Thursday, July 28, 2011

ಕಥಾ ಸ್ಪರ್ಧೆಯ ಫಲಿತಾಂಶ

ದಿ. ಎಂ. ವ್ಯಾಸ ಅವರ ನೆನಪಿಗಾಗಿ ‘ತರಂಗ’ ಮತ್ತು ವ್ಯಾಸರ ಪುತ್ರ ಡಾ. ಎಂ. ತೇಜಸ್ವಿ ವ್ಯಾಸ್ ಸಂಯೋಜಿಸಿದ ‘ವ್ಯಾಸ ಕಥಾಸ್ಪರ್ಧೆ’ಯ ಮೊದಲ ಬಹುಮಾನ ಅನುಪಮಾ ಪ್ರಸಾದ್ ಕಾಸರಗೋಡು ಅವರು ಖಾದಿ ಅಂಗಿ’ ಕಥೆಗೆ, ಮತ್ತು ಎರಡನೆಯ ಬಹುಮಾನ ಕಸ್ತೂರಿಬಾಯಿರಿ, ಬಿಜಾಪುರ ಅವರು ‘ಎರಡು ರೆಕ್ಕೆಗಳು’ ಕಥೆಗೆ ಪಡೆದಿದ್ದಾರೆ.

ಮೂರನೆಯ ಬಹುಮಾನಕ್ಕೆ ‘ಬೇಟೆ‘ – ಇಂದ್ರಕುಮಾರ್ ಎಚ್.ಬಿ, ದಾವಣಗೆರೆ ಮತ್ತು ‘ನಂಜು’ -ವಿಜಯಾ ಮೋಹನ್,ತುಮಕೂರು ಅರ್ಹರಾಗಿದ್ದಾರೆ.

ಸಮಾಧಾನಕರ ಬಹುಮಾನ ‘ಸಾಗುವಾನಿ ಬಾಗಿಲು’ ಕಥೆಗೆ -ಸಂಧ್ಯಾ ಹೊನಗುಂಟಿಕರ್, ಗುಲ್ಬರ್ಗಾ ಅವರಿಗೆ ಹಾಗು ‘ಹೀಗೊಬ್ಬ ಪಾಂಡುರಂಗ ಕಾಳೆ’ ಕಥೆಗೆ -ಶ್ವೇತಾ ನರಗುಂದ, ಬೆಳಗಾವಿ ಅವರಿಗೆ ನೀಡಲಾಗಿದೆ.

ಕಥಾಸ್ಪರ್ಧೆಗೆ ಫಕೀರ್ ಮಹಮ್ಮದ್ ಕಟ್ಪಾಡಿ,ಪ್ರೊ. ಎಚ್.ಎಸ್. ರಾಘವೇಂದ್ರ ರಾವ್ಜ ಮತ್ತು .ಪಿ. ಬಸವರಾಜು ಅವರು ತೀರ್ಪುಗಾರರಾಗಿದ್ದರು.

Sunday, July 24, 2011

ನವ ಕರ್ನಾಟಕದ -ಬದಕು ಬದಲಿಸಬಹುದು

Baduku Badalisabahudu
A collection of Articles by Nemichandra

Tales of fortitude

Manninda Eddavaru by Kusuma Shanbhag

Navakarnataka, Rs. 80

Kusuma Shanbhag's “Manninda Eddavaru” is a novel, that in quite a remarkable manner, portrays the existential predicament of a woman, Kaveri. However, through Kaveri's conflicts, anxieties and, more importantly, indomitable will, the work foregrounds the plight of women caught in a feudal patriarchal order where the male, both in his active and utterly passive states, attempts to negate the very being of women even though he unhesitatingly uses the woman to fulfil all his needs.

The manner in which Kusuma Shanbhag weaves the story of Kaveri and constructs the life of an entire community in a very simple, but arresting way is truly commendable. The entire narration, totally devoid of rhetorical flourishes, is simple, direct, immediate and opens up a world not very familiar to urban readers. But the immediacy of experience that comes through the rich details of the characters the work portrays, dissolves all barriers the reader may carry because of her/his own different location in terms of space and time.

“Manninda Eddavaru” revolves round a small agrarian community fairly removed from the modernised urban centres, especially as regards the attitudes and values it carries. What is truly extraordinary about the novel is that its scheme of narration never, ever, slips into a terrain where the situations and the characters depicted emerge as ideological constructions of the author. At the very centre of its feudal world we behold women of exceptional strength and character who, in different ways, come to terms with the nature of their lives, though, of course, not all of them confront and defy the patriarchal order as the protagonist Kaveri does, and so very triumphantly.

The stories of Subbamma, Savitri, Seetha, Janaki, Shylaja and Kaveri are actually fine images of the different physical and emotional realities of women which eventually integrate to evolve as metaphors for women's lives. Women of the older generation like Subbamma and Janaki are deeply aware of the injustice they have to put up with even though they are not in a position to protest. It is the younger generation that stands up to resist the tyranny of the unjust and unethical ways of men. While doing so they do not mind breaking feudal family ties, and rules of the caste system. Kaveri is deprived of education, and is even forced to remain unmarried for she has to slave for the well being of the family and her brother. It is this insensitive and brutal will of the male that Kaveri fights fearlessly and even goes to a court of law against her father and brother to get justice. The refusal to get tied down to a decadent conservative male order propels an upper caste girl like Seetha to fall in love and elope with Kechu, a labourer from the lower caste, unmindful of the consequences. The fervent, but helpless, pleas of Subbamma and Janaki, as house bound women, do reflect the presence of a sense of justice and equality even in women steeped in the traditional order. Kusuma Shanbhag takes us into the inner cosmos of women without adversely affecting the experiential realm of women, which as a woman novelist, she is in fact deeply preoccupied with. This is the major strength of “Manninda Eddavaru”.

The other crucial dimension of the novel is that it does not parade defiant women as totally successful and victorious. Seetha becomes self destructive as her life with Kechu develops independent of traditional values. Kaveri, for all her defiance, blunders while choosing the utterly cunning Narayana for a husband. In spite of all these the women do not perish in body and spirit. Kaveri looks forward to a future with a pathetically abandoned child to nurse and care for. “Manninda Eddavaru” is about those women who daringly rise from the dust they have been pushed into by a desensitised social order with no elementary understanding of its own rottenness.

N. Manu Chakravarthy


Saturday, July 23, 2011

ಪೋಬಿಯ: ಎಚ್ಚರ ತಪ್ಪಿದರೆ ಅಪಾಯ


- ಸಂಪತ್ ಬೆಟ್ಟಗೆರೆ

ಹರುಕು ಬಟ್ಟೆ, ಹಸಿದ ಹೊಟ್ಟೆಯ ನಡುವೆ ಸ್ಲೇಟು, ಬಳಪ ಹಿಡಿದು ಸರಕಾರಿ ಶಾಲೆ, ಅಂಗನವಾಡಿಯತ್ತ ಬರಿಗಾಲಲ್ಲಿ ಹೆಜ್ಜೆ ಇಡುವ ಕನ್ನಡ ಹೈಕಳು; ಶೂ, ಟೈ, ಕೋಟು ಧರಿಸಿ-ಆಟೊ, ಟ್ಯಾಕ್ಸಿ, ಕಾರನೇರಿ ಕೆ.ಜಿ. ಸ್ಟ್ಯಾಂಡರ್ಡ್ಸ್ ಇಂಗ್ಲಿಷ್ ಸ್ಕೂಲ್‌ಗಳತ್ತ ಜರ್ನಿ ಮಾಡುವ ಇಂಗ್ಲಿಷ್ ಮಕ್ಕಳು. ಹಿರಿಯರ ದಿನನಿತ್ಯದ ತಾಪತ್ರಯಗಳೆಲ್ಲ ಕಳೆದು ಹೋಗುತ್ತಿರುವುದು ಅಂತೆಯೇ ಬೆಳೆದು ದೊಡ್ಡವರಾಗುತ್ತಿರುವುದು ಕಾಲದ ಮಹಿಮೆಯೇ? ಸಂದಭರ್ದ ಅನಿವಾರ್ಯತೆಯೇ? ಎಂಬಂತಹ ತಳಮಳಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮನೋವೈದ್ಯ ಡಾ.ಪಿ.ವಿ. ಭಂಡಾರಿಯವರು ‘ಸ್ಕೂಲ್ ಫೋಬಿಯ’ ಕೃತಿಯಲ್ಲಿ ಮಾಡಿದ್ದಾರೆ.

ಅವರು ತಮ್ಮಲ್ಲಿಗೆ ಚಿಕಿತ್ಸೆಗೆಂದು ಬಂದಂತಹ ಎಳೆಮಕ್ಕಳ ಮನಸ್ಥಿತಿಯನ್ನು ‘ಆಪ್ತ ಸಮಾಲೋಚಕ’ನಾಗಿ ಗ್ರಹಿಸಿ ಸಾದೃಶ್ಯ ಘಟನಾವಳಿಗಳಿಗೆ ಅಕ್ಷರರೂಪ ನೀಡಿ, ಕಥೆಗಳನ್ನಾಗಿ ಹೆಣೆದು ಮಾದರಿ ಚಿತ್ತ ಚಿತ್ರಣ ದರ್ಪಣವನ್ನಾಗಿಸಿದ್ದಾರೆ. ಂ+ ಪಡೆಯುವ ಬುದ್ಧಿವಂತೆ 5ನೇ ತರಗತಿ ವಿದ್ಯಾರ್ಥಿ ಸ್ವಾತಿ ಒಂದು ದಿನ ತನ್ನ ತಾಯಿಯ ಬಳಿ ‘‘ಅಮ್ಮ ನಾನು ಸ್ಕೂಲ್‌ಗೆ ಹೋಗೋಲ್ಲ’’ ಎಂದು ಇದ್ದಕ್ಕಿದ್ದಂತೆಯೇ ಹಟ ಹಿಡಿಯುವುದು, ಹತ್ತನೆ ತರಗತಿ ಓದುತ್ತಿರುವ ಮಯೂರ್ ಕೆಲವು ದಿನಗಳಿಂದ ಸಪ್ಪಗಾಗಿ ಓದಿನಲ್ಲಿ ಆಸಕ್ತಿ ಕಳೆದುಕೊಂಡಿರುವುದು ಕ್ರಮವಾಗಿ ಆ ಮಕ್ಕಳ ತಂದೆ ತಾಯಿಗಳಿಗೆ ಆತಂಕ ಹುಟ್ಟಿಸುವ ಸಂಗತಿಗಳಾಗಿ

ಪುಸ್ತಕ : ಸ್ಕೂಲ್ ಫೋಬಿಯಲೇಖಕರು: ಡಾ.ಪಿ.ವಿ. ಭಂಡಾರಿಪ್ರಥಮ ಮುದ್ರಣ: 2011ಬೆಲೆ: 50ರೂ.ಪ್ರಕಾಶಕರು:ಸರಸ್ವತಿ ಬಾಯಿ ಪ್ರಕಾಶನಮಾನಸ ಸದಾನಂದ ಟವರ್ಸ್ ಸಿ.ಟಿ. ಬಸ್‌ಸ್ಟಾಂಡ್ ಉಡುಪಿದೂರವಾಣಿ: 9242124621

ಕಾಡುತ್ತವೆ. ಪುರೋಹಿತರು, ದೇವರು ಎಂದು ಸುತ್ತಾಡುವ ಪೋಷಕರು ಕೊನೆಗೆ ಮನೋವೈದ್ಯ ಭಂಡಾರಿಯವರನ್ನು ಸಂಪರ್ಕಿಸಿದಾಗ ಸ್ವಾತಿಗೆ ‘ಗೀಳು ರೋಗ’ ಮಯೂರನಿಗೆ ‘ಖಿನ್ನತೆ’ಯಿದೆ ಎಂದು ಅರಿವಾಗುತ್ತದೆ.

ಇದೊಂದು ‘ಸ್ಕೂಲ್ ಫೋಬಿಯ’ ಎಂದು ನಿರೂಪಿಸಿದ ಲೇಖಕ, ಕವಿ, ವೈದ್ಯ ಡಾ. ಭಂಡಾರಿ, ಪೋಷಕರೆನಿಸಿಕೊಂಡವರು ಮಕ್ಕಳ ಮುಗ್ಧತೆಯನ್ನಷ್ಟೇ ಅಲ್ಲದೆ ಒಳಮನಸ್ಸಿನ ಸೂಕ್ಷ್ಮತೆಯನ್ನು ತಮ್ಮ ತಿಳಿಗಣ್ಣಿನಿಂದ ನೋಡಬೇಕಾದ ಅವಶ್ಯಕತೆ, ಸಂದರ್ಭ ಹಾಗೂ ಕಾಲದ ತುರ್ತಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ನನ್ನ ಹತ್ತಿರವು ಬಾಕ್ಸ್ ಇದೆ ಸಾರ್ ‘ನಾನೇನು ತಪ್ಪುಮಾಡಲಿಲ್ಲ ಸಾರ್- ಸಾರಿ’ ಎಂಬ ಕಥಾಲೇಖನಗಳಲ್ಲಿ ಶಿಕ್ಷಕರು
ವಿದ್ಯಾರ್ಥಿನಿಯರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಆಜ್ಞಾರ್ಪೂಕ ವ್ಯಕ್ತಿತ್ವವನ್ನು ಪ್ರದರ್ಶಿಸುವುದು ಏಕಮುಖ ಧೋರಣೆಯನ್ನು ಸೂಚಿಸುತ್ತದೆ. ಬದಲಿಗೆ ದ್ವಿಮುಖ ಪ್ರೇರಣೆಯ ಅವಶ್ಯಕತೆಯ ಬಗೆಗೆ ಭಂಡಾರಿಯವರು ಗಮನ ಸೆಳೆಯುತ್ತಾರೆ. ‘‘ನನ್ನ ಹೆಸರು ವೆಂಕಟಪ್ಪ ಅಲ್ಲ. ಸನತ್‌ಕುಮಾರ’’ ಎಂಬ ಕಥಾಚಿತ್ರ ಕೀಳರಿಮೆಯಿಂದ ಬಳಲಿ ಬೆಂಡಾದ ಒಬ್ಬ ನತದೃಷ್ಟ ವಿದ್ಯಾರ್ಥಿಯ ಮೂಕ ವೇದನೆಯಾಗಿದೆ. ಮನೆ ದೇವರ ಆಶೀರ್ವಾದದಿಂದ ಜನಿಸಿದವನು ಎಂದು ದೇವರ ಹೆಸರನ್ನೇ ನಾಮಕರಣ ಮಾಡುವ ಪೋಷಕರ ಪ್ರೀತಿ-ಮುಂದೆ ಸಹಪಾಠಿಗಳು ವ್ಯಂಗ್ಯವಾಗಿ ಕರೆಯುವ ಹೆಸರಾಗಿ ಪರಿವರ್ತನೆ ಹೊಂದಿ ಆತನಲ್ಲಿ ಕೀಳರಿಮೆ ಎಂಬ ಭೀತಿಯನ್ನುಂಟು ಮಾಡುವ ದುಃಸ್ವಪ್ನವಾಗಿ ಕಾಡುವುದು ದುರಂತಮಯವಾಗಿ ಚಿತ್ರಿತವಾಗಿದೆ. ಆದುದರಿಂದಲೇ ಉಪಾಧ್ಯಾಯರು ‘ವೆಂಕಟಪ್ಪ’ ಎಂದು ಹಾಜರಿ ಕೂಗಿದೊಡನೆಯೇ- ‘ಸನತ್‌ಕುಮಾರ’ ಎಂದು ತನಗೆ ತಾನೇ ಸಾಕ್ಷೀಕರಿಸಿಕೊಂಡ ಹೆಸರನ್ನು ಕರೆಯಲು ತಾಕೀತು ಮಾಡುತ್ತಾನೆ. (ಇದು ರಾಷ್ಟ್ರಕವಿ ಕುವೆಂಪುರವರು ನನ್ನ ಹೆಸರು ‘ಪುಟ್ಟಪ್ಪ’ನಲ್ಲ, ‘ಸ್ವಾಮಿ ವಿವೇಕಾನಂದ’ ಎಂದು ತನ್ನ ಗುರುಗಳಿಗೆ ತಾಕೀತು ಮಾಡಿದ ಪರಿಯಂತೆ ಕಂಡುಬರುತ್ತದೆ. ಹಾಗಾದರೆ ಕುವೆಂಪುರವರು ಕೂಡ ಸ್ಕೂಲ್ ಫೋಬಿಯದಿಂದ ಬಳಲಿದ್ದರೆ? ಎಂಬ ಪ್ರಶ್ನೆಗೆ ಉತ್ತರವನ್ನು ಮನೋವೈದ್ಯ ಭಂಡಾರಿಯವರೇ ನೀಡಬೇಕಿದೆ!)

‘‘ಫೋಬಿಯ ಎಂದರೆ ಯಾವುದಾದರೂ ಒಂದು ವಿಷಯದ ಬಗ್ಗೆ ವಿಪರೀತ ಅರ್ಥಹೀನವಾದ ಹೆದರಿಕೆ. ಫೋಬಿಯ ಇರುವವರು ಆ ಹೆದರಿಕೆ ಇರುವ ಸ್ಥಳದ ಬಗ್ಗೆ ಯೋಚಿಸಿದರೂ ಕೂಡ ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆತಂಕದ ಚಿಹ್ನೆಗಳು ತೋರಿಬರುತ್ತದೆ. ಫೋಬಿಯ ಇರುವವರು ಫೋಬಿಯ ತರುವಂತಹ ಸ್ಥಳಗಳಿಗೆ ಹೋಗುವುದನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳುತ್ತಾರೆ. ಇದನ್ನು
ೞಅಟಜಿಚ್ಞ್ಚಛಿ ಚಿಛಿಜಿಟ್ಟೞಎಂದು ಹೇಳುತ್ತಾರೆ. ‘ಶಾಲಾ ಫೋಬಿಯ’ ಕೂಡ ಒಂದು ಫೋಬಿಯ.. ಶಾಲೆಯನ್ನೇ ನೋಡಿ ಹೆದರುವವರಿದ್ದಾರೆ. ಶಾಲೆ ಬಸ್ಸು ಏರಲು ಹೆದರುವವರಿದ್ದಾರೆ’’ ಎಂದು ತಿಳಿಸುವ ಡಾ. ಪಿ.ವಿ. ಭಂಡಾರಿ ಮಕ್ಕಳ ಜಗತ್ತಿನ ಒಳತೋಟಿಯನ್ನು ಅರ್ಥೈಸುವ ಪ್ರಯತ್ನಕ್ಕೆ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ. ಅಂಕದ ಪರದೆಯನ್ನು ಸರಿಸಿ ಸ್ಕೂಲ್ ಫೋಬಿಯದ ನೈತಿಕ ದರ್ಶನಕ್ಕೆ ಕರೆ ನೀಡುತ್ತಾರೆ. ಈ ಕೃತಿಯನ್ನು ಕುತೂಹಲಕ್ಕಾದರೂ ಪೋಷಕರು ಹಾಗೂ ಶಿಕ್ಷಕರು ಓದಿದ್ದೇಯಾದರೆ ಕಳೆದು ಹೋಗಿರುವ ಮಕ್ಕಳು ಬಂಧನದಲ್ಲಿರುವ ‘ಅಡಗು ತಾಣ’ ದೊರೆಯಬಹುದೇನೋ?

Wednesday, July 20, 2011

ಜಾನಪದ ಅಕಾಡೆಮಿ ಪ್ರಶಸ್ತಿ ಸಮಾರಂಭ

ಜಾನಪದ ಅಕಾಡೆಮಿ ಪ್ರಶಸ್ತಿ ಸಮಾರಂಭ

1

ಗಣಿಯಾಳದಲ್ಲಿ ಸಿಕ್ಕಿಹಾಕಿಕೊಂಡ 33 ಕಾರ್ಮಿಕರನ್ನು ಮೇಲಕ್ಕೆತ್ತಿದ ಅಭೂತಪೂರ್ವ ಘಟನೆಯ ದಾಖಲೆ ಕನ್ನಡದಲ್ಲಿ

. . .
ರಾಷ್ಟಪತಿ ಬಂದರೆಂಬ ಸುದ್ಧಿ ಕೇಳಿ ಎಲ್ಲಾ ಕ್ಯಾಮರಾಗಳೂ ಮಾಧ್ಯಮ ಕೇಂದ್ರಕ್ಕೆ ದೌಡಾಯಸಿದವು.

ಅದುವರೆಗೆ ಸುರಕ್ಷಿತವಾಗಿ ಬಚ್ಚಿಟ್ಟಿದ್ದ ಕೆಂಪಕ್ಷರದ ಚೀಟಿ ಆಂಡ್ರೂ ಸುಗಾರೆಯ ಕೈ ದಾಟಿ ಈಗ ಪಿನೆರೊ ಕೈಗೆ ಬಂತು. ಆಳದಿಂದ ಬಂದ ಆ ಪುಟ್ಟ ಸಂದೇಶವನ್ನು ರಾಷ್ಟ್ರಪತಿ ಎತ್ತಿ ಹಿಡಿದು ಕ್ಯಾಮೆರಾಗಳಿಗೆ ಪ್ರದರ್ಶಿಸಿದರು. `ನಾವು 33 ಜನರೂ ಸುರಕ್ಷಿತವಾಗಿದ್ದೇವೆ’ ಎಂಬರ್ಥದ ಬರಹದ `ಲೋಸ್ 33′ (ಈ 33) ಎಂಬ ಪುಟ್ಟ ಪದ ಇಡೀ ಅಮೆರಿಕಾ ಖಂಡದ ಸಹಸ್ರಾರು ಟಿವಿ ಚಾನೆಲ್ ಗಳಲ್ಲಿ, ಪತ್ರಿಕೆಗಳಲ್ಲಿ ತಲೆಬರಹವಾಗಿ ರಾರಾಜಿಸಿತು.

ಅದೇ ವೇಳೆಗೆ ಡ್ರಿಲ್ಲಿಂಗ್ ಯಂತ್ರದ ತಾಂತ್ರಿಕ ಸಿಬ್ಬಂದಿ ಭಾರೀ ಗಾತ್ರದ ತಂತಿ ಸುರುಳಿಯನ್ನು ಹೊತ್ತು ತಂದಿದ್ದರು. ತಂತಿಯ ತುದಿಯಲ್ಲಿ ಒಂದು ಪುಟ್ಟ ಫೋನ್ ಉಪಕರಣವೊಂದನ್ನು ಕಟ್ಟಿ ಮೆಲ್ಲಗೆ ರಂಧ್ರದ ಮೂಲಕ ಇಳಿ ಬಿಟ್ಟರು. `ಸಹಾಯ ಬರಲಿದೆ, ಗಣಿ ಸಚಿವರು ತುಸು ಹೊತ್ತಿನಲ್ಲೇ ಮಾತಾಡಲಿದ್ದಾರೆ. ನಿಮ್ಮಲ್ಲಿ ಯಾರಾದರೊಬ್ಬರು ರಂಧ್ರದ ಬಳಿ ನಿಂತಿರಿ’ ಎಂಬ ಪುಟ್ಟ ಸಂದೇಶದ ಚೀಟಿಯೊಂದನ್ನು ಫೋನ್ ಜತೆ ಕಟ್ಟಿದ್ದರು. ಅದು ಆ ಮುಷ್ಟಿಯಗಲದ ರಂಧ್ರದಲ್ಲಿ ಮೆಲ್ಲಮೆಲ್ಲನೆ ಇಳಿಯುತ್ತ 680 ಮೀಟರ‍್ ಆಳದಲ್ಲಿದ್ದವರನ್ನು ತಲುಪಿತು. ರೆಕಾರ್ಡಿಂಗ್ ವ್ಯವಸ್ಥೆಯನ್ನೆಲ್ಲ ಮತ್ತೊಮ್ಮೆ ಪರಿಶೀಲಿಸಿದ್ದಾಯಿತು.

ಅರ್ಧ ಗಂಟೆಯಲ್ಲಿ ಪಾತಾಳದಲ್ಲಿ ಫೋನ್ ರಿಂಗಾಯಿತು. ಕಾರ್ಮಿಕ ತಂಡದ ಮುಖ್ಯಸ್ಥ ಲೂಯಿಸ್ ಊರ್ಝುವಾ ಫೋನ್ ಎತ್ತಿಕೊಂಡ.

`ಹೇಗಿದ್ದೀರಾ ಎಲ್ಲ?’ ಸಚಿವರ ಪ್ರಶ್ನೆಗೆ ಕೆಳಿಗಿನಿಂದ ತುಸು ಕ್ಷೀಣವಾದ ಆದರೆ ಸ್ಪಷ್ಟ ಉತ್ತರ ಬಂತು.

`ನಾವೆಲ್ಲಾ ಕ್ಷೇಮವಾಗಿದ್ದೇವೆ. ರಕ್ಷಣೆ ಬರುವುದನ್ನೇ ಕಾಯ್ತಾ ಇದ್ದೇವೆ’ ಉರ್ಝುವಾ ಧ್ವನಿ.

ಗೋಲ್ ಬೋರ್ನ್ ಮುಂದಿನ ಮಾತು ಹೇಳುವ ಮೊದಲೇ ಕೆಳಗಿನಿಂದ ಮಾತು ಕೇಳಿಸಿತು:

`ಸರ‍್, ಒಂದು ಕ್ಷಣ ನಿಲ್ಲಿ. ನಾವೆಲ್ಲ ಇಲ್ಲಿ ಒಟ್ಟಾಗಿ ನಿಂತಿದ್ದೇವೆ’.

ತುಸು ಅವಾಕ್ಕಾದ ಗಣಿಸಚಿವರು ಫೋನನ್ನು ಆಚೆ ಕಿವಿಯಿಂದ ಈಚೆ ಕಿವಿಯತ್ತ ತರುತ್ತಲೇ ಕೆಳಗಿನಿಂದ ತೀರ ಪರಿಚಿತ ವೃಂದಗಾನ ಕೇಳಬಂತು -

`ಪ್ಯೂರೊಚಿಲೀ ಎಸ್ತೂಸಿಲೋ ಅಜುವಾಲ್ಡೊ. . .’

ಗೋಲ್ ಬೋರ್ನ್ ಹಠಾತ್ತನೆ ಸೆಟೆದು ನಿಂತರು. ಸಚಿವರ ಸುತ್ತ ನಿಂತವರಿಗೆ ತುಸು ಗಾಬರಿ. ಏನಾಗಿರಬಹುದು?

ಎರಡು ನಿಮಿಷ ಮೌನವಾಗಿ ಸೆಟೆದೇ ನಿಂತಿದ್ದ ಸಚಿವರು,

`ಓ ಎಲ್ ಸಿಲೋ…. ಓ ಎಲ್ ಸಿಲೊ …. ಕೊಂತ್ರಾಲಾ ಒಪ್ರೆಸೆನ್ ….’ ಎಂದು ರಾಗವಾಗಿ ಹೇಳಿದಾಗ ಎಲ್ಲರಿಗೂ ಅರ್ಥವಾಯಿತು.

ಪಾತಾಳದಲ್ಲಿದ್ದ ಎಲ್ಲ 33 ಜನರೂ ಒಟ್ಟಾಗಿ ಚಿಲಿಯ ರಾಷ್ಟಗೀತೆಯನ್ನು ಹಾಡುತ್ತಿದ್ದರು!

ನೆರೆದಿದ್ದವರ ಕಣ್ಣು ಮಂಜಾಗಿತ್ತು.
….

- ಪುಸ್ತಕದೊಳಗಿನಿಂದ (ಪುಟ : 39-40)

ಏಳುನೂರು ಮೀಟರ‍್ ಆಳದಲ್ಲಿ 33 ಗಣಿಗಾರರು ಸಿಕ್ಕಿಹಾಕಿಕೊಂಡಿದ್ದಾರೆ. ಹದಿನೇಳು ದಿನ ಶ್ರಮಿಸಿ 3 ಅಂಗುಲ ಬೋರ‍್ ರಂಧ್ರ ಕೊರೆದು ನೋಡಿದರೆ ಅವರೆಲ್ಲ ಬದುಕಿರುವುದು ಗೊತ್ತಾಗಿದೆ. ಇನ್ನೂ ದೊಡ್ಡ ರಂಧ್ರ ಕೊರೆದು ಅವರನ್ನು ಮೇಲಕ್ಕೆತ್ತಲು ನಾಲ್ಕು ತಿಂಗಳೇ ಬೇಕು. ಅದುವರೆಗೆ ಆ ಮುಷ್ಟಿಗಾತ್ರದ ರಂಧ್ರದ ಮೂಲಕ ಅವರಿಗೆ ಆಹಾರ-ಔಷಧ ರವಾನಿಸಬೇಕು; ಅವರನ್ನು ಮೇಲಕ್ಕೆತ್ತಲು ರಾಕೆಟ್ ಮಾದರಿಯ ಲಿಫ್ಟ್ ನಿರ್ಮಿಸಬೇಕು.,

2010ರ ಅಕ್ಟೋಬರ‍್ ನಲ್ಲಿ ಚಿಲಿ ಎಂಬ ಪುಟ್ಟ ದೇಶ ಎಲ್ಲರನ್ನೂ ಸುರಕ್ಷಿತ ಮೇಲೆತ್ತಿದಾಗ ಆ ಮಹಾಸಾಹಸದ ವೀಕ್ಷಣೆಗೆ 3000 ವರದಿಗಾರರು ಸೇರಿದ್ದರು. ನೂರು ಕೋಟಿಗೂ ಹೆಚ್ಚು ಜನರು ನೇರ ಪ್ರಸಾರದಲ್ಲಿ ಅದನ್ನು ಕಣ್ಣಾರೆ ನೋಡಿದರು. ಸಾಮಾನ್ಯ ಪ್ರಜೆಗಳ ಈ ಅಸಾಮಾನ್ಯ ಸಾಧನೆ `ಮನುಕುಲಕ್ಕೇ ಸ್ಫೂರ್ತಿದಾಯಕ ಸಾಧನೆ’ ಎಂಬ ಶ್ಲಾಘನೆಗೆ ಪಾತ್ರವಾಯಿತು.

ಕಲ್ಪನೆಗೂ ಮೀರಿದ ಈ ನೈಜಕತೆಯನ್ನು ಥ್ರಿಲ್ಲರ‍್ ಶೈಲಿಯಲ್ಲಿ ಬರೆದ ಸರೋಜಾ ಪ್ರಕಾಶ್ ಭೌತವಿಜ್ಞಾನದ ಉಪನ್ಯಾಸಕಿಯಾಗಿದ್ದವರು. ವಿಜ್ಞಾನವನ್ನು ಎಲ್ಲರಿಗೂ ಅರ್ಥವಾಗುವಂತೆ ಬರೆಯುವ ಇವರು ಚಿಲಿ ಸಾಹಸದ ಕಥೆಯನ್ನು ಎಲ್ಲರಿಗೂ ಇಷ್ಟವಾಗುವಂತೆ ಬರೆದಿದ್ದಾರೆ. ಈ ಅಪೂರ್ವ ಘಟನೆ ಇಂಗ್ಲೀಷ್ ನಲ್ಲಿ ಕಾದಂಬರಿಯಾಗಿಯೋ, ಸಿನೆಮಾ ಆಗಿಯೋ ಬರುವ ಮೊದಲೇ ಕನ್ನಡ ಸಾಹಿತ್ಯಕ್ಕೆ ಸೇರ್ಪಡೆಯಾಗುತ್ತಿದೆ. ಅದು ಹೆಮ್ಮೆಯ ದಾಖಲೆ.

- ನಾಗೇಶ ಹೆಗಡೆ
(ಪುಸ್ತಕದ ಬೆನ್ನುಡಿಯಿಂದ )

ಶೀರ್ಷಿಕೆ: ಚಿಲಿಯ ಕಲಿಗಳು – ಗಣಿ ಪಾತಾಳದಲ್ಲಿ 33 ಜನ 69 ದಿನ ಲೇಖಕರು:ಸರೋಜಾ ಪ್ರಕಾಶ ಪ್ರಕಾಶಕರು: ಭೂಮಿ ಬುಕ್ಸ್ ಪುಟಗಳು:156+8 ಬೆಲೆ:ರೂ.110/-

Saturday, July 16, 2011

ಭೀಮಣ್ಣ ಗಜಾಪುರ ಅವರ ` ನೋವಿನ ಬಣ್ಣಗಳು’ ಪುಸ್ತಕ ಬಿಡುಗಡೆ

https://mail.google.com/mail/?ui=2&ik=64db019aae&view=att&th=13131835aed180b2&attid=0.1&disp=inline&realattid=f_gq65gfdq0&zw

ಕೂಡ್ಲಿಗಿಯ ಪಂಚಾಚಾರ್ಯ ಕಲ್ಯಾಣಮಂಟಪದಲ್ಲಿ 17. 07. 2011 ರಂದು ಬಳ್ಳಾರಿಯ ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಪ್ರಕಟಿಸಿರುವ ಭೀಮಣ್ಣ ಗಜಾಪುರ ಅವರ ` ನೋವಿನ ಬಣ್ಣಗಳು’ ಪುಸ್ತಕ ಬಿಡುಗಡೆ ಇದೆ. ಡಾ. ಮಲ್ಲಿಕಾ ಘಂಟಿ ಅವರು ಬಿಡುಗಡೆ ಮಾಡುತ್ತಾರೆ,ಅರುಣ್ ಪುಸ್ತಕ ಕುರಿತು ಮಾತನಾಡುತ್ತಾರೆ. ವೆಂಕಟಗಿರಿ ದಳವಾಯಿ, ಸಿ. ಮಂಜುನಾಥ ,ಸಿದ್ದರಾಮ ಹಿರೇಮಠ ಮುಂತಾದ ಪತ್ರಕರ್ತರೆಲ್ಲ ಇರುತ್ತಾರೆ. ಈ ಪುಸ್ತಕ ಪತ್ರಿಕೋದ್ಯಮದ ನುಡಿಚಿತ್ರಗಳ ವಿಸ್ತಾರವನ್ನು ಹೆಚ್ಚಿಸುವಂತಿದೆ. ಸಾದ್ಯವಾದರೆ ಬನ್ನಿ

Sunday, July 3, 2011

ಹಾಡು ಪಠ್ಯದಲ್ಲಿ ಓದು ಪಠ್ಯದ ನೆನಪು

ಅರುಣ ಜೋಳದ


ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಅವರು ಸಂಪಾದಿಸಿದ ‘ಬಂಡಿ ಬಂದಾವು ಬಾಳೆ ವನದಾಗೆ’ ಜನಪದ ಗೀತೆ ಸಂಗ್ರಹದ ಪುಸ್ತಕ. ಈ ಕೃತಿಗೆ ೨೦೧೦ ರ ಜಾನಪದ ಅಕಾಡೆಮಿ ಪ್ರಶಸ್ತಿ ಬಂದಿದೆ. ೧೬೩ ಪುಟದ ಈ ಪುಸ್ತಕದಲ್ಲಿ ೩೧ ಜನ ಜನಪದ ಗಾಯಕ, ಗಾಯಕಿಯರು ಹಾಡಿದ ೭೨ ಜನಪದ ಗೀತೆಗಳು, ೨೨ ಪುಟದ ದೀರ್ಘ ಪ್ರಸ್ತಾವನೆಯೂ, ಗೊರುಚ ಅವರ ಮುನ್ನುಡಿಯೂ ಇದೆ. ಈ ಕೃತಿಯನ್ನು ಸಿರಾದ ಗಡಿನಾಡ ಜಾನಪದ ಸಂಪರ್ಕಾಭಿವೃಧ್ಧಿ ಕೇಂದ್ರ ಪ್ರತಿಷ್ಠಾನ ಪ್ರಕಟಿಸಿದೆ.

ಚಿಕ್ಕಣ್ಣ ಅವರು ಹದಿನೈದಕ್ಕೂ ಹೆಚ್ಚಿನ ಜಾನಪದ ಕುರಿತಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಸಂಪಾದನೆ ಮತ್ತು ಜಾನಪದ ಸಂಶೋಧನೆಗೆ ಸಂಬಂಧಿಸಿದವು. ಇದು ಚಿಕ್ಕಣ್ಣ ಅವರ ಜಾನಪದ ಕ್ಷೇತ್ರದ ದುಡಿಮೆ. ಜಾನಪದದಲ್ಲಿ ಕತೆ, ಗೀತೆ ಮುಂತಾದವುಗಳನ್ನು ಸಂಗ್ರಹಿಸಿ ಆ ಸಂಗ್ರಹದ ಸಾರವನ್ನು ಆಧರಿಸಿ ಚರ್ಚೆ ಮಾಡುವ ಸಾಂಪ್ರಾದಾಯಿಕ ಜಾನಪದ ವಿದ್ವತ್ತು ಕನ್ನಡದಲ್ಲಿದೆ. ಇಂತಹ ವಿದ್ವತ್ತಿನ ಮುಂದುವರಿದ ಭಾಗವಾಗಿ ಚಿಕ್ಕಣ್ಣ ಅವರ ಜಾನಪದ ಕೆಲಸಗಳು ನಡೆದಿವೆ. ಇಂತಹದ್ದೆ ವಿದ್ವತ್ತಿನ ಸಾರವನ್ನು ಹೀರಿ ಬಂದ ಪುಸ್ತಕ ‘ಬಂಡಿ ಬಂದಾವು ಬಾಳೆ ವನದಾಗೆ’.

ಇಲ್ಲಿನ ಸಂಗ್ರಹದ ಗೀತೆಗಳು ಲೇಖಕರು ಹೇಳುವಂತೆ ಎಂಟತ್ತು ವರ್ಷದ ಹಿಂದಿನವು, ಹಾಗಾಗಿ ಈ ಹಾಡುಗಳಲ್ಲಿ ಆಧುನಿಕ ಕಾಲದ ಚಲನೆ ಮಾಯವಾಗಿದೆ. ಚಿಕ್ಕಣ್ಣ ಅವರು ಜಾನಪದ ಕ್ಷೇತ್ರಕಾರ್ಯ ಮಾಡಿ ಇಂತಹ ಸಂಗ್ರಹದ ಕೆಲಸ ಮಾಡುವ ಅವರ ಶ್ರಮವನ್ನು ಗೌರವಿಸಬೇಕು. ತುಮಕೂರು ಜಿಲ್ಲೆಯನ್ನು ಆಧರಿಸಿದ ಅವರ ಜಾನಪದ ಬರಹಗಳು, ಇಲ್ಲಿನ ಸಾಂಸ್ಕೃತಿಕ ಪರಿಸರವನ್ನು ತಿಳಿಯಲು ನೆರವಾಗುತ್ತವೆ. ಈಗಾಗಲೆ ಇರುವ ಜಾನಪದ ತಿಳುವಳಿಕೆಗೆ ಚಿಕ್ಕಣ್ಣ ಅವರು (ಹತ್ರಲ್ಲಿ ಹನ್ನೊಂದ್ನೇದು ಎಂಬ ಗಾದೆಯಂತೆ)ಮತ್ತಷ್ಟು ಪರಿಕರಗಳನ್ನು ಸೇರಿಸುತ್ತಿದ್ದಾರೆ. ಇಂತಹ ಸಂಗ್ರಹದ ಕೆಲಸಕ್ಕೂ ವಿಮುಖರಾದ ಜಾನಪದ ವಿದ್ವಾಂಸರ ನಡುವೆ, ಚಿಕ್ಕಣ್ಣ ಈ ಕಾರಣಕ್ಕೆ ಮುಖ್ಯರಾಗುತ್ತಾರೆ. ಇದಕ್ಕಾಗಿ ಅವರು ಅಭಿನಂದನಾರ್ಹರು.

ಈ ಕೃತಿಗೆ ಸುದೀರ್ಘ ಪ್ರಸ್ತಾವನೆ ಇದೆ. ಇದು ಈತನಕದ ಜಾನಪದ ಗೀತೆಗಳ ಅದ್ಯಯನದ ತುಣುಕುಗಳನ್ನು ಉಲ್ಲೇಖಿಸಿ ಅದರ ಮುಂದುವರಿಕೆಯಂತಿದೆ. ಗೀತೆಗಳಲ್ಲಿರುವ ವಿಷಯಗಳನ್ನು ವಿಷಯವಾರು ವಿಂಗಡಿಸಿ ಚರ್ಚಿಸಿದ್ದಾರೆ. ಈ ಪ್ರಸ್ತಾವನೆ ಜಾನಪದ ಗೀತೆಗಳ ತಿಳುವಳಿಕೆಯನ್ನೇನು ವಿಸ್ತರಿಸುವುದಿಲ್ಲ, ಬದಲಾಗಿ ಹಳೆ ನಂಬಿಕೆಗಳಿಗೆ ಬಲ ಕೊಡುತ್ತದೆ. ಈ ಪುಸ್ತಕದ ನೆಪದಲ್ಲಿ ಕೆಲವು ಪ್ರಶ್ನೆಗಳನ್ನು ಚರ್ಚಿಸಲು ಸಾದ್ಯವಿದೆ. ಜನಪದ ಹಾಡು ಪರಂಪರೆಯ ಮೇಲೆ ಹಲವು ಜನಪ್ರಿಯ ಹಾಡು ಪರಂಪರೆಗಳು ಪ್ರಭಾವ ಬೀರಿವೆ. ಆಧುನಿಕ ಕಾಲದ ಸಂಗತಿಗಳು ಗೀತೆಯ ಒಳಹೊಕ್ಕು ಮನೆಮಾಡಿವೆ. ಅದು ಸಹಜ ಪ್ರಕ್ರಿಯೆ. ಇಂತಹ ಪ್ರಭಾವದ ಹಾಡುಗಳನ್ನು ಶುದ್ಧ ಜನಪದ ಗೀತೆಗಳಲ್ಲ ಎಂದು ತಿರಸ್ಕರಿಸಲಾಗುತ್ತದೆ. ಹಾಗದರೆ ಜಾನಪದ ನಿರಂತರ ಕ್ರಿಯಾಶೀಲವಾದುದು ಎಂಬ ನಂಬಿಕೆ ಸುಳ್ಳೆ? ಅದು ಸುಳ್ಳು ಎನ್ನುವುದಾದರೆ ಶುದ್ದ ಜನಪದ ಗೀತೆಗಳ ಕಲ್ಪನೆ ಬರುತ್ತದೆ. ಚಿಕ್ಕಣ್ಣ ಸಂಗ್ರಹಿಸಿದ ಹಾಡುಗಳನ್ನು ನೋಡಿದರೆ ಜಾನಪದ ಎನ್ನುವುದು ಜಡವಾದುದು ಎಂದು ಹೇಳಬಹುದು. ಹೀಗೆ ತಾತ್ವಿಕವಾಗಿ ಜಾನಪದದ ಜಡತೆಯ ಆಶಯವನ್ನು ದ್ವನಿಸುವ ಪುಸ್ತಕಕ್ಕೆ ಜಾನಪದ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಕೊಡುವುದನ್ನು ನೋಡಿದರೆ ಅಕಾಡೆಮಿಯ ಆಲೋಚನ ಕ್ರಮವೂ ಇದಕ್ಕಿಂತ ಭಿನ್ನವಾಗಿಲ್ಲ ಅನ್ನಿಸುತ್ತದೆ.

ಇಲ್ಲಿನ ಗೀತೆಗಳಲ್ಲಿ ಪ್ರಾದೇಶಿಕ ವಿವರಗಳು ಹೆಚ್ಚಿವೆ. ಆದರೆ ಜನಪದ ಗಾಯಕರ ವಯಕ್ತಿಕ ಬದುಕಿನ ನೋವು ನಲಿವು ಮಾಯವಾಗಿದೆ. ಈ ಕೃತಿಯ ಪ್ರಸ್ತಾವನೆಯಲ್ಲೂ ಕ್ಷೇತ್ರಕಾರ್ಯದ ಅನುಭವವಾಗಲಿ, ಹಾಡು ಪರಂಪರೆಗೆ ಜನಪದರು ಪ್ರತಿಕ್ರಿಯಿಸಿದ ಬಗೆಯಾಗಲಿ, ಬದಲಾದ ಕಾಲದಲ್ಲಿ ಜನಸಂಸ್ಕೃತಿಯಲ್ಲಿ ನಡೆದ ಪಲ್ಲಟಗಳ ಕುರಿತಾಗಲಿ ಇಲ್ಲಿ ಚರ್ಚಿಸಿಲ್ಲ. ಹಾಗಾಗಿ ಇಡೀ ಕೃತಿಯಲ್ಲಿ ವರ್ತಮಾನವೆ ಕಾಣೆಯಾದಂತಿದೆ. ಹಳೆಯ ಜನಪದ ಗೀತೆಗಳ ಸಂಗ್ರಹ ಓದಿದವರಿಗೆ ಇಲ್ಲಿನ ಗೀತೆಗಳು ಹೊಸತೆನ್ನಿಸದೆ, ಕೆಲವು ಭಿನ್ನ ಪಾಠಾಂತರಗಳಿವೆ ಅನ್ನಿಸುತ್ತದೆ.

ಈ ಕೃತಿಯಲ್ಲಿ ಓದು ಪಠ್ಯಗಳ ನೆನಪುಗಳಿವೆ. ವಿದ್ವಾಂಸರು ಶಿಷ್ಟ ಜಾನಪದವನ್ನು ಬೇರೆಬೇರೆಯಾಗಿ ನೋಡುವ ಪರಿಪಾಟವಿದೆ. ಆದರೆ ಮೌಖಿಕ ಪಠ್ಯದಲ್ಲಿಯೆ, ಓದು ಪರಂಪರೆಯನ್ನು ನೆನಪಿಸುವ ಸಂಗತಿಗಳು ಗಮನ ಸೆಳೆಯುತ್ತವೆ. ಈ ಬಗೆಯ ಓದು ಪಠ್ಯಗಳನ್ನು ನೆನಪಿಸುವ ಜನಪದ ಗೀತೆಗಳು ಇಲ್ಲವೆಂತಲ್ಲ, ಆದರೆ ಅದನ್ನು ಆಧರಿಸಿದ ಚಿಂತನೆ ಇಲ್ಲ. ಇದು ಹಾಡು ಪರಂಪರೆ ಮತ್ತು ಓದು ಪರಂಪರೆಯ ನಡುವಣ ಒಂದು ವಿಚಿತ್ರವಾದ ಕೊಡುಕೊಳೆ ನಡೆದಿರುವುದಕ್ಕೆ ಸಾಕ್ಷಿಯಂತಿದೆ. ಶಿಷ್ಟ ಕಾವ್ಯ ಬರೆದ ಕುಮಾರ ವ್ಯಾಸನನ್ನು ಪರಿಚಯಿಸುವ ಕಾವ್ಯವೆ ‘ಕುಮಾರವ್ಯಾಸನು ಹಾಡಿದನೆಂದರೆ..ಎಂದು ಆರಂಭವಾಗುವುದನ್ನು ಗಮನಿಸಬೇಕು. ಇಲ್ಲಿನ ಕೆಲವು ಗೀತೆಯ ತುಣುಕುಗಳನ್ನು ಗಮನಿಸಿ:

ಅಂಗಂದ ಮಾತ ಕೇಳೋಳೆ ಬೊಮ್ಮವ್ವ/ ಮಾರಪ್ಪಗೌಡನ ಕರಿಸೋಳೆ/ಹೆಣ್ಣು ಕೆಟ್ಟರೆ ತೌರುಮನೆಗೆ/ ಹೊನ್ನು ಕೆಟ್ಟರೆ ಅಕ್ಕಸಾಲಿಗನ ಮನೆಗೆ/ತೌರಿಗೊಂದು ಓಲೆಯನೆ ಬರೆಸ್ಯಾನೆ/ ಕಾಲಬೇಗ ತಳವಾರ ಹೋದಾನು/ ಏರಿಯ ಹಿಂದಿನ ಗರಿಯ ಓಲೆಯ ತರುತಾನೆ/ಮಾರಪ್ಪನ ಕೈಲಿ ಕೊಡುತಾನೆ/ಗರಿಯಲ್ಲಿ ಅಕ್ಷರವ ಬರೆದೋರೆ/ ಗರಿಯಲ್ಲಿ ಅಕ್ಷರವ ಏನೆಂದು ಬರೆದೋರೆ/ನಿಮ್ಮ ಮನೆಯ ಮಗಳು ಒಡವಿಗೆ ಹೋಗುತಾಳೆ/ಮಾರಪ್ಪಗೌಡ ತಳವಾರನ ಕೈಗೆ ಓಲೆಯ ಕೊಡುತಾನೆ(ಪುಟ-೧೩೪)

ನಿಮ್ಮ ಪುಸ್ತಕವ ತೆಗಿರಯ್ಯ ಜೋಯಿಸರೆ/ಕಂದಮ್ಮನಿಗೆ ಶಕುನಾವ ಕೇಳಬೇಕು/ಶುಕ್ರವಾರ ನಿಸ್ತ್ರಿ ಮೈನೆರೆದವಳೆ/ತಂದೋರ ಮನೆಗೆ ಜಯಜಯಾ/ಒಂದೆ ಕಂದಮ್ಮನ ಫಲವೈತೆ ಒಡವೀಗೆ/ ಹೋಗುತ್ತಾಳೆ ಹೋಗಿ ಬರೆದವಳೇ ಹಣೆಯಾಗೆ/ನನ್ನ ಬಾಳ ಹೆಣ್ಣಿಗೆ ಏನು ಕುಂದಾ ನುಡಿದಯ್ಯಾ/ ನಿಮ್ಮ ಪುಸ್ತಕವ ಬೆಂಕಿಗೆ ಹಾಕಿ ಚೆಂದ ಚೆಂದ ಉರುವಯ್ಯಾ/ಜೋಯಿಸರೇ ಮುಂದ ಬರುವುದ ಒಬ್ಬರೂ ಅರಿಯಾರು (ಪುಟ-೧೨೬)

ಇಲ್ಲಿನ ಉಲ್ಲೇಖಗಳನ್ನು ನೋಡಿದರೆ, ಬರಹ ಸಂವಹನ ಮಾದ್ಯಮವಾದ ಪಲ್ಲಟವನ್ನು ಮೌಖಿಕ ಪರಂಪರೆಯೆ ಹೇಳುತ್ತಿದೆ. ಅದೇ ಬರಹ ಜೋಯಿಸರ ಬಂಡವಾಳವಾದದ್ದನ್ನು ಗುರುತಿಸಲಾಗಿದೆ. ‘ಮುಂದ ಬರುವುದ ಒಬ್ಬರೂ ಅರಿಯಾರು’ ಎಂದು ಜೋಯಿಸರ ಜ್ಯೋತಿಷ್ಯವನ್ನೇ ಲೇವಡಿ ಮಾಡಿ ‘ಪುಸ್ತಕವ ಬೆಂಕಿಗೆ ಹಾಕಿ ಚೆಂದ ಚೆಂದ ಉರುವಯ್ಯಾ’ ಎನ್ನುವ ಪ್ರತಿರೋದ ಇಲ್ಲಿ ವ್ಯಕ್ತವಾಗಿದೆ. ಹೀಗೆ ಮಾತು ಮತ್ತು ಬರಹದ ಪಲ್ಲಟಗಳನ್ನು ಜನಪದ ಗೀತೆಗಳಲ್ಲಿ ಗುರುತಿಸಲು ಸಾದ್ಯವಿದೆ. ಚಿಕ್ಕಣ್ಣ ಅವರು ಜಾನಪದದ ಸಾಂಪ್ರದಾಯಿಕ ಅಧ್ಯಯನ ವಿಧಾನಗಳಿಂದ ಹೊರ ಬರದೆ, ಸಂಗ್ರಹದಂತಹ ಕೆಲಸಕ್ಕಿಂತ ಹೆಚ್ಚಿನದೇನನ್ನೂ ಅವರಿಂದ ನಿರೀಕ್ಷಿಸಲು ಸಾದ್ಯವಿಲ್ಲ.

ಮೇಧಾ ಪಾಟ್ಕರ್


ಹರೀಶ್ ಕೇರ ಹೇಳಿದಂತೆ-

‘ಮೇಧಾ ಪಾಟ್ಕರ್’ ನನ್ನ ಎರಡನೇ ಪುಸ್ತಕ. ಎಸ್.ದಿವಾಕರ್ ಮುಖ್ಯ ಸಂಪಾದಕರಾಗಿರುವ ‘ವಿಖ್ಯಾತರ ವ್ಯಕ್ತಿಚಿತ್ರ ಮಾಲಿಕೆ’ಯಲ್ಲಿ ವಸಂತ ಪ್ರಕಾಶನ ಹೊರ ತಂದಿರುವ ೨೭ ಹೊತ್ತಿಗೆಗಳಲ್ಲಿ ಇದೂ ಒಂದು.

ನನ್ನ ನಂಬಿಕೆ ಹೇಳಬೇಕೆಂದರೆ, ಮೇಧಾ ಪಾಟ್ಕರ್ ಬಗ್ಗೆ ಕನ್ನಡದಲ್ಲಿ ಬಂದಿರುವ ಪ್ರಪ್ರಥಮ ಪುಸ್ತಕ ಇದು. ಈ ಪುಸ್ತಕ ಬರೆಯಲು ಮಾಹಿತಿಗಾಗಿ ಮೇಧಾ ಪಾಟ್ಕರ್ ಬಗ್ಗೆ ಯಾವುದಾದರೂ ಇಂಗ್ಲಿಷ್ ಪುಸ್ತಕ ಬಂದಿದೆಯಾ ಅಂತ ಹುಡುಕಿಕೊಂಡು ಬೆಂಗಳೂರಿನ ಎಲ್ಲ ದೊಡ್ಡ ದೊಡ್ಡ ಇಂಗ್ಲಿಷ್ ಪುಸ್ತಕ ಮಳಿಗೆಗಳಿಗೆ ಎಡತಾಕಿದೆ. ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಗಳಲ್ಲಿ ಬೆವರು ಸುರಿಸಿದೆ. ಮಿತ್ರರಿಗೆಲ್ಲ ಕೇಳಿದೆ.

ಎಲ್ಲೂ ಏನೂ ಸಿಗಲಿಲ್ಲ. ಮೇಧಾ ಅವರ ಸಹ ಚಳವಳಿಕಾರ ಟಿ.ಆರ್.ಭಟ್ ಅವರನ್ನು ಸಂಪರ್ಕಿಸಿದೆ. ಅವರಿಂದ ಮೇಧಾ ಅವರ ಆಪ್ತ ಸಹಾಯಕ ಮಧುರೇಶ್ ಅವರ ದೂರವಾಣಿ ಸಂಖ್ಯೆ ಸಿಕ್ಕಿತು. ಅವರನ್ನೇ ಮಾತಾಡಿಸಿದೆ. ಮೇಧಾ ಬಗ್ಗೆ ಯಾವ ಇಂಗ್ಲಿಷ್ ಪುಸ್ತಕವೂ ಬಂದಿಲ್ಲವೆಂದೂ, ಅರುಣ್‌ಕುಮಾರ್ ತ್ರಿಪಾಠಿ ಎಂಬವರು ಬರೆದ ಹಿಂದಿ ಪುಸ್ತಕವೊಂದಿದೆಯೆಂದೂ, ಅದರ ಕಾಪಿಗಳು ಮುಗಿದಿದ್ದು, ತಮ್ಮ ಬಳಿಯೂ ಇಲ್ಲವೆಂದೂ ಅವರು ಹೇಳಿದರು.

ಹೀಗಾಗಿ, ಮೇಧಾ ಬಗ್ಗೆ ಮೊದಲಿಗೆ ಕನ್ನಡದಲ್ಲಿ ಬರೆದ ಹೆಗ್ಗಳಿಕೆ ನನ್ನದು. ಇಂಗ್ಲಿಷ್‌ನ ಯಾವ ದೊಡ್ಡ ಪ್ರಕಾಶನವೂ ಮಾಡದ ಒಳ್ಳೆಯ ಕೆಲಸವನ್ನು- ಇಂಥ ಮಹನೀಯರ ಬಗ್ಗೆ ಬರೆಸುವ ಮೂಲಕ- ವಸಂತ ಪ್ರಕಾಶನ ಮಾಡಿದೆ. ಈ ಮಾಲಿಕೆಯಲ್ಲಿ ವಂದನಾ ಶಿವ, ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನ್ಸೂರ್ ಮುಂತಾದ ಮಹನೀಯರ ಬಗ್ಗೆ ಕೃತಿಗಳಿವೆ. ಹೆಚ್ಚಿನ ಕೃತಿಗಳನ್ನು ನನ್ನ ಪತ್ರಕರ್ತ ಮಿತ್ರರೇ ಬರೆದಿದ್ದಾರೆ.

ಪುಸ್ತಕಕ್ಕೆ ಮಾಹಿತಿ ಮೂಲ :- ಮೇಧಾ ಒಡನಾಡಿಗಳು, ಇಂಟರ್‌ನೆಟ್.

ಪುಟಗಳು ೭೦, ಬೆಲೆ ೩೦ ರೂ.

ಪ್ರತಿಗಳಿಗಾಗಿ- ವಸಂತ ಪ್ರಕಾಶನ, ಜಯನಗರ, ಬೆಂಗಳೂರು (ಮುರಳಿ ಶ್ರೀನಿವಾಸನ್- ೯೮೮೬೩೯೯೧೨೫)

ನನ್ನನ್ನೂ ಸಂಪರ್ಕಿಸಬಹುದು- ೯೯೮೦೧೮೯೮೪೯.

ಪೀನೀ ಹೂ



ಏಳೆಂಟು ವರ್ಷಗಳ ಹಿಂದೆ ವಿಜಯರಾಘವನ್ ’ಬುಂಡೆ ಹಿಡಿದು’ ಎಂಬ ಅನುವಾದಿತ ಕಾವ್ಯದ ಸಂಕಲನವನ್ನು ಪ್ರಕಟಿಸಿದ್ದರು. ಅದರಲ್ಲಿ ತಾವೋ, ಲಾ ಓತ್ಸು, ಗಿಬ್ರಾನ್, ರಿಲ್ಕ್-ಸೇರಿ ಮೂರು ದಾರಿಯ ತುಂಬಾ ಸುಂದರವಾದ ಕವಿತೆಗಳಿದ್ದವು. ಈಗ ಅವರು ಅಂತಹುದೇ ಮತ್ತೊಂದು ಕಾರ್ಯ ನಿರ್ವಹಿಸಿದ್ದಾರೆ. ನಜೀಂ ಹಿಕ್ಮತ್, ವಾಸ್ಕೋ ಪೋಪ, ಮತ್ತು ಲೋರ್ಕರ ಕವಿತೆಗಳ ಕಂತೆಗಳನ್ನು,ತಾವೋ,ಸೂಫಿ ಮಾರ್ಗಗಳ ಕವಿತೆಗಳನ್ನು ಕನ್ನಡದಲ್ಲಿ ಅನುರೂಪಗೊಳಿಸಿ ಇಲ್ಲಿ ಸಂಕಲಿಸಿದ್ದಾರೆ.

ಎಷ್ಟು ಓದಿದರೂ ದಣಿವಾಗದ ಕಾವ್ಯವಿದು. ಅನುವಾದಕ್ಕೆ ವಿಜಯರಾಘವನ್ ಆಯ್ದುಕೊಳ್ಳುವ ಮಾರ್ಗ ಹಾಸಿಕೊಟ್ಟಿರುವುದಲ್ಲ. ಅದು ಎಂತಿರುವುದೆಂದರೆ, ನನಗೆ ಇದನ್ನು ಹೀಗೆ ಓದಲು ಇಷ್ಟ ಎನ್ನುವಂಥ ಮಾರ್ಗ. ಅದರಲ್ಲಿನ ಕನ್ನಡದಲ್ಲಿ ಲವಲವಿಕೆಯೂ, ನಿರಾಳವೂ, ಆತಂಕವೂ, ವಿಷಣ್ಣತೆಯೂ ತಮ್ಮ ಪಾತ್ರಗಳನ್ನು ಯಥೋಚಿತ ಅಭಿನಯಿಸಿ ಕಾವ್ಯದ ಬದುಕಿನ ಅನನ್ಯ ಋತುಕ್ಷಣಗಳನ್ನು ಹಿಡಿದುಕೊಡುತ್ತವೆ.

ಇವು ಭಾವಾನುವಾದದಲ್ಲಿ ಅದ್ವೈತವಾಗುವ ಲೀಲಾ ರಚನೆಗಳು- ಎಂಬ ’ಬುಂಡೆ ಹಿಡಿದು’ ಕುರಿತ ವಿಮರ್ಶೆಯ ಮಾತು ಇಲ್ಲಿಯೂ ಒಪ್ಪತಕ್ಕದ್ದು. ಈ ಕೃತಿಯ ಓದಿನಿಂದ ನಾನು ಅಪಾರ ಸಂತೋಷವನ್ನು ಸಂಪಾದಿಸಿಕೊಂಡಿದ್ದೇನೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಸಂತೋಷಪಡುತ್ತೇನೆ.

- ಡಾ.ಕೆ.ಸಿ.ಶಿವಾರೆಡ್ಡಿ