಾನಪದ ವಿದ್ವತ್ತು ಕನ್ನಡದಲ್ಲಿದೆ. ಇಂತಹ ವಿದ್ವತ್ತಿನ ಮುಂದುವರಿದ ಭಾಗವಾಗಿ ಚಿಕ್ಕಣ್ಣ ಅವರ ಜಾನಪದ ಕೆಲಸಗಳು ನಡೆದಿವೆ. ಇಂತಹದ್ದೆ ವಿದ್ವತ್ತಿನ ಸಾರವನ್ನು ಹೀರಿ ಬಂದ ಪುಸ್ತಕ ‘ಬಂಡಿ ಬಂದಾವು ಬಾಳೆ ವನದಾಗೆ’.

ಇಲ್ಲಿನ ಸಂಗ್ರಹದ ಗೀತೆಗಳು ಲೇಖಕರು ಹೇಳುವಂತೆ ಎಂಟತ್ತು ವರ್ಷದ ಹಿಂದಿನವು, ಹಾಗಾಗಿ ಈ ಹಾಡುಗಳಲ್ಲಿ ಆಧುನಿಕ ಕಾಲದ ಚಲನೆ ಮಾಯವಾಗಿದೆ. ಚಿಕ್ಕಣ್ಣ ಅವರು ಜಾನಪದ ಕ್ಷೇತ್ರಕಾರ್ಯ ಮಾಡಿ ಇಂತಹ ಸಂಗ್ರಹದ ಕೆಲಸ ಮಾಡುವ ಅವರ ಶ್ರಮವನ್ನು ಗೌರವಿಸಬೇಕು. ತುಮಕೂರು ಜಿಲ್ಲೆಯನ್ನು ಆಧರಿಸಿದ ಅವರ ಜಾನಪದ ಬರಹಗಳು, ಇಲ್ಲಿನ ಸಾಂಸ್ಕೃತಿಕ ಪರಿಸರವನ್ನು ತಿಳಿಯಲು ನೆರವಾಗುತ್ತವೆ. ಈಗಾಗಲೆ ಇರುವ ಜಾನಪದ ತಿಳುವಳಿಕೆಗೆ ಚಿಕ್ಕಣ್ಣ ಅವರು (ಹತ್ರಲ್ಲಿ ಹನ್ನೊಂದ್ನೇದು ಎಂಬ ಗಾದೆಯಂತೆ)ಮತ್ತಷ್ಟು ಪರಿಕರಗಳನ್ನು ಸೇರಿಸುತ್ತಿದ್ದಾರೆ. ಇಂತಹ ಸಂಗ್ರಹದ ಕೆಲಸಕ್ಕೂ ವಿಮುಖರಾದ ಜಾನಪದ ವಿದ್ವಾಂಸರ ನಡುವೆ, ಚಿಕ್ಕಣ್ಣ ಈ ಕಾರಣಕ್ಕೆ ಮುಖ್ಯರಾಗುತ್ತಾರೆ. ಇದಕ್ಕಾಗಿ ಅವರು ಅಭಿನಂದನಾರ್ಹರು.

ಈ ಕೃತಿಗೆ ಸುದೀರ್ಘ ಪ್ರಸ್ತಾವನೆ ಇದೆ. ಇದು ಈತನಕದ ಜಾನಪದ ಗೀತೆಗಳ ಅದ್ಯಯನದ ತುಣುಕುಗಳನ್ನು ಉಲ್ಲೇಖಿಸಿ ಅದರ ಮುಂದುವರಿಕೆಯಂತಿದೆ. ಗೀತೆಗಳಲ್ಲಿರುವ ವಿಷಯಗಳನ್ನು ವಿಷಯವಾರು ವಿಂಗಡಿಸಿ ಚರ್ಚಿಸಿದ್ದಾರೆ. ಈ ಪ್ರಸ್ತಾವನೆ ಜಾನಪದ ಗೀತೆಗಳ ತಿಳುವಳಿಕೆಯನ್ನೇನು ವಿಸ್ತರಿಸುವುದಿಲ್ಲ, ಬದಲಾಗಿ ಹಳೆ ನಂಬಿಕೆಗಳಿಗೆ ಬಲ ಕೊಡುತ್ತದೆ. ಈ ಪುಸ್ತಕದ ನೆಪದಲ್ಲಿ ಕೆಲವು ಪ್ರಶ್ನೆಗಳನ್ನು ಚರ್ಚಿಸಲು ಸಾದ್ಯವಿದೆ. ಜನಪದ ಹಾಡು ಪರಂಪರೆಯ ಮೇಲೆ ಹಲವು ಜನಪ್ರಿಯ ಹಾಡು ಪರಂಪರೆಗಳು ಪ್ರಭಾವ ಬೀರಿವೆ. ಆಧುನಿಕ ಕಾಲದ ಸಂಗತಿಗಳು ಗೀತೆಯ ಒಳಹೊಕ್ಕು ಮನೆಮಾಡಿವೆ. ಅದು ಸಹಜ ಪ್ರಕ್ರಿಯೆ. ಇಂತಹ ಪ್ರಭಾವದ ಹಾಡುಗಳನ್ನು ಶುದ್ಧ ಜನಪದ ಗೀತೆಗಳಲ್ಲ ಎಂದು ತಿರಸ್ಕರಿಸಲಾಗುತ್ತದೆ. ಹಾಗದರೆ ಜಾನಪದ ನಿರಂತರ ಕ್ರಿಯಾಶೀಲವಾದುದು ಎಂಬ ನಂಬಿಕೆ ಸುಳ್ಳೆ? ಅದು ಸುಳ್ಳು ಎನ್ನುವುದಾದರೆ ಶುದ್ದ ಜನಪದ ಗೀತೆಗಳ ಕಲ್ಪನೆ ಬರುತ್ತದೆ. ಚಿಕ್ಕಣ್ಣ ಸಂಗ್ರಹಿಸಿದ ಹಾಡುಗಳನ್ನು ನೋಡಿದರೆ ಜಾನಪದ ಎನ್ನುವುದು ಜಡವಾದುದು ಎಂದು ಹೇಳಬಹುದು. ಹೀಗೆ ತಾತ್ವಿಕವಾಗಿ ಜಾನಪದದ ಜಡತೆಯ ಆಶಯವನ್ನು ದ್ವನಿಸುವ ಪುಸ್ತಕಕ್ಕೆ ಜಾನಪದ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಕೊಡುವುದನ್ನು ನೋಡಿದರೆ ಅಕಾಡೆಮಿಯ ಆಲೋಚನ ಕ್ರಮವೂ ಇದಕ್ಕಿಂತ ಭಿನ್ನವಾಗಿಲ್ಲ ಅನ್ನಿಸುತ್ತದೆ.

ಇಲ್ಲಿನ ಗೀತೆಗಳಲ್ಲಿ ಪ್ರಾದೇಶಿಕ ವಿವರಗಳು ಹೆಚ್ಚಿವೆ. ಆದರೆ ಜನಪದ ಗಾಯಕರ ವಯಕ್ತಿಕ ಬದುಕಿನ ನೋವು ನಲಿವು ಮಾಯವಾಗಿದೆ. ಈ ಕೃತಿಯ ಪ್ರಸ್ತಾವನೆಯಲ್ಲೂ ಕ್ಷೇತ್ರಕಾರ್ಯದ ಅನುಭವವಾಗಲಿ, ಹಾಡು ಪರಂಪರೆಗೆ ಜನಪದರು ಪ್ರತಿಕ್ರಿಯಿಸಿದ ಬಗೆಯಾಗಲಿ, ಬದಲಾದ ಕಾಲದಲ್ಲಿ ಜನಸಂಸ್ಕೃತಿಯಲ್ಲಿ ನಡೆದ ಪಲ್ಲಟಗಳ ಕುರಿತಾಗಲಿ ಇಲ್ಲಿ ಚರ್ಚಿಸಿಲ್ಲ. ಹಾಗಾಗಿ ಇಡೀ ಕೃತಿಯಲ್ಲಿ ವರ್ತಮಾನವೆ ಕಾಣೆಯಾದಂತಿದೆ. ಹಳೆಯ ಜನಪದ ಗೀತೆಗಳ ಸಂಗ್ರಹ ಓದಿದವರಿಗೆ ಇಲ್ಲಿನ ಗೀತೆಗಳು ಹೊಸತೆನ್ನಿಸದೆ, ಕೆಲವು ಭಿನ್ನ ಪಾಠಾಂತರಗಳಿವೆ ಅನ್ನಿಸುತ್ತದೆ.

ಈ ಕೃತಿಯಲ್ಲಿ ಓದು ಪಠ್ಯಗಳ ನೆನಪುಗಳಿವೆ. ವಿದ್ವಾಂಸರು ಶಿಷ್ಟ ಜಾನಪದವನ್ನು ಬೇರೆಬೇರೆಯಾಗಿ ನೋಡುವ ಪರಿಪಾಟವಿದೆ. ಆದರೆ ಮೌಖಿಕ ಪಠ್ಯದಲ್ಲಿಯೆ, ಓದು ಪರಂಪರೆಯನ್ನು ನೆನಪಿಸುವ ಸಂಗತಿಗಳು ಗಮನ ಸೆಳೆಯುತ್ತವೆ. ಈ ಬಗೆಯ ಓದು ಪಠ್ಯಗಳನ್ನು ನೆನಪಿಸುವ ಜನಪದ ಗೀತೆಗಳು ಇಲ್ಲವೆಂತಲ್ಲ, ಆದರೆ ಅದನ್ನು ಆಧರಿಸಿದ ಚಿಂತನೆ ಇಲ್ಲ. ಇದು ಹಾಡು ಪರಂಪರೆ ಮತ್ತು ಓದು ಪರಂಪರೆಯ ನಡುವಣ ಒಂದು ವಿಚಿತ್ರವಾದ ಕೊಡುಕೊಳೆ ನಡೆದಿರುವುದಕ್ಕೆ ಸಾಕ್ಷಿಯಂತಿದೆ. ಶಿಷ್ಟ ಕಾವ್ಯ ಬರೆದ ಕುಮಾರ ವ್ಯಾಸನನ್ನು ಪರಿಚಯಿಸುವ ಕಾವ್ಯವೆ ‘ಕುಮಾರವ್ಯಾಸನು ಹಾಡಿದನೆಂದರೆ..ಎಂದು ಆರಂಭವಾಗುವುದನ್ನು ಗಮನಿಸಬೇಕು. ಇಲ್ಲಿನ ಕೆಲವು ಗೀತೆಯ ತುಣುಕುಗಳನ್ನು ಗಮನಿಸಿ:

ಅಂಗಂದ ಮಾತ ಕೇಳೋಳೆ ಬೊಮ್ಮವ್ವ/ ಮಾರಪ್ಪಗೌಡನ ಕರಿಸೋಳೆ/ಹೆಣ್ಣು ಕೆಟ್ಟರೆ ತೌರುಮನೆಗೆ/ ಹೊನ್ನು ಕೆಟ್ಟರೆ ಅಕ್ಕಸಾಲಿಗನ ಮನೆಗೆ/ತೌರಿಗೊಂದು ಓಲೆಯನೆ ಬರೆಸ್ಯಾನೆ/ ಕಾಲಬೇಗ ತಳವಾರ ಹೋದಾನು/ ಏರಿಯ ಹಿಂದಿನ ಗರಿಯ ಓಲೆಯ ತರುತಾನೆ/ಮಾರಪ್ಪನ ಕೈಲಿ ಕೊಡುತಾನೆ/ಗರಿಯಲ್ಲಿ ಅಕ್ಷರವ ಬರೆದೋರೆ/ ಗರಿಯಲ್ಲಿ ಅಕ್ಷರವ ಏನೆಂದು ಬರೆದೋರೆ/ನಿಮ್ಮ ಮನೆಯ ಮಗಳು ಒಡವಿಗೆ ಹೋಗುತಾಳೆ/ಮಾರಪ್ಪಗೌಡ ತಳವಾರನ ಕೈಗೆ ಓಲೆಯ ಕೊಡುತಾನೆ(ಪುಟ-೧೩೪)

ನಿಮ್ಮ ಪುಸ್ತಕವ ತೆಗಿರಯ್ಯ ಜೋಯಿಸರೆ/ಕಂದಮ್ಮನಿಗೆ ಶಕುನಾವ ಕೇಳಬೇಕು/ಶುಕ್ರವಾರ ನಿಸ್ತ್ರಿ ಮೈನೆರೆದವಳೆ/ತಂದೋರ ಮನೆಗೆ ಜಯಜಯಾ/ಒಂದೆ ಕಂದಮ್ಮನ ಫಲವೈತೆ ಒಡವೀಗೆ/ ಹೋಗುತ್ತಾಳೆ ಹೋಗಿ ಬರೆದವಳೇ ಹಣೆಯಾಗೆ/ನನ್ನ ಬಾಳ ಹೆಣ್ಣಿಗೆ ಏನು ಕುಂದಾ ನುಡಿದಯ್ಯಾ/ ನಿಮ್ಮ ಪುಸ್ತಕವ ಬೆಂಕಿಗೆ ಹಾಕಿ ಚೆಂದ ಚೆಂದ ಉರುವಯ್ಯಾ/ಜೋಯಿಸರೇ ಮುಂದ ಬರುವುದ ಒಬ್ಬರೂ ಅರಿಯಾರು (ಪುಟ-೧೨೬)

ಇಲ್ಲಿನ ಉಲ್ಲೇಖಗಳನ್ನು ನೋಡಿದರೆ, ಬರಹ ಸಂವಹನ ಮಾದ್ಯಮವಾದ ಪಲ್ಲಟವನ್ನು ಮೌಖಿಕ ಪರಂಪರೆಯೆ ಹೇಳುತ್ತಿದೆ. ಅದೇ ಬರಹ ಜೋಯಿಸರ ಬಂಡವಾಳವಾದದ್ದನ್ನು ಗುರುತಿಸಲಾಗಿದೆ. ‘ಮುಂದ ಬರುವುದ ಒಬ್ಬರೂ ಅರಿಯಾರು’ ಎಂದು ಜೋಯಿಸರ ಜ್ಯೋತಿಷ್ಯವನ್ನೇ ಲೇವಡಿ ಮಾಡಿ ‘ಪುಸ್ತಕವ ಬೆಂಕಿಗೆ ಹಾಕಿ ಚೆಂದ ಚೆಂದ ಉರುವಯ್ಯಾ’ ಎನ್ನುವ ಪ್ರತಿರೋದ ಇಲ್ಲಿ ವ್ಯಕ್ತವಾಗಿದೆ. ಹೀಗೆ ಮಾತು ಮತ್ತು ಬರಹದ ಪಲ್ಲಟಗಳನ್ನು ಜನಪದ ಗೀತೆಗಳಲ್ಲಿ ಗುರುತಿಸಲು ಸಾದ್ಯವಿದೆ. ಚಿಕ್ಕಣ್ಣ ಅವರು ಜಾನಪದದ ಸಾಂಪ್ರದಾಯಿಕ ಅಧ್ಯಯನ ವಿಧಾನಗಳಿಂದ ಹೊರ ಬರದೆ, ಸಂಗ್ರಹದಂತಹ ಕೆಲಸಕ್ಕಿಂತ ಹೆಚ್ಚಿನದೇನನ್ನೂ ಅವರಿಂದ ನಿರೀಕ್ಷಿಸಲು ಸಾದ್ಯವಿಲ್ಲ.

ಮೇಧಾ ಪಾಟ್ಕರ್


ಹರೀಶ್ ಕೇರ ಹೇಳಿದಂತೆ-

‘ಮೇಧಾ ಪಾಟ್ಕರ್’ ನನ್ನ ಎರಡನೇ ಪುಸ್ತಕ. ಎಸ್.ದಿವಾಕರ್ ಮುಖ್ಯ ಸಂಪಾದಕರಾಗಿರುವ ‘ವಿಖ್ಯಾತರ ವ್ಯಕ್ತಿಚಿತ್ರ ಮಾಲಿಕೆ’ಯಲ್ಲಿ ವಸಂತ ಪ್ರಕಾಶನ ಹೊರ ತಂದಿರುವ ೨೭ ಹೊತ್ತಿಗೆಗಳಲ್ಲಿ ಇದೂ ಒಂದು.

ನನ್ನ ನಂಬಿಕೆ ಹೇಳಬೇಕೆಂದರೆ, ಮೇಧಾ ಪಾಟ್ಕರ್ ಬಗ್ಗೆ ಕನ್ನಡದಲ್ಲಿ ಬಂದಿರುವ ಪ್ರಪ್ರಥಮ ಪುಸ್ತಕ ಇದು. ಈ ಪುಸ್ತಕ ಬರೆಯಲು ಮಾಹಿತಿಗಾಗಿ ಮೇಧಾ ಪಾಟ್ಕರ್ ಬಗ್ಗೆ ಯಾವುದಾದರೂ ಇಂಗ್ಲಿಷ್ ಪುಸ್ತಕ ಬಂದಿದೆಯಾ ಅಂತ ಹುಡುಕಿಕೊಂಡು ಬೆಂಗಳೂರಿನ ಎಲ್ಲ ದೊಡ್ಡ ದೊಡ್ಡ ಇಂಗ್ಲಿಷ್ ಪುಸ್ತಕ ಮಳಿಗೆಗಳಿಗೆ ಎಡತಾಕಿದೆ. ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಗಳಲ್ಲಿ ಬೆವರು ಸುರಿಸಿದೆ. ಮಿತ್ರರಿಗೆಲ್ಲ ಕೇಳಿದೆ.

ಎಲ್ಲೂ ಏನೂ ಸಿಗಲಿಲ್ಲ. ಮೇಧಾ ಅವರ ಸಹ ಚಳವಳಿಕಾರ ಟಿ.ಆರ್.ಭಟ್ ಅವರನ್ನು ಸಂಪರ್ಕಿಸಿದೆ. ಅವರಿಂದ ಮೇಧಾ ಅವರ ಆಪ್ತ ಸಹಾಯಕ ಮಧುರೇಶ್ ಅವರ ದೂರವಾಣಿ ಸಂಖ್ಯೆ ಸಿಕ್ಕಿತು. ಅವರನ್ನೇ ಮಾತಾಡಿಸಿದೆ. ಮೇಧಾ ಬಗ್ಗೆ ಯಾವ ಇಂಗ್ಲಿಷ್ ಪುಸ್ತಕವೂ ಬಂದಿಲ್ಲವೆಂದೂ, ಅರುಣ್‌ಕುಮಾರ್ ತ್ರಿಪಾಠಿ ಎಂಬವರು ಬರೆದ ಹಿಂದಿ ಪುಸ್ತಕವೊಂದಿದೆಯೆಂದೂ, ಅದರ ಕಾಪಿಗಳು ಮುಗಿದಿದ್ದು, ತಮ್ಮ ಬಳಿಯೂ ಇಲ್ಲವೆಂದೂ ಅವರು ಹೇಳಿದರು.

ಹೀಗಾಗಿ, ಮೇಧಾ ಬಗ್ಗೆ ಮೊದಲಿಗೆ ಕನ್ನಡದಲ್ಲಿ ಬರೆದ ಹೆಗ್ಗಳಿಕೆ ನನ್ನದು. ಇಂಗ್ಲಿಷ್‌ನ ಯಾವ ದೊಡ್ಡ ಪ್ರಕಾಶನವೂ ಮಾಡದ ಒಳ್ಳೆಯ ಕೆಲಸವನ್ನು- ಇಂಥ ಮಹನೀಯರ ಬಗ್ಗೆ ಬರೆಸುವ ಮೂಲಕ- ವಸಂತ ಪ್ರಕಾಶನ ಮಾಡಿದೆ. ಈ ಮಾಲಿಕೆಯಲ್ಲಿ ವಂದನಾ ಶಿವ, ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನ್ಸೂರ್ ಮುಂತಾದ ಮಹನೀಯರ ಬಗ್ಗೆ ಕೃತಿಗಳಿವೆ. ಹೆಚ್ಚಿನ ಕೃತಿಗಳನ್ನು ನನ್ನ ಪತ್ರಕರ್ತ ಮಿತ್ರರೇ ಬರೆದಿದ್ದಾರೆ.

ಪುಸ್ತಕಕ್ಕೆ ಮಾಹಿತಿ ಮೂಲ :- ಮೇಧಾ ಒಡನಾಡಿಗಳು, ಇಂಟರ್‌ನೆಟ್.

ಪುಟಗಳು ೭೦, ಬೆಲೆ ೩೦ ರೂ.

ಪ್ರತಿಗಳಿಗಾಗಿ- ವಸಂತ ಪ್ರಕಾಶನ, ಜಯನಗರ, ಬೆಂಗಳೂರು (ಮುರಳಿ ಶ್ರೀನಿವಾಸನ್- ೯೮೮೬೩೯೯೧೨೫)

ನನ್ನನ್ನೂ ಸಂಪರ್ಕಿಸಬಹುದು- ೯೯೮೦೧೮೯೮೪೯.

ಪೀನೀ ಹೂ



ಏಳೆಂಟು ವರ್ಷಗಳ ಹಿಂದೆ ವಿಜಯರಾಘವನ್ ’ಬುಂಡೆ ಹಿಡಿದು’ ಎಂಬ ಅನುವಾದಿತ ಕಾವ್ಯದ ಸಂಕಲನವನ್ನು ಪ್ರಕಟಿಸಿದ್ದರು. ಅದರಲ್ಲಿ ತಾವೋ, ಲಾ ಓತ್ಸು, ಗಿಬ್ರಾನ್, ರಿಲ್ಕ್-ಸೇರಿ ಮೂರು ದಾರಿಯ ತುಂಬಾ ಸುಂದರವಾದ ಕವಿತೆಗಳಿದ್ದವು. ಈಗ ಅವರು ಅಂತಹುದೇ ಮತ್ತೊಂದು ಕಾರ್ಯ ನಿರ್ವಹಿಸಿದ್ದಾರೆ. ನಜೀಂ ಹಿಕ್ಮತ್, ವಾಸ್ಕೋ ಪೋಪ, ಮತ್ತು ಲೋರ್ಕರ ಕವಿತೆಗಳ ಕಂತೆಗಳನ್ನು,ತಾವೋ,ಸೂಫಿ ಮಾರ್ಗಗಳ ಕವಿತೆಗಳನ್ನು ಕನ್ನಡದಲ್ಲಿ ಅನುರೂಪಗೊಳಿಸಿ ಇಲ್ಲಿ ಸಂಕಲಿಸಿದ್ದಾರೆ.

ಎಷ್ಟು ಓದಿದರೂ ದಣಿವಾಗದ ಕಾವ್ಯವಿದು. ಅನುವಾದಕ್ಕೆ ವಿಜಯರಾಘವನ್ ಆಯ್ದುಕೊಳ್ಳುವ ಮಾರ್ಗ ಹಾಸಿಕೊಟ್ಟಿರುವುದಲ್ಲ. ಅದು ಎಂತಿರುವುದೆಂದರೆ, ನನಗೆ ಇದನ್ನು ಹೀಗೆ ಓದಲು ಇಷ್ಟ ಎನ್ನುವಂಥ ಮಾರ್ಗ. ಅದರಲ್ಲಿನ ಕನ್ನಡದಲ್ಲಿ ಲವಲವಿಕೆಯೂ, ನಿರಾಳವೂ, ಆತಂಕವೂ, ವಿಷಣ್ಣತೆಯೂ ತಮ್ಮ ಪಾತ್ರಗಳನ್ನು ಯಥೋಚಿತ ಅಭಿನಯಿಸಿ ಕಾವ್ಯದ ಬದುಕಿನ ಅನನ್ಯ ಋತುಕ್ಷಣಗಳನ್ನು ಹಿಡಿದುಕೊಡುತ್ತವೆ.

ಇವು ಭಾವಾನುವಾದದಲ್ಲಿ ಅದ್ವೈತವಾಗುವ ಲೀಲಾ ರಚನೆಗಳು- ಎಂಬ ’ಬುಂಡೆ ಹಿಡಿದು’ ಕುರಿತ ವಿಮರ್ಶೆಯ ಮಾತು ಇಲ್ಲಿಯೂ ಒಪ್ಪತಕ್ಕದ್ದು. ಈ ಕೃತಿಯ ಓದಿನಿಂದ ನಾನು ಅಪಾರ ಸಂತೋಷವನ್ನು ಸಂಪಾದಿಸಿಕೊಂಡಿದ್ದೇನೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಸಂತೋಷಪಡುತ್ತೇನೆ.

- ಡಾ.ಕೆ.ಸಿ.ಶಿವಾರೆಡ್ಡಿ

Wednesday, June 22, 2011

ಎ ಕೆ ರಾಮಾನುಜನ್ ಸಮಗ್ರ



ಎಸ್. ದಿವಾಕರ್ ಅವರ ಮುನ್ನುಡಿಯಿಂದ ಆಯ್ದ ಭಾಗ

ಇದು ರಾಮಾನುಜನ್ ರ ಕನ್ನಡ ಕೃತಿಗಳ ಸಮಗ್ರ ಸಂಪುಟ . ಅವರ ಮೂರು ಕವನ ಸಂಕಲನಗಳು , ಒಂದು ಕಾದಂಬರಿ, ನಾಲ್ಕು ಸಣ್ಣ ಕತೆಗಳು, ಎರಡು ರೇಡಿಯೋ ನಾಟಕಗಳು, ಗಾದೆಗಳನ್ನು ಕುರಿತ ಕಿರು ಹೊತ್ತಿಗೆ, ಎಲ್ಲವೂ ಇಲ್ಲಿವೆ. ‘ನಡೆದು ಬಂದ ದಾರಿ’ ಗ್ರಂಥದಲ್ಲೂ ‘ಸಾಕ್ಷಿ’ ಪತ್ರಿಕೆಯಲ್ಲೂ ಪ್ರಕಟವಾಗಿರುವ ಕೆಲವು ಕವನಗಳೂ ಕಳೆದ ಶತಮಾನದ ಐವತ್ತರ ದಶಕದಲ್ಲಿ ಅವರು ‘ಕೊರವಂಜಿ’ ಪತ್ರಿಕೆಯಲ್ಲಿ ಬರೆದ ಕೆಲವು ನಗೆ ಬರಹಗಳೂ ಇಲ್ಲಿ ಸೇರಿವೆ. ಬಹುಶಃ ರಾಮಾನುಜನ್ ರ ಮೊದಲ ಪ್ರಯತ್ನಗಳಾಗಿರಬಹುದಾದ ಈ ನಗೆ ಬರಹಗಳ ಓದು ಅವರ ಸೃಜನಶೀಲತೆಯ ವಿಕಾಸವನ್ನರಿಯಲು ಸಹಾಯಕವಾದೀತೆಂದು ಭಾವಿಸಿದ್ದೇನೆ . ಜೊತೆಗೆ ಈ ಸಂಕಲನದ ಕಡೆಯ ಭಾಗದಲ್ಲಿರುವುದು ರಾಮಾನುಜನ್ ಬಿಟ್ಟು ಹೋಗಿರುವ ಹಸ್ತ ಪ್ರತಿಯ ಒಂದು ಕಟ್ಟು .

ಇದರಲ್ಲಿ ಕೆಲವು ಕವನಗಳು , ನಗೆ ಬರಹಗಳು, ಕಾದಂಬರಿಯೊಂದಕ್ಕಾಗಿ ಮಾಡಿಕೊಂಡ ಟಿಪ್ಪಣಿಗಳು , ಹೀಗೆ ಬಗೆಬಗೆಯ ಬರಹ ತಮ್ಮ ಅಪೂರ್ಣ ಸ್ಥಿತಿಯಲ್ಲಿವೆ . ರಾಮಾನುಜನ್ ಬದುಕಿದ್ದಾಗ ಅವರ ಸಾಹಿತ್ಯಕ್ಕೆ ನಿಜಕ್ಕೂ ಸಲ್ಲಬೇಕಾದ ವಿಮರ್ಶಾ ಮನ್ನಣೆ ಸಲ್ಲಲೇ ಇಲ್ಲ . ಅವರ ಕಾವ್ಯದ ಬಗ್ಗೆ ಅಲ್ಲೊಂದು ಇಲ್ಲೊಂದು ಲೇಖನ ಬಿಟ್ಟರೆ ಇತರ ಕೃತಿಗಳ ಬಗ್ಗೆ ಚರ್ಚೆಯಾದದ್ದೇ ಅಪರೂಪ . ಈ ಸಮಗ್ರ ಸಂಪುಟದ ಪ್ರಕಟಣೆ ಅವರ ಒಟ್ಟು ಸಾಹಿತ್ಯದ ಮರು ಓದಿಗೆ , ವಿಸ್ತೃತ ಚರ್ಚೆಗೆ , ಅಧ್ಯಯನಕ್ಕೆ , ವಿಮರ್ಶೆಗೆ ದಾರಿ ಮಾಡಬಹುದೆಂಬ ಆಶಯ ನನ್ನದು .

ರಾಮಾನುಜನ್ನರ ಬಿಡಿ ಕೃತಿಗಳನ್ನು ಪ್ರಕಟಿಸಿದ ಮನೋಹರ ಗ್ರಂಥ ಮಾಲೆಯೇ ಈ ಸಮಗ್ರ ಸಂಪುಟವನ್ನೂ ಪ್ರಕಟಿಸುತ್ತಿರುವುದು ಅರ್ಥಪೂರ್ಣ. ಇದರ ಸಂಪಾದನೆಯನ್ನು ನನಗೇ ವಹಿಸಿಕೊಟ್ಟ ಶ್ರೀ ರಮಾಕಾಂತ ಜೋಶಿಯವರ ವಿಶ್ವಾಸ ದೊಡ್ಡದು. ಅವರಿಗೂ ,ರಾಮಾನುಜನ್ನರ ‘ಕೊರವಂಜಿಯ’ ಬರಹಗಳನ್ನು ಒದಗಿಸಿಕೊಟ್ಟ ಶ್ರೀ ಎಂ.ಶಿವಕುಮಾರ್ ಅವರಿಗೂ ನಾನು ಕೃತಜ್ಞ .

‘ರಾಷ್ಟ್ರೀಯತೆ’ ಕುರಿತು ಚರ್ಚೆ

ಮೈಸೂರಿನ ಚಿಂತನ ಚಿತ್ತಾರದಲ್ಲಿ.....


Monday, June 20, 2011

'ಚಳಿಗಾಲದ ಎಲೆ ಸಾಲು'' ಕವನ ಸಂಕಲನ ಬಿಡುಗಡೆ



chaligala cover page.jpg


ಎಸ್.ಕುಮಾರ್ ಎರಡು ಕವಿತೆಗಳು


ಎಸ್ ಕುಮಾರ್ ಅವರ ಪ್ರಥಮ ಸಂಕಲನ ಚಳಿಗಾಲದ ಎಲೆ ಸಾಲು ಬರುತ್ತಿರುವ ಸಂದರ್ಭದಲ್ಲಿ ಸಂಕಲನದ ಎರಡು ಕವಿತೆಗಳು ನಿಮಗಾಗಿ


ಸಂಜೆಗತ್ತಲ ಹಾಡು

ನೆರಳು ಬಿಡಿಸಿಕೊಂಡಾಗಿದೆ
ಕನಸುಗಳ ಮಾತೆಲ್ಲಿ?
ಮಾತು ತರಗೆಲೆ
ಹಿಡಿದು ಪ್ರಯೋಜನವಿಲ್ಲದೆಯೆ
ಪಾಲೋ ಕಾವೋ, ಖಲೀಲ್ ಗಿಬ್ರಾನ್
ಕಡೆಗೆ…
ರಾಬಿನ್ ಶಮರ್ಾನ
ಫೆರಾರಿ ಕೂಡ
ಬೀದಿ ದೀಪದ ಸಾಲಿನಲ್ಲಿ…

ಸಿಗರೇಟಿನ ಬೂದಿ ಜತೆ
ಕೊಡವಿದರೆ ಬೇಸರ ಬೀದಿಗೆ
ಸಿಗ್ನಲ್ಲಿನ ಕೆಂಪು ದೀಪ
ದಾರಿಗೆ!

ಕಾಫಿ ಡೇ ಎದುರು
ಚಹಾ ಮಾರುವ
ಹುಡುಗನಿಗೆ ಕಂಡಿದ್ದು
ಶಾಪಿಂಗ್ ಮಾಲ್
ಹುಡುಗಿಯರ ಸೊಂಟ,
ತನ್ನೂರ ಹುಡುಗಿಯರ
ಕೊಡಪಾನದ ನೆನಪು…

ರಾತ್ರೋರಾತ್ರಿ
ಕಂಪ್ಯೂಟರ್ ಪರದೆ
-ಯಿಂದ
ಎದ್ದು ಬಂದ
ಯಾರದ್ದೋ ಫ್ರೆಂಡ್ ರಿಕ್ವೆಸ್ಟ್…
ಈ ಮೇಲು
ಫೀಮೇಲು
ಆಮೇಲಾಮೇಲೆ
ಮೇಲೆ.. ಮೇಲೆ..
ಲೆ…
ಲೆ…
ಎಂದ ಮೇಷ್ಟ್ರು ಕೂಡ
ಕಣ್ಣ ಮುಂದೆ..
*
ಲಜ್ಜೆಗೇಡಿ ಸಂಜೆ
ಬೇಡದ ಚಿತ್ರಗಳು
ಯಾರದ್ದೋ ಪುಳಕದ ನಗು
ಮೂಲೆಯಲ್ಲಿ ಸೆಳಕಿನ ಬಿಗು
ಮನೆ ದಾರಿಯಲ್ಲಿ

ಧ್ಯಾನ ಮೌನ
ಬುದ್ಧ, ತಾವೋ..
ಮೂರು ಮುಕ್ಕಾಲು ಕೋಟಿ
ದೇವರುಗಳೆಲ್ಲಾ
ಊರು ದಾರಿಯಲ್ಲಿ

ಒಳಗೊಳಗೆ ಒದ್ದಾಟ
ಸುಖಾಸುಮ್ಮನೆ ಸಂಕಟ

ಕಂಡರೆ ಕೈ ಮುಗಿಯಿರಿ…

ಕ್ಷಮಿಸುವ ಭಗವಂತನ
ಕೈಯೂ ರಕ್ತವಾಗಿದೆ
ಅವನಿಗೂ ಕಾಡುತ್ತಿರಬಹುದು ಪಾಪಪ್ರಜ್ಞೆ.

ಗರ್ಭಗುಡಿ ಮಂದ ಬೆಳಕು,
ಸೂತಕದ ಮನೆ ಹಣತೆಯ ಹಾಗೆ
ಕಂಡಿದೆಯಂತೆ ಅವಗೆ

ಕಣ್ಣುಜ್ಜಿಕೊಂಡಾಗಲೆಲ್ಲ
ಗಪ್ಪನಡುರುವ ರಕ್ತದ ವಾಸನೆ
ಮೂಗಿಗೆ ಮಾತ್ರವಲ್ಲ!

ಭಕ್ತರು ನೂರು ಮಂದಿ
ನೆರೆದು ನಿಂತರೆ
ತತ್ತರಿಸಿ ದುಃಸ್ವಪ್ನ
ಕಂಡಂತೆ ನಡುಗು

ಊರ ಬೀರನು, ಸಾಬರ ಪೀರನು
ಕೂಡಿ ಆಡುತ್ತಿದ್ದರೆ,
ದೇಗುಲದ ಕಟ್ಟೆ ಮೇಲೆ
ಅವನು ಅನಾಥ

ಗಂಟೆ ನಾದ ಮೀರಿದೆ
ಮದ್ದು ಗುಂಡುಗಳ ಸದ್ದು,
ಶಂಖನಾದ ಸೀಳಿದ ಆಕ್ರಂದನ,
ಗುಡಿಯ ಒಳಗೆಲ್ಲಾ ಮಾರ್ದನಿಸಿ ಆಕ್ರೋಶ

*
ಅಮಲುಗತ್ತಲು, ಬರೀ ಮಂತ್ರಗಳು
ಏನೂ ಕೇಳದೆ,
ಜಗದಲ್ಲೇನುಗುತ್ತದೆ ತಿಳಿಯದೆ
ಮೂಡನಾಗಿಹನೆಂದು ಊರಾಚೆ
ಬೆಟ್ಟದ ಮೇಲೆ ಕೂತಿಹನಂತೆ…
ಕಂಡರೆ ಕೈ ಮುಗಿದು
ಅಲ್ಲಿಂದಲೂ ಕಳಿಸಿಕೊಟ್ಟು ಬಿಡಿ..

Sunday, June 5, 2011

೨೦೧೧ ರ ವಿಭಾ ಸಾಹಿತ್ಯ ಪ್ರಶಸ್ತಿಗಾಗಿ ಕವನಗಳ ಆಹ್ವಾನ




PÀ£ÀßqÀ PÀªÀAiÀÄwæ «¨sÁ CªÀgÀ £É£À¦£À°è '«¨sÁ ¸Á»vÀå ¥Àæ±À¹Û-2011' PÁÌV PÀ£ÀßqÀzÀ PÀ«UÀ½AzÀ ªÀÄƪÀvÀÛPÀÆÌ ºÉZÀÄÑ PÀ«vÉUÀ½gÀĪÀ ºÀ¸ÀÛ¥ÀæwAiÀÄ£ÀÄß DºÁ餸À¯ÁVzÉ. F ¥Àæ±À¹ÛAiÀÄÄ gÀÆ. 5000/- £ÀUÀzÀÄ ªÀÄvÀÄÛ ¥Àæ±À¹Û ¥sÀ®PÀªÀ£ÀÄß M¼ÀUÉÆArzÉ. AiÀiÁªÀÅzÉà PÁgÀtPÀÆÌ ºÀ¸ÀÛ¥ÀæwAiÀÄ£ÀÄß »AwgÀÄV¸À¯ÁUÀĪÀ¢®è. ¥Àæ±À¹Û «eÉÃvÀ ºÀ¸ÀÛ¥ÀæwAiÀÄ£ÀÄß UÀzÀUÀzÀ ®qÁ¬Ä ¥ÀæPÁ±À£À¢AzÀ ¥ÀæPÀn¸À¯ÁUÀĪÀzÀÄ. ºÀ¸ÀÛ¥Àæw PÀ¼ÀÄ»¸À®Ä PÉÆ£ÉAiÀÄ ¢£ÁAPÀ; dįÉÊ 25.


«¼Á¸À:
¸ÀÄ£ÀAzÁ ªÀÄvÀÄÛ ¥ÀæPÁ±À PÀqÀªÉÄ,
90, £ÁUÀ¸ÀÄzsÉ, 6/©, PÁ½zÁ¸À£ÀUÀgÀ.
«zÁå£ÀUÀgÀ «¸ÀÛgÀuÉ, ºÀħâ½î-580031
¸É¯ï: 9845779387

Wednesday, May 25, 2011

ಪುಸ್ತಕ ಮಾರಾಟಗಾರನ ತಲ್ಲಣಗಳು


ಅಶೋಕವರ್ದನ ಅವರ ಬರೆಹಪ್ರಿಯ ವಿವೇಕ್ (ಶಾನಭಾಗ್) ಮತ್ತು (ಕೆ.ವಿ) ಅಕ್ಷರಾ,ದೇಶಕಾಲದ ಏಪ್ರಿಲ್ ಸಂಚಿಕೆಯ (೨೫ನೇದು) ಸಮಯಪರೀಕ್ಷೆ – ‘ಮಾರುಕಟ್ಟೆಯ ಒತ್ತಡ’, ತುಂಬಾ ಸಾಮಯಿಕ. ಅದನ್ನು ಪುಸ್ತಕೋದ್ಯಮಕ್ಕೆ ಮತ್ತೂ ಮುಖ್ಯವಾಗಿ ಕನ್ನಡ ಪುಸ್ತಕೋದ್ಯಮಕ್ಕೆ ಅನ್ವಯಿಸಿಕೊಂಡು ವಿಸ್ತರಿಸಲು ನನ್ನ ಅನುಭವ ಒತ್ತಾಯಿಸುತ್ತಿದೆ. ಆದರೆ ಹಾಗೆ ಬರೆದದ್ದನ್ನು ನಿಮಗೆ ಪ್ರತಿಕ್ರಿಯಾ ಲೇಖನವಾಗಿ ಕಳಿಸಿ ದೇಶಕಾಲದ ನಿರ್ವಹಣೆಯಲ್ಲಿ ‘ಮಾರುಕಟ್ಟೆಯ ಒತ್ತಡ’ ಬರದಂತೆ ಇಲ್ಲಿ ಪ್ರಕಟಿಸಿದ್ದೇನೆ. (ನಿಮ್ಮ ಐದನೇ ವರ್ಷದ ವಿಶೇಷ ಸಂಚಿಕೆ ಪ್ರಕಟವಾದಾಗ ಮತ್ತೆ ಪ್ರಜಾವಾಣಿ ಸಾಪ್ತಾಹಿಕಕ್ಕೆ ದೇಶಕಾಲ ಸಹಯೋಗ ಕೊಡಲು ಸುರು ಮಾಡಿದಾಗ ನಡೆದ ತಾತ್ತ್ವಿಕ ಮುಖವಾಡ ಹೊತ್ತು, ಜಾತಿ, ಪ್ರಾದೇಶಿಕ ಪ್ರಾತಿನಿಧ್ಯವೇ ಮುಂತಾದ ಸವಕಲು ಸಲಕರಣೆಗಳ ಜೊತೆ ಹೋರಾಡಿದ ಸ್ವಾರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಬರಬಾರದಲ್ಲಾ ಎಂಬ ಎಚ್ಚರ ಎಂದರೂ ಸರಿ.)
ಪುಸ್ತಕೋದ್ಯಮದಲ್ಲಿ ಪ್ರಕಾಶಕ (ಕನ್ನಡದಲ್ಲಿ ಒಮ್ಮೆಗೆ ಹೆಚ್ಚಾಗಿ ಒಬ್ಬನೇ), ಕೆಲವೊಮ್ಮೆ ವಿತರಕರು ತುಂಬಾ ಸಣ್ಣ ಸಂಖ್ಯೆಯಲ್ಲಿರುತ್ತಾರೆ ಮತ್ತು ಹೆಚ್ಚಾಗಿ ದೊಡ್ಡ ನಗರಗಳಲ್ಲಿ ಮಾತ್ರ ಸ್ಥಾಪಿತರಿರುತ್ತಾರೆ. ಆದರೆ ಗ್ರಾಹಕರ (ವ್ಯಕ್ತಿಗಳು ಮತ್ತು ಸಂಸ್ಥೆಗಳು) ಒತ್ತಡವನ್ನು ನೋಡಿಕೊಂಡು ಬಿಡಿ ಮಾರಾಟಗಾರರು ಎಲ್ಲೂ ಸಿಗುತ್ತಾರೆ, ಇನ್ನೂ ಸಾಕಷ್ಟು ಉಳಿದಿದ್ದಾರೆ! ಇಲ್ಲಿ ಡಿವಿಕೆ ಮೂರ್ತಿಯವರ ಕೊನೆಗಾಲದ ಮಾತುಗಳನ್ನು ಕೇಳಿ. “ರಾಜ್ಯ ಮತ್ತು ಹೊರನಾಡುಗಳೂ ಸೇರಿ ಮೊದಲೆಲ್ಲ ಇನ್ನೂರಕ್ಕೂ ಮಿಕ್ಕು ಬಿಡಿ ಪುಸ್ತಕ ವ್ಯಾಪಾರಿಗಳಿಗೆ ನಾನು ಪುಸ್ತಕ ಕಳಿಸಿಕೊಡುತ್ತಿದ್ದೆ. ಯಾವ್ಯಾವುದೋ ಗ್ರಾಮಾಂತರ ಪ್ರದೇಶಗಳಿಂದಲೂ ಅಲ್ಲಿನ ಶಾಲೆಯ ಗ್ರಂಥಾಲಯಕ್ಕೋ ಮಕ್ಕಳ ಅನಿವಾರ್ಯತೆಗೋ ಊರವರ ಕುತೂಹಲಕ್ಕೋ ಏನಿಲ್ಲವೆಂದರೂ ವರ್ಷಕ್ಕೆ ಒಂದೆರಡು ಬಾರಿಯಾದರೂ ಸ್ವತಃ ಮೈಸೂರಿಗೆ ಬಂದೋ ಪತ್ರ ಮುಖೇನ ಸಂಪರ್ಕಿಸಿಯೋ ಅಷ್ಟಿಷ್ಟು ಪುಸ್ತಕ ಒಯ್ಯುವ ಸಣ್ಣ ವ್ಯಾಪಾರಿಗಳಿರುತ್ತಿದ್ದರು. . .”



ಹೆಚ್ಚಿನ ಎಲ್ಲ ಸರಕಾರಗಳೂ (ಪಕ್ಷಾತೀತವಾಗಿ) ಜನಾಡಳಿತದ ವಿಕೇಂದ್ರೀಕರಣದ ಸುಳ್ಳನ್ನು ಬಿತ್ತರಿಸುತ್ತವೆ. ಅನಂತರ ಮೊದಲು ವೈಯಕ್ತಿಕ ಸ್ವಾರ್ಥ ಮತ್ತೆ ಸ್ವ-ಪಕ್ಷದ ಲಾಭಕ್ಕಾಗಿಯೇ ಸಾಮಾಜಿಕವಾಗಿ ಮೌಲಿಕವಾದ ಪ್ರತಿಯೊಂದು ಚಟುವಟಿಕೆಯಲ್ಲೂ ಹಸ್ತಕ್ಷೇಪ ನಡೆಸುತ್ತಾರೆ. (ಇಂದು ಮದುವೆಯಲ್ಲಿ ಮದುಮಗ, ಸ್ಮಶಾನದಲ್ಲಿ ಹೆಣವಾಗಲು ಇಚ್ಛಿಸದವ ರಾಜಕಾರಣಿಯಾಗುವುದು ಅಸಾಧ್ಯ) ಅದು ಪ್ರಾಮಾಣಿಕ ವೃತ್ತಿಪರರ ಮೇಲೆ ಮಾಡುತ್ತಿರುವ ಪರಿಣಾಮವನ್ನು ನಾನಿಲ್ಲಿ ಕೇವಲ ಪುಸ್ತಕೋದ್ಯಮಕ್ಕೆ ಅದರಲ್ಲೂ ತೀರಾ ಈಚಿನ ಕೆಲವೇ ಘಟನೆಗಳ ಮುನ್ನೆಲೆಯಲ್ಲಿ ಸಣ್ಣದಾಗಿ ವಿಶ್ಲೇಷಿಸುತ್ತೇನೆ.



ಕನ್ನಡ ಪುಸ್ತಕ ಪ್ರಾಧಿಕಾರ ಪ್ರಣೀತ ‘ಪುಸ್ತಕ ನೀತಿ’ ಇಂದು ಕನ್ನಡ ಪುಸ್ತಕೋದ್ಯಮದಲ್ಲಿ ಬಹಳ ಮುಖ್ಯ ವಿಷಯವೆಂಬಂತೆ ಬಿಂಬಿಸಲಾಗುತ್ತಿದೆ. ಇದು ನೆಲದ ಶಾಸನವೇ ಆದ unfair trade practiceಗೆ ಯಾವ ರೀತಿಯಲ್ಲೂ ಸಂಬಂಧಿಸಿದ್ದಲ್ಲ. ಇದರ ಅಂಕುರಾರ್ಪಣೆಯಾದದ್ದು ಪ್ರೊ ಎಸ್.ಜಿ. ಸಿದ್ಧರಾಮಯ್ಯನವರ ಕಪುಪ್ರಾ ಅಧ್ಯಕ್ಷಾವಧಿಯಲ್ಲಿ. ರಾಜ್ಯ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಒಂದು ಇಲಾಖೆ. ಅದಕ್ಕೆ ಅಧೀನ ಸಂಸ್ಥೆ ಕಪುಪ್ರಾ. ಅದರ ಒಂದು ಕಾಲಘಟ್ಟದ, ಓರ್ವ ನಾಮಾಂಕಿತ ಅಧ್ಯಕ್ಷ ತೇಲಿಬಿಟ್ಟ ಗುಳ್ಳೆ ಪುಸ್ತಕ ನೀತಿ. ಇದರ ಚರಮ ಲಕ್ಷ್ಯ ಓದುಗನಾಗಬೇಕಿತ್ತು. ಆದರೆ ವಿವರಗಳಲ್ಲಿ ಕಣ್ಣು ಹಾಯಿಸಿದವರಿಗೆ ಅದು ಕೇವಲ ಸರಕಾರೀ ಸಗಟು ಖರೀದಿಗೊಂದು ನೀತಿ ಪಟ್ಟಿ ಮಾತ್ರ ಎನ್ನುವುದು ಸ್ಪಷ್ಟವಿತ್ತು. ಇದು ಜ್ಯಾರಿಗೆ ಬಂದರೂ ಮೇಲಿನ ಸಂಸ್ಥೆಗಳಿಗೆ, ಅಂದರೆ ಸಂಸ್ಕೃತಿ ಇಲಾಖೆಯೂ ಸೇರಿದಂತೆ ಇತರ ಇಲಾಖೆಗಳು, ಪ್ರಾಧಿಕಾರಗಳು, ಹತ್ತೆಂಟು ಅಕಾಡೆಮಿಗಳು, ವಿವಿನಿಲಯಗಳಿಗೆ ಲಗಾವಾಗುವುದಿಲ್ಲ ಮತ್ತು ಕೊಳ್ಳುವ ಗಿರಾಕಿಗಳನ್ನು ನಿರ್ಬಂಧಿಸುವಲ್ಲೂ ಸೋಲುತ್ತದೆ. ಇದನ್ನು ಬಿಡಿಸಿ ಹೇಳುವುದಾದರೆ ಯಾವುದೇ ಪ್ರಕಾಶನ ಸಂಸ್ಥೆ ತನ್ನ ಪ್ರಕಟಣೆಗಳನ್ನು ಕಪುಪ್ರಾದ ಯಾವುದೇ ಯೋಜನೆಗಳನ್ನು ಬಯಸುವುದಿಲ್ಲವೆಂದರೆ ಈ ಪುಸ್ತಕ ನೀತಿ ಏನೂ ಮಾಡಲಾರದು. ಹಾಗೇ ಯಾವುದೇ ವ್ಯಕ್ತಿ, ಗ್ರಂಥಾಲಯಕ್ಕೆ ತನ್ನ ಪುಸ್ತಕ ಅಗತ್ಯಗಳನ್ನು ಪೂರೈಸಿಕೊಳ್ಳುವಲ್ಲಿ ಈ ‘ಪುಸ್ತಕ ನೀತಿ’ ವಿಷಯಕ ಗುಣಪಕ್ಷಪಾತಿಯಾಗಿ ದೃಢತೆ ಕೊಡುವುದೂ ಇಲ್ಲ.



ಪುಸ್ತಕ ನೀತಿ, ಪ್ರೊ ಎಸ್.ಜಿ. ಸಿದ್ಧರಾಮಯ್ಯನವರ ಕನಸಿನ ಕೂಸು. ಪ್ರಸ್ತುತ ಅಧ್ಯಕ್ಷ ಪ್ರೊ ಸಿದ್ಧಲಿಂಗಯ್ಯನವರ ಸೂಲಗಿತ್ತಿತನದಲ್ಲೂ ಅದು ಹೆರಿಗೆ ನೋವು ಕೊಡುತ್ತಲೇ ಇದೆ! ಇದು ರೂಪುಗೊಳ್ಳುವ ಹಂತದಲ್ಲೇ ನಾನು ಮೇಲೆ ಉಲ್ಲೇಖಿಸಿದ ಸರಳ ಪ್ರಶ್ನೆಗಳನ್ನು ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎಂದೇ ಕೇಳಿದ್ದೆ. ಅದನ್ನು ದಿಟ್ಟವಾಗಿ ಎದುರಿಸಲಾಗದೇ ‘ಉಪಸಮಿತಿ’ (ಅಯಾಚಿತವಾಗಿ ನನ್ನನ್ನು ಸದಸ್ಯ ಮಾಡಿದ್ದರು!), ‘ಕಮ್ಮಟ’ (ಎರಡೆರಡು ಬಾರಿ ನನ್ನ ಅನುಕೂಲ ಕೇಳದೇ ಅದೂ ನನ್ನ ಕೆಲಸದ ದಿನಗಳಲ್ಲೇ ಒಂದೋ ಎರಡೋ ದಿನದ ಅವಕಾಶ ಮಾತ್ರ ಇಟ್ಟು ಕರೆ ಕಳಿಸಿದ್ದರು), ಕೊನೆಗೆ ‘ಬಹುಮತ’ (ಅಳಿದೂರಿಗೆ ಉಳಿದವನೇ ಗೌಡ) ಎಂಬ ಪ್ರಜಾತಾಂತ್ರಿಕ ಶಬ್ದ ಜಾಲದಲ್ಲಿ ಹುಗಿಯಲಾಯ್ತು. ಒಟ್ಟಾರೆ ಕನ್ನಡ ಪುಸ್ತಕೋದ್ಯಮವನ್ನು ಸದೃಢಗೊಳಿಸಬೇಕಾಗಿದ್ದ ಕಪುಪ್ರಾ ಕೇವಲ ಸರಕಾರೀ ಬಟವಾಡೆಗೆ ಇನ್ನೊಂದು ಮುಖವಾಗಿ, ಸಮರ್ಥ ನಿರ್ವಹಣೆಗಾಗಿ ವಿಭಾಗೀಕರಣ ಎಂಬ ತತ್ತ್ವದ ಅಣಕವಾಗಿ, ಕರದಾತನ ಋಣಪಾತಕವಾಗಿ ಮುಂದುವರಿದಿದೆ. ಪುಸ್ತಕೋದ್ಯಮದ ಎಲ್ಲವನ್ನೂ ಎಲ್ಲರನ್ನೂ ಮುಟ್ಟುವ ಮತ್ತು ಜನಪರವಾಗಿ ಬದಲಿಸುವಲ್ಲಿ ಸರ್ವಶಕ್ತವಾದ ‘ನಿಜ ಪುಸ್ತಕ ನೀತಿ’ ರೂಪುಗೊಳ್ಳಲು ಇನ್ನೊಂದೇ ‘ಅಣ್ಣಾಹಜಾರೆ’ ಹುಟ್ಟಬೇಕು.



ಕೃತಿಯ ಯೋಗ್ಯತೆಯನ್ನು ಅಚ್ಚಿನಮನೆಯ ವೆಚ್ಚದ ನೆಲೆಯಲ್ಲಿ, ಬಿಡುಗಡೆಯ ಅದ್ದೂರಿಯಲ್ಲಿ, ಪ್ರಚಾರ ತಂತ್ರದ ಪರಿಣತಿಯಲ್ಲಿ, ಬಹುಮುಖ್ಯವಾಗಿ ಸಾಹಿತ್ಯೇತರ ಪ್ರಭಾವಗಳಲ್ಲಿ ಕಾಣಿಸಲು ಸೋತ ನಾನು (ನನ್ನಂಥವರು) ಅತ್ರಿ ಪ್ರಕಾಶನವನ್ನು ಮುಚ್ಚಿದ್ದು ನಿಮಗೆಲ್ಲಾ ತಿಳಿದೇ ಇದೆ. ಅದು ಅವಸರದ ಹೆಜ್ಜೆಯಾಯ್ತು, ಇತರ ಪುಸ್ತಕ ವ್ಯಾಪಾರಿಗಳ ಮೂಲಕ ನೇರ ಓದುಗರಿಗೇ ಮಾರಬಹುದಿತ್ತಲ್ಲಾ ಎಂದು ಹೇಳಿದವರಿದ್ದಾರೆ. ಇಂದು ರಾಜ್ಯಾದ್ಯಂತ ಪುಸ್ತಕ ವ್ಯಾಪಾರಿಗಳ ವ್ಯವಸ್ಥೆ ಹೇಗಿದೆ ಎನ್ನುವುದಕ್ಕೆ ಮೇಲೆ ಉಲ್ಲೇಖಿಸಿದ ಡಿವಿಕೆ ಮೂರ್ತಿಯವರ ಕೊನೆಗಾಲದ ಮಾತಿನ ಉತ್ತರಾರ್ಧ ನೋಡಿ. “ಈಗ ರಾಜ್ಯಾದ್ಯಂತ ಬಿಡಿ, ನಾಲ್ಕೈದು ಜಿಲ್ಲಾ ಕೇಂದ್ರಗಳಿಂದಲೂ (ಮುಖ್ಯವಾಗಿ ಹೆಸರಿಸುವುದಾದರೆ ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು) – a handful ರಿಟೇಲರ್ಸ್ ಮಾತ್ರ ಉಳಿದಿದ್ದಾರೆ.”



ಇಂದು ಶಾಲೆಗಳ ಮತ್ತು ಭಾಷಾ ಪಠ್ಯಗಳ ವಿಚಾರದಲ್ಲಿ ಕಾಲೇಜುಗಳ ಪಠ್ಯಗಳ ಆಯ್ಕೆ, ಪ್ರಕಟಣೆ, ಕೊನೆಗೆ ವಿತರಣೆಯೂ (ಎಷ್ಟು ಸಮರ್ಪಕ ಎಂದು ಕೇಳಬೇಡಿ) ಇಲಾಖೆಗಳ ಮಟ್ಟದಲ್ಲೇ ನಡೆದಿದೆ. ಅವುಗಳಲ್ಲಿ ಮೊದಲಿನಿಂದಲೂ ಅಷ್ಟಾಗಿ ತೊಡಗಿಕೊಳ್ಳದ ವ್ಯಾಪಾರಿ ನಾನು. ಹಾಗಾಗಿ ಕೇವಲ ಪೂರಕ ಸಾಹಿತ್ಯ ಮತ್ತು ಗ್ರಂಥಾಲಯ ಪೂರಣವನ್ನಷ್ಟೇ ಸಣ್ಣದಾಗಿ ಚರ್ಚಿಸುತ್ತೇನೆ. ಪಠ್ಯ ನಿರ್ದೇಶನಕ್ಕೆ ವಿಷಯ ತಜ್ಞರ ವರದಿಗಳು ಅನಿವಾರ್ಯ. ಆದರಿಂದು ಪೂರಕ ಓದು ಅಥವಾ ಸ್ಪಷ್ಟವಾಗಿ ಹೇಳುವುದಾದರೆ ಗ್ರಂಥಾಲಯ ಖರೀದಿಯ ಸ್ವಾತಂತ್ರ್ಯವನ್ನು ಶೈಕ್ಷಣಿಕ ಸಂಸ್ಥೆಗಳಿಂದ ವಂಚಿಸುವಂತೆ ಸರಕಾರೀ ಆಡಳಿತ ವ್ಯೂಹ ರಚಿಸಿದೆ. ಈ ವರ್ಷ ಎಲ್ಲಾ ಮಟ್ಟದ (ಪ್ರಾಥಮಿಕ, ಪ್ರೌಢ) ಬಹುತೇಕ ಶಾಲೆಗಳಿಗೆ ಇಲಾಖೆ ಘನ ಅನುದಾನವನ್ನೇನೋ ಕಡೇ ಗಳಿಗೆಯಲ್ಲಿ ಬಿಡುಗಡೆ ಮಾಡಿದೆ. ಆದರೆ ಜೊತೆಗೇ ಬಂದ ಆದೇಶ ಹೇಳುತ್ತದೆ ‘ನಿಮ್ಮ ಊರಿನ ಸಮೀಪದಲ್ಲಿ ಇಲಾಖೆಯೇ ನಡೆಸಿಕೊಡುವ ಪುಸ್ತಕ ಮೇಳದಲ್ಲೇ ಎಲ್ಲರೂ ಖರೀದಿ ನಡೆಸತಕ್ಕದ್ದು.’ ಪುಸ್ತಕ ಮೇಳಗಳಾದರೋ ಸ್ಥಳೀಯರನ್ನು ಅವಗಣಿಸಿ ಬೆಂಗಳೂರಿನಿಂದಲೇ ಆಯೋಜಿಸಲ್ಪಟ್ಟಿತ್ತು. ಅದರಲ್ಲಿ ಮುಖ್ಯ ಭಾಗಿಗಳು – ಕೆಲವು ಪುಸ್ತಕ ಪ್ರಕಾಶಕರು ಮತ್ತು ಅವರ ಪ್ರಕಟಣೆಗಳು. ಅಂದರೆ ಅಷ್ಟೂ ಪ್ರಕಾಶಕರು ಮತ್ತು ಇನ್ನೆಷ್ಟೋ ಹೆಚ್ಚಿನವರ ಪುಸ್ತಕ ವೈವಿಧ್ಯವನ್ನು ಪ್ರಾದೇಶಿಕವಾಗಿ ವರ್ಷ ಪೂರ್ತಿ ನೆರಹಿಕೊಂಡು, ಇಂಥಾ ಗಳಿಗೆಯಲ್ಲಿ ನ್ಯಾಯವಾಗಿ ಪೋಷಿಸಲ್ಪಡಬೇಕಾದ ಬಿಡಿ ವ್ಯಾಪಾರಿಗಳನ್ನು ಈ ಕ್ರಮ ವಂಚಿಸಿದೆ. ಮತ್ತೆ ಮೌಲಿಕವಾಗಿ ತಮ್ಮ ಗ್ರಂಥಾಲಯಗಳನ್ನೂ ಈ ಕ್ರಮ ವಂಚಿಸಿದೆ ಎಂದು ಗುಣಪಕ್ಷಪಾತಿಗಳಾದ ಹಲವು ಶಿಕ್ಷಕರು ಗೊಣಗಿದ್ದನ್ನೂ ನಾನು ಕೇಳಿದ್ದೇನೆ.ವಿವಿಧ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ, ಕಪುಪ್ರಾ ಪ್ರಾಯೋಜಿತವಾದ ಪುಸ್ತಕ ಮೇಳಗಳಲ್ಲಿ, ಮತ್ತೀಗ ಶಿಕ್ಷಣ ಇಲಾಖೆ ನೇರ ಶಾಲೆಗಳಿಗೇ ನಡೆಸಿದ ಪುಸ್ತಕ ಮೇಳದಲ್ಲಾದರೂ ಸಂಬಂಧಿಸಿದ ವಕ್ತಾರರು ಮತ್ತು ಪ್ರಾಯೋಜಿತ ಮಾಧ್ಯಮಗಳು ಬಿಂಬಿಸುವಷ್ಟು ‘ಅದ್ಭುತ’ ಘಟಿಸಿದೆಯೇ? ಮೊನ್ನೆ ತಾನೇ ಮಂಗಳೂರು, ಕಲ್ಲಡ್ಕ, ಪುತ್ತೂರುಗಳಲ್ಲಿ ಮೇಳ ಭಾಗಿಯಾಗಿ ಬಂದವರು ‘ಹಿರಿಯ’ ಪ್ರಕಾಶನ ಸಂಸ್ಥೆಗಳು ನಡೆಸುವ ಅನಾಚಾರದ ಬಗ್ಗೆ ಬಹಿರಂಗವಾಗಿ ದಾಖಲಿಸಲಾಗದ ಮಟ್ಟದಲ್ಲಿ ಹೇಳಿಕೊಂಡರು! ಎಲ್ಲ ಖರೀದಿಗಳ ಮೇಲೂ ಏಕಪ್ರಕಾರವಾದ ೧೫% ಸಾಂಸ್ಥಿಕ ವಟ್ಟಾ (ರಿಯಾಯ್ತಿ) ಮಾತ್ರ ಕೊಡುವುದೆಂದೂ (ಬಂದು ಹೋಗುವ, ಕಟ್ಟು ಸಾಗಿಸುವ) ಅನ್ಯ ವೆಚ್ಚಗಳನ್ನು ಅವರವರೇ ಭರಿಸಿಕೊಳ್ಳಲು ಬಿಡುವುದೆಂದೂ ನಿರ್ಧಾರವಾಗಿತ್ತು. ಆದರೆ ಸಾಂಸ್ಥಿಕ ದಾಖಲೆಗಳಲ್ಲಿ ಹೆಚ್ಚುವರಿ ರಿಯಾಯ್ತಿಯೆಂದೇ ಕಾಣಿಸಿ, ಖಾಸಗಿಯಾಗಿ ಬಟವಾಡೆಯಾದ ಇನಾಮು ಮತ್ತು ಸವಲತ್ತುಗಳು ಸಹಜವಾಗಿ ದೊಡ್ಡ ಬಂಡವಾಳಿಗರನ್ನೇ ದೊಡ್ಡ ಫಲಾನುಭವಿಯಾಗಳನ್ನಾಗಿಯೂ ತೋರಿಸಿತು.



ಮೊನ್ನೆಯಷ್ಟೇ ಬಳ್ಳಾರಿ ಮೇಳದಲ್ಲಿ ಭಾಗವಹಿಸಿ ಬಂದ ಗೆಳೆಯರೊಬ್ಬರ ಪತ್ರದ ಸಾರಾಂಶ ನೋಡಿ: “ಮೊನ್ನೆ ಬಳ್ಳಾರಿಯ ಪುಸ್ತಕ ಪ್ರದರ್ಶನಕ್ಕೆ ಹೊಗಿದ್ದೆ. ೨೦% ಡಿಸ್ಕೌಂಟ್ ಕಡ್ಡಾಯ ಮಾಡಿದ್ದಾರೆ. ಪ್ರಕಾಶಕರೇ ಅಲ್ಲದವರು ನೂರಾರು ಮಳಿಗೆ ಹಾಕಿ ೫೦-೬೦% ಡಿಸ್ಕೌಂಟ್ ಕೊಟ್ಟು ಪುಸ್ತಕ ಮಾರುತ್ತಿದ್ದರು. ನಮ್ಮಲ್ಲಿಗೂ ಅದನ್ನು ಬಯಸಿ ಬಂದವರನ್ನು ಬೈದು ಕಳಿಸಿದೆ. ನಾವು ಇದಕ್ಕೆಲ್ಲ ಸಾಕ್ಷಿಯಾಗಬೇಕಲ್ಲ ಎನಿಸುತ್ತದೆ. ಮುಂದಿನ ಬದುಕಿನ ಬಗೆಗೆ ಆಸಕ್ತಿ ಮತ್ತು ನಂಬಿಕೆಯೆ ಹೊರಟು ಹೋಗುತ್ತದೆ. ಮೈಸೂರಿನ ಕೆಲವು ಪ್ರಕಾಶಕರು ಟೀಚರ್ಸ್‌ಗಳನ್ನು ಕೂಡಾ ಕರಪ್ಟ್ ಮಾಡುತ್ತಿದ್ದಾರೆ. ಅವರು ಮಕ್ಕಳಲ್ಲಿ ಪುಸ್ತಕ ಪ್ರೀತಿ ಹೇಗೆ ಹುಟ್ಟಿಸಲು ಸಾಧ್ಯ? ಮುಂದಿನ ಜನಾಂಗ ಪುಸ್ತಕದ ಬಗೆಗೆ ಆಸಕ್ತಿ ಹುಟ್ಟುವುದು ಬೆಳೆಯುವುದು ಹೇಗೆ? ನಾವೆಲ್ಲಾ ಇಷ್ಟು ಶ್ರದ್ಧೆಯಿಂದ ಕಟ್ಟಿದ ಈ ಉದ್ಯಮ ಮುಂದಿನ ದಿನಗಳಲ್ಲಿ ಹೇಗೆ ಸಾಗುತ್ತದೆ? ತಲೆಯ ತುಂಬೆಲ್ಲಾ ಇದೇ ಯೋಚನೆ.” ಪ್ರಕಾಶಕನಿಂದ ಬಿಡಿ ಖರೀದಿದಾರನಿಗೆ ಪುಸ್ತಕಗಳನ್ನು ನೇರ ಮುಟ್ಟಿಸುವ ಇಂಥಾ ಯೋಜನೆಗಳೇ ಇಂದು ಪುಸ್ತಕೋದ್ಯಮವನ್ನು ಭ್ರಾಮಕ ಸ್ವರ್ಗಕ್ಕೆ ಎಳೆದೊಯ್ಯುತ್ತಿದೆ. (ಇಂಥಲ್ಲಿ ನನ್ನ ಪ್ರಕಟಣೆಗಳನ್ನು ರಾಜ್ಯಾದ್ಯಂತ ಓದುಗರಿಗೆ ಕಾಣಿಸುವ ಪ್ರಯತ್ನವೂ ಸೋತದ್ದು ಸಹಜವೇ ಇದೆ)



ರಾಜ್ಯದಲ್ಲಿ ಗ್ರಂಥಾಲಯ ಇಲಾಖೆಗೆ (ಇದು ಸರಕಾರದಡಿಯಲ್ಲಿ ಸ್ವತಂತ್ರ) ಜಿಲ್ಲಾ, ನಗರ, ತಾಲೂಕು ಮತ್ತೂ ಸಣ್ಣ ಮಟ್ಟದಲ್ಲಿ, ಸಂಚಾರೀ ರೂಪದಲ್ಲೂ ಶಾಖೋಪಶಾಖೆಗಳು ರಾಜ್ಯಾದ್ಯಂತ ವ್ಯಾಪಕವಾಗಿ ಇವೆ. ಇವೆಲ್ಲ ಬೆಂಗಳೂರು ಕೇಂದ್ರೀಕೃತ ಸಗಟು ಖರೀದಿ ಜಾಲದಲ್ಲಿ ಒದಗಿದವನ್ನೇ ‘ಅನುಭವಿಸಿಕೊಂಡು’ ಬಹುಕಾಲ ಪ್ರಾದೇಶಿಕ ಖರೀದಿಯಲ್ಲಿ ನಿರ್ವೀರ್ಯವಾಗಿದ್ದವು. ಈಚೆಗೆ ಅದು ಸ್ವಲ್ಪ ಮಟ್ಟಿಗೆ ಮುಕ್ತವಾದರೂ ಎಲ್ಲಾ ಸರಕಾರೀ ಇಲಾಖೆಗಳಂತೆ ಪಾರದರ್ಶಕವಾಗಿಲ್ಲ, ಜನ ಸ್ನೇಹಿಯಂತೂ ಖಂಡಿತಾ ಅಲ್ಲ. ಸಹಜವಾಗಿ ಪ್ರಾದೇಶಿಕ ಅಗತ್ಯಗಳನ್ನು ಒದಗಿಸುವ ಒತ್ತಡ ಮತ್ತದಕ್ಕಾಗಿ ಊರಿನ ಪುಸ್ತಕ ವ್ಯಾಪಾರಿಗಳೊಡನೆ ಚೊಕ್ಕ ಸಂಬಂಧ ಉಳಿಸಿಕೊಳ್ಳುವ ಪ್ರಯತ್ನ ಎಂದೂ ಆದದ್ದಿಲ್ಲ.



ಹಿಂದೆಲ್ಲಾ ಸ್ವತಂತ್ರ ವೃತ್ತಿಯಾಗಿಯೇ ಯಶಸ್ವಿಯಾಗಿದ್ದ ಖಾಸಗಿ ಸರ್ಕುಲೇಟಿಂಗ್ ಲೈಬ್ರರಿ ಜಾಲ ಇಂದು ಬಹುತೇಕ ಮುಚ್ಚಿಹೋಗಿವೆ ಅಥವಾ ತುಂಬ ಶೋಚನೀಯ ಸ್ಥಿತಿಯಲ್ಲಿವೆ. ಅಂಚೆ, ಬ್ಯಾಂಕ್, ಮೊದಲಾದ ಸರಕಾರೀ ಮತ್ತು ಖಾಸಗಿ ದೊಡ್ಡ ಉದ್ಯಮಗಳು ತಮ್ಮ ಸದಸ್ಯರುಗಳಿಗಾಗಿಯೇ ಮನರಂಜನಾ ಸಂಘಗಳನ್ನು ಕಟ್ಟುವುದು ಇದ್ದದ್ದೇ. ಅಲ್ಲಿ ಲಘು ಓದಿಗೊಂದಷ್ಟು ಕಾದಂಬರಿಗಳು, ವ್ರತಕ್ಕೊಂದು ಅನುಷ್ಠಾನ ದೀಪಿಕೆ, ಪ್ರವಾಸಕ್ಕೊಂದು (ಕಥನ ಸಾಹಿತ್ಯ ಅಥವಾ ಕನಿಷ್ಠ) ಮಾರ್ಗದರ್ಶಿ, ನಾಲಿಗೆ ಚಪಲಕ್ಕೊಂದು ಸೂಪಶಾಸ್ತ್ರ, ಹಾಡಿಕೊಳ್ಳಲು ಭಜನಾಸಂಗ್ರಹ, ನೋಡಿಕೊಳ್ಳಲು ನಾಟಕ ಪಠ್ಯ, ಆಡಿಕೊಳ್ಳಲು ಪ್ರಸಂಗ ಸಾಹಿತ್ಯ, ಅನುಸರಿಸಲು ಆದರ್ಶಗಳ ಕೋಶ, ಹಗುರಾಗಲು ನಗೆಹನಿಗಳ ಸಂಗ್ರಹ, ಆರೋಗ್ಯಕ್ಕೆ ಕ್ರೀಡೆ ಯೋಗ, ಅನಾರೋಗ್ಯಕ್ಕೆ ಮನೆಯಲ್ಲೇ ವೈದ್ಯ ಇತ್ಯಾದಿ ಪುಸ್ತಕಗಳ ಕಪಾಟುಗಳನ್ನು ರುಚಿಕಟ್ಟಾಗಿ ನಿಲ್ಲಿಸಿಕೊಳ್ಳುತ್ತಿದ್ದರು. ಅಂಗಡಿ ಕಟ್ಟುವಲ್ಲಿ ವ್ಯಾಪಾರಿಗೆಷ್ಟು ಉತ್ಸಾಹವೋ ಈ ಜನಕ್ಕೆ ಕೊಳ್ಳುವಲ್ಲೂ ಅಷ್ಟು ಉಲ್ಲಾಸವಿರುತ್ತಿತ್ತು. ಇಂದಿನ ಜೀವನ ಶೈಲಿಯಲ್ಲಿ ಅವೆಲ್ಲ ಎಲ್ಲಿ ಸತ್ತು ಹೋದವೋ ನನಗಂತೂ ಕುರುಹು ಸಿಕ್ಕಿಲ್ಲ.



ಪುಸ್ತಕಗಳು ತಮ್ಮ ವೃತ್ತಿಜೀವನದ ಅವಿಭಾಜ್ಯ ಅಂಗ ಎನ್ನುವ ಶಿಕ್ಷಕವರ್ಗ ಇಂದು ಅಲ್ಪಸಂಖ್ಯಾತ. ಅಲ್ಲೂ ಸ್ವಂತ ಹಣದಿಂದಲ್ಲದಿದ್ದರೂ ತಮ್ಮ ಸಂಸ್ಥೆಯ ಗ್ರಂಥಾಲಯ ಖರೀದಿಗಾಗುವಾಗ ದೊಡ್ಡ ಮೊತ್ತ ಪಡೆಯುವಲ್ಲಿ ವಿಭಾಗ ವಿಭಾಗಗಳೊಳಗೆ ಸ್ಪರ್ಧೆ ಇರುತ್ತಿತ್ತು. ಇಂದು ಗ್ರಂಥಾಲಯ ಅನುದಾನ ಬರಿದೇ ವಾಪಾಸಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಕತ್ತಿಗೆ ಕಟ್ಟಿ ಎಲ್ಲರೂ ‘ಅನ್ಯ ಕಾರ್ಯ’ ನಿರತರಾಗುತ್ತಾರೆಂದು ಹಲವು ಗ್ರಂಥಪಾಲರು ದೂರಿಕೊಳ್ಳುತ್ತಿದ್ದಾರೆ. ಹೀಗೇ ಸಾರ್ವಜನಿಕರಲ್ಲೂ ವೈವಿಧ್ಯಗಳನ್ನು ಗುರುತಿಸುವ, ಆಯ್ದುಕೊಳ್ಳುವ ಮತ್ತು ಖರೀದಿಸುವ ಜನ ದಿನೇ ದಿನೇ ಅಲ್ಪ ಸಂಖ್ಯಾತರಾಗುತ್ತಿದ್ದಾರೆ. ಆದರೆ ಅವರಿಗೂ ಈಗ ಗೋರಿಕಲ್ಲೆಳೆಯುವ ವ್ಯವಸ್ಥೆ ಕೆಲವು ಖ್ಯಾತನಾಮ ಪ್ರಕಾಶಕರಿಂದಲೂ ಮಾಲ್ ಸಂಸ್ಕೃತಿಯಿಂದಲೂ ಬಲಗೊಳ್ಳುತ್ತಿವೆ. ಊರಿನೆಲ್ಲಾ ವ್ಯಾಪಾರವನ್ನು ತಮ್ಮ ಉಡಿಗೇ ಕವುಚಿಕೊಳ್ಳುವ ಇವರ ಧೋರಣೆಯ ಒಳಹೊರಗನ್ನು ನನ್ನ ಅನುಭವಕ್ಕೆ ದಕ್ಕಿದಷ್ಟನ್ನು ಹೇಳಿಬಿಡುತ್ತೇನೆ.



ನಗರದ ಭಾರೀ ಬಜಾರ್ ಒಂದರಲ್ಲಿ ಅಷ್ಟೇ ಭಾರೀ ಪುಸ್ತಕ ಮಳಿಗೆ ಬರಲಿದೆ ಎಂಬ ಸುದ್ದಿ ಬಂತು. ಒಂದು ದಿನ ಅದರೊಬ್ಬ ಖರೀದಿ ಪ್ರತಿನಿಧಿ ನನ್ನ ಪ್ರಕಟಣೆಗಳನ್ನು ಕೇಳಿ ಬಂದ. ಆತನಿಗೆ ನನ್ನ ಪ್ರಕಟಣೆಗಳ ಗುಣ, ತತ್ತ್ವಕ್ಕಿಂತಲೂ ಮುಖ್ಯವಾಗಿ ಆತನ ಸಂಸ್ಥೆಯ ಮಹತ್ತನ್ನು ಬಿಂಬಿಸಬೇಕಾಗಿತ್ತು. ಅವರ ಭಾಷೆಯಲ್ಲೇ ಹೇಳಬೇಕಾದರೆ ‘ಒಮ್ಮೆಗೆ ಟೈಟಲ್ಸ್ ನೋಡಿಕೊಂಡು ಹಂಡ್ರೆಡ್ಸಿನಲ್ಲಿ ಕಾಪೀಸ್ ಲಿಫ್ಟ್ ಮಾಡ್ತೇವೆ. ಟ್ರೇಡ್ ಟರ್ಮ್ಸ್ – ಮಿನಿಮಮ್ ೪೦% ಡಿಸ್ಕೌಂಟ್, ನೈಂಟಿ ಡೇಸ್ ಟೈಮ್ ಮತ್ತು ಕೊನೆಯಲ್ಲಿ (ಪ್ರಕಾಶಕನ ಶವಪೆಟ್ಟಿಗೆಗೆ ಹೊಡೆದ ಅಂತಿಮ ಮೊಳೆ) – ಅನ್‌ಲಿಮಿಟೆಡ್ ರಿಟರ್ನ್ಸ್.’ ಆದರೆ ಗ್ರಾಹಕನ ಕೊನೆಯಲ್ಲಿ ಈ ಮಾಲ್ ಒಡ್ಡುವ ಮುಖ ದೊಡ್ಡ ಕಮಾಲ್! ಕೇಂದ್ರೀಕೃತವಾಗಿ ಹವಾನಿಯಂತ್ರಿತ ಅದೆಷ್ಟೋ ಸಾವಿರ ಚದರಡಿಗಳ ಪ್ರದರ್ಶನಾಂಗಣದಲ್ಲಿ ಯವುದುಂಟು ಯಾವುದಿಲ್ಲ ಎನ್ನುವ ವೈವಿಧ್ಯ. ಕೆಲವೊಂದು ಶೀರ್ಷಿಕೆಗಳಂತೂ ನೂರಾರು ಪ್ರತಿಗಳ ಸಂಖ್ಯೆಯಲ್ಲೂ ಮೋಹಕ ವಿನ್ಯಾಸದಲ್ಲೂ ಆಕರ್ಷಕ ಬೆಳಕಿನಲ್ಲೂ ಹರಡಿಕೊಂಡಿರುವಾಗ ಗಿರಾಕಿ ಮರುಳುಗಟ್ಟದಿನ್ನೇನು. ಧಾರಾಳವಿರುವ ಆರಾಮಾಸನಗಳಲ್ಲಿ ಕೂತು, ನಿಂತು, ಕಾಫಿ ಹೀರುತ್ತಾ ಪುಸ್ತಕಗಳನ್ನು ನೋಡುವುದು ಮಾತ್ರವಲ್ಲ ನಿರ್ವಿಘ್ನವಾಗಿ ಓದಿ ಮತ್ತೂ ಬೇಕಾದರೆ ಕೊಳ್ಳುವ ಅನುಭವ ಯಾರನ್ನೂ ಮೋಹಪರವಶರನ್ನಾಗಿಸುವುದು ತಪ್ಪಲ್ಲ. ಅದರ ಮೇಲೆ ಕಾಲಕಾಲಕ್ಕೆ, ಕೆಲವು ವಿಭಾಗಕ್ಕೆ ವಿಶೇಷ ರಿಯಾಯ್ತಿಗಳು, ಬಹುಮಾನಗಳು. ಸಾಲದ್ದಕ್ಕೆ ಉಚಿತ ಸದಸ್ಯ ಕಾರ್ಡು ಪಡೆದರೆ ಎಷ್ಟು ಸಣ್ಣ ಖರೀದಿಗೂ ಖಾಯಂ ರಿಯಾಯ್ತಿ, ಇಲ್ಲಿ ಸವಲತ್ತುಗಳ ಬಾಲ ಹನುಮಂತನದ್ದು.



ನಾನೇನೋ ಪುಸ್ತಕ ಒದಗಿಸಲಿಲ್ಲ. ಆದರೇನು ಮಾಲ್ ತೆರೆದಾಗ ಜನಪ್ರಿಯ ಲೇಖಕರೆಲ್ಲರ ಕೃತಿಗಳ ಸಂತೆ ಅಲ್ಲಿ ನೆರೆದಿತ್ತು. ಮಾಲ್ ಖ್ಯಾತಿಗೆ ಕುಂದು ಬಾರದಂತೆ ಒಂದು ವಾರ ‘ಇನಾಗುರಲ್ ಆಫರ್ ೫೦%’ ಮುಂದೆ ತಿಂಗಳ ಕಾಲ ೨೦%. ನನ್ನ ಆಶ್ಚರ್ಯಕ್ಕೆ ಮೇರೆ ಇಲ್ಲದಂತೆ ಖ್ಯಾತ ಸಾಹಿತಿ ಭೈರಪ್ಪನವರ ಕೃತಿಗಳೂ ಅಲ್ಲಿತ್ತು. ಅವುಗಳ ಪ್ರಕಾಶಕ – ಸಾಹಿತ್ಯ ಭಂಡಾರ, ವ್ಯಾಪಾರೀ ಧೋರಣೆಯಲ್ಲಿ ಬಲುಬಿಗಿ. ಅವರು ಯಾವುದೇ ಪುಸ್ತಕ ವ್ಯಾಪಾರಿಗೆ ೨೫% ಮಿಕ್ಕು ವ್ಯಾಪಾರೀ ವಟ್ಟಾ ಕೊಟ್ಟದ್ದಿಲ್ಲ. ಸಾಲದ ಲೆಕ್ಕ ಬರೆಸುವವರಿಗೆ ಇವರು ಮಣೆ ಹಾಕಿದ್ದೂ ಇಲ್ಲ. ಅಂದರೆ ಮಾಲ್‌ನಲ್ಲಿ ಕಳ್ಳಮಾಲು? ಊಹುಂ, ಸಾಧ್ಯವೇ ಇಲ್ಲ. ಇಂದು ಕಳ್ಳ ಮುದ್ರಣದ ಅಗತ್ಯ ಬರುವಷ್ಟು ಕನ್ನಡ ಪ್ರಕಾಶನರಂಗ ಸಮೃದ್ಧವಾಗಿ ಉಳಿದಿಲ್ಲ. ಕುತೂಹಲಕ್ಕೆ ಭಂಡಾರಕ್ಕೇ ದೂರವಾಣಿಸಿದೆ. ಯಜಮಾನರಲ್ಲಿ ಒಬ್ಬರಾದ ರಾಜ ಹೇಳುವಂತೆ ಬೆಂಗಳೂರಿನದೇ ಇನ್ಯಾರೋ ಪುಸ್ತಕ ವ್ಯಾಪಾರಿಗಳೊಡನೆ ಮಾಲ್‌ನವರು ಮಾಡಿಕೊಂಡ ಒಳ-ಒಪ್ಪಂದದ ಫಲವಂತೆ. ಅನಿವಾರ್ಯ ಪುಸ್ತಕಗಳನ್ನು ಕಡಿಮೆ ದರದಲ್ಲಾದರೂ ಕೊಂಡು, ಸಣ್ಣ ನಷ್ಟದಲ್ಲಾದರೂ ಗಿರಾಕಿ ಹಿಡಿದಿಡುವ ಬುದ್ಧಿವಂತಿಕೆ. ಮುಂದೆ ಊರೂರಿನ ಪುಸ್ತಕ ಮಾರುಕಟ್ಟೆಯ ಏಕಸ್ವಾಮ್ಯ ಹಿಡಿದಾಗ ಅದೇ ಪೀಠದಲ್ಲಿ ಗಿರಾಕಿಯನ್ನೂ ಪ್ರಕಾಶಕನನ್ನೂ ಬಲಿಗೊಟ್ಟು ದಕ್ಕಿಸಿಕೊಳ್ಳುವ ಹುನ್ನಾರ. (ಕ್ಷುದ್ರ ಬಯಕೆಗಳಲ್ಲಿ ಜಯಿಸಿ, ಮಹತ್ತಿನಲ್ಲಿ ಬಿದ್ದ ಮ್ಯಾಕ್‌ಬೆತ್ ನೆನಪಿಸಿಕೊಳ್ಳಿ) ಇವನ್ನೆಲ್ಲಾ ವಿವರಿಸ ಹೋಗುವ ಬಿಡಿ ಪುಸ್ತಕ ವ್ಯಾಪಾರಿ ‘ಅತಿಲಾಭದಲ್ಲಿ’ ಪಾಲು ಕೊಡಲು ಹಿಂಜರಿವ ಜುಗ್ಗ, ಅವಾಸ್ತವವಾದಿ. ಸೂಪರ್ ಬಜಾರುಗಳಿಗೆ ಎರವಾದ ಜಿನಸಿನ ಅಂಗಡಿಗಳಂತೆ, ಸ್ಪೆಷಲಿಸ್ಟ್ ವೈದ್ಯರುಗಳು ಮತ್ತು ಹೈಟೆಕ್ ಆಸ್ಪತ್ರೆಗಳೂ ಬರುತ್ತಿದ್ದಂತೆ ಖಿಲವಾದ ಕುಟುಂಬ ವೈದ್ಯರಂತೆ, ಬ್ರಾಂಡೆಡ್ ದಿರುಸು ಆಭರಣಗಳ ಸುನಾಮಿ ಬಡಿಯುತ್ತಾ ದರ್ಜಿ ಅಕ್ಕಸಾಲಿಗಳು ಕೊಚ್ಚಿ ಹೋಗುತ್ತಿರುವ ಹಾಗೆ (ಪಟ್ಟಿಯನ್ನು ನೀವೆಲ್ಲಿಯವರೆಗೂ ಬೆಳೆಸಬಹುದು) ಬಿಡಿ ಪುಸ್ತಕ ವ್ಯಾಪಾರಿಗಳೂ ಬಾಗಿಲು ಹಾಕುವ ದಿನಗಳು ದೂರವಿಲ್ಲ. ಆದರೆ ನೆನಪಿರಲಿ, ಪ್ರವಾಹದ ಸೆಳೆತಕ್ಕೆ ಉದುರೆಲೆ ಕಡ್ಡಿಗಳಷ್ಟೇ ಕೊಚ್ಚಿಹೋಗುವುದಲ್ಲ, ಬೇರು ಬಿಟ್ಟ ಮರಗಳೂ ಸರದಿಯಲ್ಲಿರುತ್ತವೆ!



ಬೆಂಗಳೂರಿನಲ್ಲಿಂದು ಸರಾಸರಿಯಲ್ಲಿ ಕನಿಷ್ಠ ವಾರಕ್ಕೊಂದರಂತೆ ಕನ್ನಡ ಪುಸ್ತಕ ಪ್ರಕಟವಾಗುತ್ತಲೇ ಇದೆ. ಅದೂ ಅಬ್ಬರದ ಬಿಡುಗಡೆ ಸಮಾರಂಭ. ಭೋರ್ಗಾಳಿಯೇನು, ಮಿಂಚಿನ ಸೆಳಕೆಷ್ಟು, ಇನ್ನು ಗುಡುಗು ಅಬ್ಬಬ್ಬ, ಪ್ರವಾಹ ಸಾಕ್ಷಾತ್ ಗಂಗಾವತರಣ! ಆದರೇನು, ಫ಼ೇವರ್ ಫ಼ಿನಿಶ್ಡ್ ಡಾಮರು ಮಾರ್ಗಗಳಲ್ಲಿ, ಕಾಂಕ್ರೀಟೀಕರಣಗೊಂಡ ಚತುಷ್ಪಥಗಳಲ್ಲಿ, ಇಂಟರ್ಲಾಕ್ಡ್ ಅಥವಾ ಲ್ಯಾಂಡ್‌ಸ್ಕೇಪ್ಡ್ ಹಾಸುಗಳಲ್ಲಿ ಸ್ಮೂತಾಗಿ ಸರಿದು ಭೂಗತ ಚರಂಡಿಗಳಲ್ಲಿ ಲೀನ. ಬೆರಗಿನಲ್ಲೇ ಮೊಗೆದಿರೋ ನೀವು ಧನ್ಯರು. ವ್ಯವಸ್ಥೆಯಲ್ಲಿ ಸೋರಿತೋ ನೆಲದ ಭಾಗ್ಯ. ನನ್ನ ಕೈ ಸ್ವಲ್ಪ ಉದ್ದ. ಬೆಂಗಳೂರಿನ ಮಳೆಗೆ ನಾನು ಯಥಾನುಶಕ್ತಿ ಚೊಂಬು ಚರಿಗೆ ಒಡ್ಡುವುದುಂಟು. ಮಂಗಳೂರಿನ ದಾಹಕ್ಕೆ ನಾಲ್ಕು ಹನಿ ಸಿಂಪಡಿಸುತ್ತಿದ್ದುಂಟು. ಆದರೀಚೆಗೆ ನದಿ ತಿರುಗಿಸುವ ಜಾಣರು ಹೆಚ್ಚಿದ್ದಾರೆ. ಪುತ್ತೂರಿನ ಶಾರದಾ ಪುಸ್ತಕ ಮಳಿಗೆಯ ಯಜಮಾನರ ಮಾತು ಕೇಳಿ. “ಸಣ್ಣ ಊರಿನಲ್ಲಿ ಹೊಸಹೊಸತನ್ನು ಬಂದಂತೆ ಸ್ವಾಗತಿಸುವವರು ಎಷ್ಟೆಂದು ಬಲುಬೇಗನೇ ಗುರುತಿಸಬಹುದು. ಅವರಿಗೆ ನೇರ ಪುಸ್ತಕ ಒದಗಿಸುವ ಉತ್ಸಾಹ ಪ್ರಕಾಶಕರದ್ದು. ಅವರು ಮರೆತರೂ ಮನೆಮನೆಗೆ ಮುಟ್ಟಿಸುವ ತಿರುಗೂಳಿಗಳಿದ್ದಾರೆ. ನಾನೀಗಾಗಲೇ ಪುಸ್ತಕ ವ್ಯಾಪಾರದಿಂದ ಡೈವರ್ಶನ್ ಹುಡುಕಿಕೊಂಡು, ರೂಢಿಸುತ್ತಿದ್ದೇನೆ.” ನನ್ನಲ್ಲಿಯೂ ಹರಿವು ಬಡವಾಗುತ್ತಿದೆ. ವಾರವಾರದ ಪುಸ್ತಕದ ಮೇಲೆ ಪುಸ್ತಕ ಬಿದ್ದು ದೂಳು ಸೇರುತ್ತಿದೆ. ಪ್ರಕಾಶನ ಮುಚ್ಚಿದಾಗ “ಹಾಗೊಂದು ಇತ್ತೇ?” ಎಂದು ಕೇಳಿದವರಿದ್ದಾರೆ. “ಅಂಗಡಿಯೇ ಮುಚ್ಚಿತೆಂದು ತಿಳಿದೆ” ಎಂದವರೂ ಇದ್ದಾರೆ. ನಡೆಯಬಲ್ಲವನಿಗೆ ದಾರಿ ಅನಂತ.